ಈ ಬ್ಲಾಗ್‌ಗೆ ಭೇಟಿ ನೀಡಿದ್ದಕ್ಕಾಗಿ ಧನ್ಯವಾದಗಳು. ನಿಮ್ಮ ಅನಿಸಿಕೆ ತಿಳಿಸಿ ಹಾಗೂ ಮತ್ತೊಮ್ಮೆ ಭೇಟಿ ಕೊಡಿ. ತಮ್ಮೆಲ್ಲರಲ್ಲಿ ಸವಿಜ್ಞಾನ ತಂಡದಿಂದ ಮನವಿ: ಕೋವಿಡ್-19 ರ ಸುರಕ್ಷತಾ ಕ್ರಮಗಳನ್ನು ಅನುಸರಿಸಿ 1)ಕಡ್ಡಾಯವಾಗಿ ಮಾಸ್ಕ್ ಧರಿಸಿ, 2)ವ್ಯಕ್ತಿಗತ ಅಂತರ ಕಾಪಾಡಿಕೊಳ್ಳಿ, 3)ಲಸಿಕೆ (ವ್ಯಾಕ್ಸಿನೇಷನ್) ಹಾಕಿಸಿಕೊಳ್ಳಿ 4)ಸಾಧ್ಯವಾದಷ್ಟು ಮನೆಯಿಂದಲೇ ಕೆಲಸ ನಿರ್ವಹಿಸಿ. 5)ಆಗಾಗ್ಗೆ ಕೈಗಳನ್ನು ಸೋಪಿನಿಂದ ತೊಳೆಯಿರಿ. 6)ರೋಗ ಲಕ್ಷಣಗಳು ಕಂಡುಬಂದ ಕೂಡಲೇ ಪರೀಕ್ಷೆ ಮಾಡಿಸಿಕೊಳ್ಳಿ Prevention is Better Than Cure

Saturday, December 4, 2021

ಸವಿಜ್ಞಾನ - ಡಿಸೆಂಬರ್ ತಿಂಗಳ ಲೇಖನಗಳು

ಡಿಸೆಂಬರ್ ತಿಂಗಳ ಲೇಖನಗಳು :

ಸಂಪಾದಕರ ಡೈರಿಯಿಂದ 

೧. ವಿಜ್ಞಾನ ಸಂಶೋಧನೆಯಲ್ಲಿ ಆಕಸ್ಮಿಕಗಳು - ಸೆರೆಂಡಿಪಿಟಿಡಾ. ಎಂ. ಜೆ. ಸುಂದರ್ ರಾಮ್ 

೨. ಕ್ಯೂರಿಭ್ಯಾಂ ನಮಃ - ವಿಜ್ಞಾನ ನಾಟಕವಿಜಯಕುಮಾರ್.‌ ಹೆಚ್‌.ಜಿ

೩. ಜಲವಾಸಿ ಹಕ್ಕಿಗಳುಡಿ. ಕೃಷ್ಣಚೈತನ್ಯ

4. ವಿಶ್ವ ಮಣ್ಣು ದಿನ: 5-ಡಿಸೆಂಬರ್-2021 - ತಾಂಡವಮೂರ್ತಿ.ಎ.ಎನ್ 

5. ಬನ್ನಿ, ಗಣಿತವನ್ನು ಸಂಭ್ರಮಿಸೋಣ... - ಅನಿಲ್ ಕುಮಾರ್ ಸಿ.ಎನ್. 

6. ಬೆರಳು ಗೊಂಬೆಗಳು - ಸಿದ್ದು ಬಿರಾದಾರ

ವಿಜ್ಞಾನದ ಒಗಟುಗಳು : ಡಿಸೆಂಬರ್ 2021 - ರಚನೆ : ರಾಮಚಂದ್ರ ಭಟ್ ಬಿ.ಜಿ.


