ಈ ಬ್ಲಾಗ್‌ಗೆ ಭೇಟಿ ನೀಡಿದ್ದಕ್ಕಾಗಿ ಧನ್ಯವಾದಗಳು. ನಿಮ್ಮ ಅನಿಸಿಕೆ ತಿಳಿಸಿ ಹಾಗೂ ಮತ್ತೊಮ್ಮೆ ಭೇಟಿ ಕೊಡಿ. ತಮ್ಮೆಲ್ಲರಲ್ಲಿ ಸವಿಜ್ಞಾನ ತಂಡದಿಂದ ಮನವಿ: ಕೋವಿಡ್-19 ರ ಸುರಕ್ಷತಾ ಕ್ರಮಗಳನ್ನು ಅನುಸರಿಸಿ 1)ಕಡ್ಡಾಯವಾಗಿ ಮಾಸ್ಕ್ ಧರಿಸಿ, 2)ವ್ಯಕ್ತಿಗತ ಅಂತರ ಕಾಪಾಡಿಕೊಳ್ಳಿ, 3)ಲಸಿಕೆ (ವ್ಯಾಕ್ಸಿನೇಷನ್) ಹಾಕಿಸಿಕೊಳ್ಳಿ 4)ಸಾಧ್ಯವಾದಷ್ಟು ಮನೆಯಿಂದಲೇ ಕೆಲಸ ನಿರ್ವಹಿಸಿ. 5)ಆಗಾಗ್ಗೆ ಕೈಗಳನ್ನು ಸೋಪಿನಿಂದ ತೊಳೆಯಿರಿ. 6)ರೋಗ ಲಕ್ಷಣಗಳು ಕಂಡುಬಂದ ಕೂಡಲೇ ಪರೀಕ್ಷೆ ಮಾಡಿಸಿಕೊಳ್ಳಿ Prevention is Better Than Cure

Thursday, November 4, 2021

ಸಂಪಾದಕರ ಡೈರಿಯಿಂದ

ಸಂಪಾದಕರ ಡೈರಿಯಿಂದ

ಸವಿಜ್ಞಾನ’ ಇ-ಪತ್ರಿಕೆಯ ಹನ್ನೊಂದನೆಯನೆ ಸಂಚಿಕೆಗೆ ವಿಜ್ಞಾನ ಶಿಕ್ಷಕರಿಗೆ ಮತ್ತು ವಿಜ್ಞಾನಾಸಕ್ತರಿಗೆ ಸ್ವಾಗತ ಹಾಗೂ ನಮ್ಮ ಎಲ್ಲ ಓದುಗ, ಲೇಖಕ ಬಂಧುಗಳಿಗೆ ಕನ್ನಡ ರಾಜ್ಯೋತ್ಸವ ಮತ್ತು ದೀಪಾವಳಿಯ ಹಾರ್ದಿಕ ಶುಭಾಶಯಗಳು