ವ್ಯಂಗ್ಯಚಿತ್ರಗಳು - ಡಿಸೆಂಬರ್ 2021  - ರಚನೆ: ಶ್ರೀಮತಿ ಜಯಶ್ರೀ ಶರ್ಮ




ಸಂಪಾದಕರ ಡೈರಿಯಿಂದ

ಸಂಪಾದಕರ ಡೈರಿಯಿಂದ  

ಇದು ‘ಸವಿಜ್ಞಾನ’ ಇ-ಪತ್ರಿಕೆಯ ಹನ್ನೆರಡನೆಯ ಸಂಚಿಕೆ. ಒಂದು ವರ್ಷ ಪೂರೈಸುತ್ತಿರುವ ಹಿನ್ನೆಲೆಯಲ್ಲಿ, ನಮ್ಮನ್ನು ಹೃತ್ಪೂರ್ವಕವಾಗಿ ಪ್ರೋತ್ಸಾಹಿಸುತ್ತಿರುವ ನಮ್ಮ ಎಲ್ಲ ಓದುಗ ವಿಜ್ಞಾನ ಶಿಕ್ಷಕರಿಗೆ ಮತ್ತು ವಿಜ್ಞಾನಾಸಕ್ತರಿಗೆ ಹಾಗೂ ಲೇಖಕ ಬಂಧುಗಳಿಗೆ ನನ್ನ ಅನಂತ ವಂದನೆಗಳು.

ಈ ಬಾರಿಯ ಡಿಸೆಂಬರ್ ತಿಂಗಳ ಸಂಚಿಕೆಯೂ ಹಲವು ಉಪಯುಕ್ತ ಹಾಗೂ ಮಾಹಿತಿಪೂರ್ಣ ಲೇಖನಗಳನ್ನು ನಿಮಗಾಗಿ ಹೊತ್ತು ತಂದಿದೆ.  ವಿಜ್ಞಾನಿಗಳು ನಡೆಸುವ ಸಂಶೋಧನೆಯ ಹಾದಿಯಲ್ಲಿ ಕೆಲವೊಮ್ಮೆ ನಿರೀಕ್ಷೆಗೆ ಮೀರಿ ಸಿಕ್ಕ ಆಕಸ್ಮಿಕ ಫಲಿತಾಂಶಗಳು  ಹೇಗೆ  ಹೊಸ ಅವಿಷ್ಕಾರಗಳಿಗೆ ಕಾರಣವಾದುವು ಎಂಬುದನ್ನು ತಿಳಿಸುವ ಡಾ. ಎಂ.ಜೆ ಸುಂದರರಾಂ ಅವರ ಕುತೂಹಲಕರ ಲೇಖನದ ಮೊದಲ ಭಾಗ ಈ ಸಂಚಿಕೆಯಲ್ಲಿದೆ.  ಜಲವಾಸಿ ಹಕ್ಕಿಗಳ ಬಗ್ಗೆ ಮಾಹಿತಿ ನೀಡುವ ಕೃಷ್ಣ ಚೈತನ್ಯ ಅವರ ಲೇಖನವಿದೆ. ಗಣಿತ ಮಾಂತ್ರಿಕ ರಾಮಾನುಜಮ್ ಅವರ ಜನ್ಮ ದಿನದ ಸಂದರ್ಭದಲ್ಲಿ ಅನಿಲ್ ಕುಮಾರ್ ಬರೆದ ಲೇಖವಿದೆ. ಗೊಂಬೆಗಳ ಮೂಲಕ ವಿಜ್ಞಾನ ಕಲಿಸುವ ಶಿಕ್ಷಕ ಬಿರಾದಾರ್ ಅವರು ಈ ಬಾರಿ ಬೆರಳಿನ ಗೊಂಬೆಗಳನ್ನು ನಿಮಗೆ ಪರಿಚಯಿಸಿದ್ದಾರೆ. ವಿಶ್ವ ಮಣ್ಣು ದಿನಕ್ಕೆ ಸಂಬಂಧಿಸಿದಂತೆ ತಾಂಡವಮೂರ್ತಿ ಬರೆದ ಸಾಂದರ್ಭಿಕ ಲೇಖನವಿದೆ. ನಿಮ್ಮಲ್ಲಿ ಬಹು ಮಂದಿ ಬಯಸಿದಂತೆ ವಿಜ್ಞಾನ ನಾಟಕವೊಂದನ್ನು ನಿಮಗಾಗಿ ಬರೆದಿದ್ದಾರೆ, ವಿಜಯಕುಮಾರ್ ಅವರು. ಇವೆಲ್ಲದರ ಜೊತೆಗೆ, ಎಂದಿನಂತೆ ನಿಮ್ಮ ಮೆಚ್ಚುಗೆಗೆ ಪಾತ್ರವಾಗಿರುವ ವಿಜ್ಞಾನದ ಒಗಟುಗಳು ಹಾಗೂ ವ್ಯಂಗ್ಯ ಚಿತ್ರಗಳೂ ಇವೆ.

ಬರುವ ಜನವರಿ 2022ರ ಸಂಚಿಕೆ ನಮ್ಮ ಮೊದಲ ವಾರ್ಷಿಕ ಸಂಚಿಕೆಯಾಗಿ ಪ್ರಕಟವಾಗಲಿದೆ. ನಿಮ್ಮ ಕುತೂಹಲ ತಣಿಸುವ ಹಲವು ಲೇಖನಗಳೊಂದಿಗೆ ಈ ಸಂಚಿಕೆ ಹೊರಬರಲಿದೆ. ಅದಕ್ಕೆ ಸಂಬಂಧಿಸಿದಂತೆ ನಿಮ್ಮ ಸಲಹೆಗಳಿಗೆ ಮುಕ್ತ ಸ್ವಾಗತವಿದೆ. ಮಿಂಚಂಚೆಯ ಮೂಲಕ ತಿಳಿಸಿ. 

ಡಾ. ಟಿ. ಎ. ಬಾಲಕೃಷ್ಣ ಅಡಿಗ

ಪ್ರಧಾನ ಸಂಪಾದಕರು

ವಿಜ್ಞಾನ ಸಂಶೋಧನೆಯಲ್ಲಿ ಆಕಸ್ಮಿಕಗಳು - ಸೆರೆಂಡಿಪಿಟಿ

ವಿಜ್ಞಾನ ಸಂಶೋಧನೆಯಲ್ಲಿ ಆಕಸ್ಮಿಕಗಳು - ಸೆರೆಂಡಿಪಿಟಿ

ಡಾ. ಎಂ. ಜೆ. ಸುಂದರ್ ರಾಮ್ 

ಪ್ರಾಣಿಶಾಸ್ತ್ರ ಪ್ರಾಧ್ಯಾಪಕರು ಮತ್ತು ವಿಜ್ಞಾನ ಸಂವಹನಕಾರರು 


ವಿಜ್ಞಾನದ ಮುನ್ನಡೆಯಲ್ಲಿ ಆಕಸ್ಮಿಕ ಆವಿಷ್ಕಾರಗಳು ಬಹುದೊಡ್ಡ ಪಾತ್ರವನ್ನು ವಹಿಸಿವೆ. ಈ ರೀತಿಯ ಆಕಸ್ಮಿಕ ಆವಿಷ್ಕಾರ ಅನ್ವೇಷಣೆಗಳಿಗೆ ಆಂಗ್ಲಭಾಷೆಯಲ್ಲಿ ಸೆರೆಂಡಿಪಿಟಿ (serendipity) ಎಂದು ಕರೆಯುತ್ತಾರೆ.  ಸೆರೆಂಡಿಪಿಟಿ ಎಂದರೆ ಆಕಸ್ಮಿಕವಾಗಿ ಅದೃಷ್ಟದ ಮತ್ತು ಅನಿರೀಕ್ಷಿತ ಆವಿಷ್ಕಾರಗಳನ್ನು ಮಾಡಬಲ್ಲ ಸಾಮರ್ಥ್ಯ ಎಂದರ್ಥ. ಮೀನು ಹಿಡಿಯಲು ನಿಮಗೆ ಎರೆಹುಳಗಳು ಬೇಕು. ಅದಕ್ಕಾಗಿ ನೀವು ಭೂಮಿಯನ್ನು ಅಗಿಯುತ್ತಿದ್ದಾಗ ಎರೆಹುಳಗಳ ಬದಲು ತೈಲವೇ ಉಕ್ಕಿ ಹರಿಯಲಾರಂಭಿಸಿತು ಎಂದುಕೊಳ್ಳಿ. ಅದೇ ಸೆರೆಂಡಿಪಿಟಿ.