 ಈ ಬಾರಿಯ ನವೆಂಬರ್ ತಿಂಗಳ ಸಂಚಿಕೆಯೂ ಹಲವು ಮಾಹಿತಿಪೂರ್ಣ ಲೇಖನಗಳನ್ನು ನಿಮಗಾಗಿ ಹೊತ್ತು ತಂದಿದೆ. ಭೂಮಿಯ ಮೇಲೆ ಜೀವದ ಉಗಮದ ಬಗ್ಗೆ ಹಿಂದೆ ಇದ್ದ ಕಲ್ಪನೆಗಳನ್ನು ಹಾಗೂ ವಾಸ್ತವವನ್ನು ಸೊಗಸಾಗಿ ನಿರೂಪಿಸುವ, ಡಾ. ಎಂ.ಜೆ. ಸುಂದರರಾಂ ಬರೆದಿರುವ ‘ಜೀವ ಹೇಗೆ ಹುಟ್ಟಿದರೇನಂತೆ?’ ಎಂಬ ಲೇಖನದ ಮುಂದುವರೆದ ಭಾಗ ಈ ತಿಂಗಳು ಪ್ರಕಟವಾಗಿದೆ.  ಪ್ರಸ್ತುತ ಸುದ್ದಿಯಲ್ಲಿರುವ ನೀಲ ಕುರಿಂಜಿ ಸಸ್ಯಗಳ ಬಗ್ಗೆ ಕೃಷ್ಣ ಚೈತನ್ಯ ಅವರ ಲೇಖನವಿದೆ. ಗಜಾನನ ಭಟ್ ಬರೆದಿರುವ, ವ್ಯೋಮ ತ್ಯಾಜ್ಯಗಳ ಸಮಸ್ಯೆಯ ಬಗ್ಗೆ ಬೆಳಕು ಚೆಲ್ಲುವ ಒಂದು ಲೇಖನವಿದೆ. ಕರ್ನಾಟಕದಲ್ಲಿ ಚಿರಪರಿಚಿತವಿರುವ ಬೊಂಬೆಯಾಟವನ್ನು ವಿಜ್ಞಾನ ಬೋಧನೆಗೆ ಯಶಸ್ವಿಯಾಗಿ ಅಳವಡಿಸಿಕೊಂಡಿರುವ ಶಿಕ್ಷಕ ಸಿದ್ದು ಬಿರಾದಾರ್ ಅವರ ವಿಶೇಷ ಲೇಖನವಿದೆ.  ವೆಂಕಿ ರಾಘವೇಂದ್ರ ಮತ್ತು ಭಾರತಿ ಮಣೂರ್ ರವರ ಪೋಷಕಾಂಶಗಳೇ ನಿಜವಾದ ಗೇಮ್‌ಚೆಂಜರ್ ಆರೋಗ್ಯದ ಗುಟ್ಟು ಹೇಳುತ್ತವೆ. ತಿಂಗಳ ತೆರೆಮರೆಯ ಸಾಧಕ ಶಿಕ್ಷಕ ಉದಯ ಗಾಂವ್ಕರ್ ರವರ ವ್ಯಕ್ತಿ ಚಿತ್ರಣವಿದೆ. ‘ಸವಿಜ್ಞಾನ’ ತಂಡದ ಪ್ರಶಸ್ತಿ ವಿಜೇತ ಶಿಕ್ಷಕರಿಬ್ಬರ ಪರಿಚಯ ಮಾಡಿಕೊಡಲಾಗಿದೆ. ಇತ್ತೀಚೆಗೆ ಶಿಕ್ಷಣ ಸಚಿವರಿಂದ ಲೋಕಾರ್ಪಣೆಗೊಂಡ ನನ್ನ ಅಂಕಣ ಬರಹಗಳ ಸಂಕಲನ, ‘ಕಲಿಕೆಗೊಂದು ಕೈಪಿಡಿ’ ಪುಸ್ತಕದ ಪರಿಚಯವೂ ಇದೆ. ನಿಮ್ಮ ಮೆಚ್ಚುಗೆಗೆ ಪಾತ್ರವಾಗಿರುವ ವಿಜ್ಞಾನದ ಒಗಟುಗಳು ಹಾಗೂ ಮುದ ನೀಡುವ ವ್ಯಂಗ್ಯ ಚಿತ್ರಗಳೂ ಇವೆ.

ಈ ಸಂಚಿಕೆಯ ಸಿದ್ಧತೆಯ ಹಂತದಲ್ಲಿರುವಾಗ, ಕನ್ನಡ ಚಿತ್ರರಂಗದ ಜನಪ್ರಿಯ ನಾಯಕ ನಟ ಪುನೀತ್ ರಾಜ್‍ಕುಮಾರ್ ಹೃದಯಸ್ತಂಭನದಿಂದ ನಮ್ಮನ್ನಗಲಿದ ಸುದ್ದಿ ಬರಸಿಡಿಲಿನಂತೆ ಬಂದೆರಗಿತು. ನಮ್ಮ ಸರ್ಕಾರಿ ಶಾಲೆಗಳ ರಾಯಭಾರಿಯಾಗಿದ್ದ, ಹಲವಾರು ಶಾಲೆಗಳನ್ನು ದತ್ತು ಪಡೆದಿದ್ದ ಹಾಗೂ ಹೆಣ್ಣು ಮಕ್ಕಳ ಶಿಕ್ಷಣದ ಬಗ್ಗೆ ಅಪಾರ ಕಾಳಜಿ ಹೊಂದಿದ್ದ ಪುನೀತ್ ಅವರಿಗೆ ‘ಸವಿಜ್ಞಾನ’ ತಂಡದ ಪರವಾಗಿ ಭಾವಪೂರ್ಣ ಶ್ರದ್ಧಾಂಜಲಿಯನ್ನು ಅರ್ಪಿಸುತ್ತೇನೆ.

ಡಾ. ಟಿ. ಎ. ಬಾಲಕೃಷ್ಣ ಅಡಿಗ

ಪ್ರಧಾನ ಸಂಪಾದಕರು

3 comments:

  1. ಪುನೀತ್‌ ಗೆ ಭಾವಪೂರ್ಣ ಶ್ರದ್ಧಾಂಜಲಿ. ಬೆಳಗಲಿ ವಿಜ್ಞಾನ ದೀವಿಗೆ. ತಮ್ಮ ಪರಿಶ್ರಮ , ಮಾರ್ಗದರ್ಶನಕ್ಕೆ ಅನಂತ ಧನ್ಯವಾದಗಳು ಸರ್.

    ReplyDelete
  2. Running your site in kannada really a good work

    ReplyDelete
  3. ವೈವಿಧ್ಯತೆಯ ಮಾಹಿತಿಯನ್ನು ಉಣಬಡಿಸುತ್ತಿರುವ ನಿಮಗೆ ಧನ್ಯವಾದಗಳು ಸರ್

    ReplyDelete