ಕ್ಯೂರಿಭ್ಯಾಂ ನಮಃ - ವಿಜ್ಞಾನ ನಾಟಕ

ಕ್ಯೂರಿಭ್ಯಾಂ ನಮಃ - ವಿಜ್ಞಾನ ನಾಟಕ

ವಿಜಯಕುಮಾರ್.‌ ಹೆಚ್‌.ಜಿ
ಸಹಶಿಕ್ಷಕರು
ಸ.ಪ್ರೌ.ಶಾಲೆ, ಕಾವಲ್‌ ಭೈರಸಂದ್ರ,
ಬೆಂಗಳೂರು ಉತ್ತರ ವಲಯ - 03


“ಕಾವ್ಯೇಷು ನಾಟಕಂ ರಮ್ಯಂ” , ಕಾವ್ಯಗಳಲ್ಲಿ ನಾಟಕವು ಅತ್ಯಂತ ರಮಣೀಯವಾದುದು ಎಂಬ ಮಾತು ತುಂಬಾ ಪ್ರಸಿದ್ಧ ಏಕೆಂದರೆ, “ ನಾಟಕಂ ಭಿನ್ನರುಚೇರ್ಜನಸ್ಯ ಬಹುದಾಪ್ಯೇಕಂ ಸಮಾರಾಧನಂ” ನಾಟಕ ಭಿನ್ನ ರುಚಿಯ ಜನರಿಗೆ ಒಂದೇ ಕಡೆ ವಿವಿಧ ಪ್ರಕಾರಗಳಲ್ಲಿ ರಂಜನೆ ಸಿಗುತ್ತದೆ. ಇಂತಹ ಬಲಿಷ್ಠವಾದ ಮಾಧ್ಯಮವನ್ನು ಬೋಧನೆಗೆ ಪರಿಣಾಮಕಾರಿಯಾಗಿ ಬಳಸಬಹುದು. NEP 2020 ಕೂಡ ಇದನ್ನೇ ಅನುಮೋದಿಸುತ್ತದೆ. ಅನೇಕ ನಾಟಕಗಳನ್ನು ರಚಿಸಿ ವಿಜ್ಞಾನ ವಿಷಯವನ್ನು ಬೋಧಿಸಬಹುದು. ವಿಜ್ಞಾನಿಗಳ ಜೀವನ ಸಾಧನೆ ಪ್ರಸ್ತುತ ಪಡಿಸಲು ಇದು ತುಂಬಾ ಸಹಕಾರಿ. ಈ ಎಲ್ಲಾ ಅಂಶಗಳನ್ನು ಮನಗಂಡ ಸಾರ್ವಜನಿಕ ಶಿಕ್ಷಣ ಇಲಾಖೆ, ವಿಶ್ವೇಶ್ವರಯ್ಯ ಕೈಗಾರಿಕಾ ಮತ್ತು ತಾಂತ್ರಿಕ ಮ್ಯೂಸಿಯಂ ಸಹಯೋಗದೊಂದಿಗೆ ವಿಜ್ಞಾನ ನಾಟಕ ಸ್ಪರ್ಧೆಗಳನ್ನು ಪ್ರತಿವರ್ಷ ಏರ್ಪಡಿಸುತ್ತದೆ. 

ಜಲವಾಸಿ ಹಕ್ಕಿಗಳು

ಜಲವಾಸಿ ಹಕ್ಕಿಗಳು

ಡಿ. ಕೃಷ್ಣಚೈತನ್ಯ 
ವಿಜ್ಞಾನ ಮಾರ್ಗದರ್ಶಕರು ಹಾಗು ವನ್ಯಜೀವಿ ತಜ್ಞರು.

ಗೋಣಿಕೊಪ್ಪಲು ಪ್ರೌಢಶಾಲೆ. ಗೋಣಿಕೊಪ್ಪಲು.

ಕೊಡಗು ಜಿಲ್ಲೆ.


ಬಾನಾಡಿಗಳ ಕುರಿತ ಕೆಲವು ಲೇಖನಗಳನ್ನು ಹಿಂದಿನ ಸಂಚಿಕೆಗಳಲಲ್ಲಿ ಆಸ್ವಾದಿಸಿದಿರಲ್ಲವೇ? ಈಗ ನಮ್ಮ ಬಾನಾಡಿಗಳನ್ನು ಬೆನ್ನಟ್ಟುವ ಕಾರ್ಯವನ್ನು ಮುಂದುವರೆಸೋಣ. ಈ ಪ್ರಕೃತಿ ಹಲವು ಅಚ್ಚರಿಗಳ ಒಡಲು. ಆದರೆ ಅಚ್ಚರಿಗಳನ್ನು ವಿಕೃತಿಗಳಾಗಿಸಿ ಆನುವಂಶೀಯ ವಿಕೃತಿಗಳಾಗಿಸುವ ತನಕ ಈ ಮನುಷ್ಯ ಸುಮ್ಮನಿರಲಾರನೇನೋ? ಇರಲಿ ಸಾಧ್ಯವಾದಷ್ಟು ಮಟ್ಟಿನ ಅರಿವನ್ನು ಜನರಲ್ಲಿ ಮೂಡಿಸಲೆತ್ನಿಸೋಣ.

ವಿಶ್ವ ಮಣ್ಣು ದಿನ: 5-ಡಿಸೆಂಬರ್-2021

ವಿಶ್ವ ಮಣ್ಣು ದಿನ: 5-ಡಿಸೆಂಬರ್-2021

ಮಣ್ಣಿನ ಲವಣೀಕರಣ ತಡೆಗಟ್ಟಿ, ಮಣ್ಣಿನ ಉತ್ಪಾದಕತೆ ಹೆಚ್ಚಿಸಿ

Halt salinization, boost soil productivity

ತಾಂಡವಮೂರ್ತಿ.ಎ.ಎನ್ 

ಸರ್ಕಾರಿ ಪ್ರೌಢಶಾಲೆ

ಕಾರಮಂಗಲ,

ಬಂಗಾರಪೇಟೆ (ತಾ.), ಕೋಲಾರ(ಜಿಲ್ಲೆ)

ಭೂಮಿಯ ಮೇಲೆ ಜೀವ ಸಂಕುಲವನ್ನು ಪೊರೆವ ಅಮೂಲ್ಯ ಸಂಪನ್ಮೂಲವಾದ ಮಣ್ಣು ನಿರವಯವ ಸಸ್ಯ ಪೋಷಕಗಳನ್ನು ಒದಗಿಸುವ ಅಕ್ಷಯ ಪಾತ್ರೆ. ವಿಘಟಕ ಸೂಕ್ಷ್ಮ ಜೀವಿಗಳನ್ನು ಪೋಷಿಸುವ ಅಪೂರ್ವ ಭಂಡಾರ. ಇದು ಜೀವಿಗಳ ವಿಕಾಸಕ್ಕೆ ಕಾರಣವಾದ ಸಾವಯವ-ನಿರವಯವ ವಸ್ತುಗಳ ಅಪೂರ್ವ ಸಂಗಮ. ಇಂತಿಪ್ಪ ಮಣ್ಣು ಮಾನವನೆಂಬ ವಿಲಕ್ಷಣ ಜೀವಿಯ ಉಪದ್ರವದಿಂದ ಇತರ ಅಮೂಲ್ಯ ನೈಸರ್ಗಿಕ ಸಂಪನ್ಮೂಲಗಳಾದ ಗಾಳಿ ಮತ್ತು ನೀರುಗಳಂತೆ ನಲುಗಿದೆ. ಪಾತಾಳದಿಂದ ಬಾಹ್ಯಾಕಾಶದವರೆಗೂ ಚಾಚಿರುವ ತನ್ನ ಕಬಂಧ ಬಾಹುಗಳಿಂದ ಮಣ್ಣಿನ ಸಂರಚನೆಯನ್ನು ಹಾಳುಮಾಡಿದ ಮಾನವ ಅದರ ಫಲವತ್ತತೆ ನಿರಂತರವಾಗಿ ಕ್ಷೀಣಿಸಲು ಕಾರಣವಾಗಿದ್ದು ಸರ್ವವೇದ್ಯ.

ಬನ್ನಿ, ಗಣಿತವನ್ನು ಸಂಭ್ರಮಿಸೋಣ...

ಬನ್ನಿ, ಗಣಿತವನ್ನು ಸಂಭ್ರಮಿಸೋಣ...

ಲೇಖಕರು:   ಅನಿಲ್ ಕುಮಾರ್ ಸಿ.ಎನ್. 
            ಸರ್ಕಾರಿ ಪ್ರೌಢಶಾಲೆ
ರಾಮನಗರ ತಾ
ರಾಮನಗರ ಜಿಲ್ಲೆ

ಡಿಸೆಂಬರ್ 22 ಬಂತೆಂದರೆ ನಮ್ಮ ಗಣಿತ ವಿಷಯ ಶಿಕ್ಷಕರ ಸಂಭ್ರಮಕ್ಕೆ ಎಣೆಯೇ ಇಲ್ಲ. ಅಂದು, ಎಲ್ಲ ಗಣಿತ ಶಿಕ್ಷಕರ ಮನದಲ್ಲಿ ಹಬ್ಬದ ಸಡಗರ ಮನೆ ಮಾಡಿರುತ್ತದೆ. ಆ ದಿನ ಇಷ್ಟೊಂದು ಸಂಭ್ರಮವೇಕೆ? ಅಂದ್ರಾ.... ಈ ಲೇಖನವನ್ನು ಓದಿ, ಸಂಭ್ರಮದ ಹಿಂದಿನ ಗುಟ್ಟನ್ನು ತಿಳಿಯಿರಿ.

ಬೆರಳು ಗೊಂಬೆಗಳು

ಬೆರಳು ಗೊಂಬೆಗಳು

ಸಿದ್ದು ಬಿರಾದಾರ, ವಿಜ್ಞಾನ ಶಿಕ್ಷಕ

ಸರಕಾರಿ ಪ್ರೌಢ ಶಾಲೆ ಚಿಬ್ಬಲಗೇರಿ

ತಾ: ಹಳಿಯಾಳ, ಶಿರಿಸಿ ಶೈಕ್ಷಣಿಕ ಜಿಲ್ಲೆ

ಉತ್ತರ ಕನ್ನಡ


ಆತ್ಮೀಯರೇ, ಹಿಂದಿನ ತಿಂಗಳಲ್ಲಿ ಪ್ರಕಟವಾದ “ಬೊಂಬೆಯಾಟದ ಮೂಲಕ ವಿಜ್ಞಾನ ಕಲಿಕೆಯ” ಬೋಧನಾ ಅನುಭವದ ಲೇಖನವನ್ನು  ತಾವೆಲ್ಲರೂ ಓದಿದ್ದೀರಿ, ತಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ಬರೆದು ತಿಳಿಸಿದ್ದೀರಿ. ಜೊತೆಗೆ ನನಗೆ ಸೂಕ್ತ ಮಾರ್ಗದರ್ಶನವನ್ನೂ ಕೂಡಾ ನೀಡಿದ್ದೀರಿ. ತಮಗೆ ಅಭಿನಂದನೆಗಳು. ಲೇಖನ ಓದಿದ ಅನೇಕ ಜನರ ಅಪೇಕ್ಷೆಯ ಮೇರೆಗೆ ವಿಜ್ಞಾನ ಕಲಿಕೆಯಲ್ಲಿ ಯಾವ ಸಾಮಥ್ರ್ಯಗಳಿಗೆ ಯಾವ ಯಾವ ಬೊಂಬೆಗಳನ್ನು ಬಳಸುತ್ತೀರಿ ಮತ್ತು ಅವುಗಳನ್ನು ಹೇಗೆ ತಯಾರಿಸುತ್ತೀರಿ ಮತ್ತು ತಯಾರಿಸುವ ವಿಧಾನದ ಕುರಿತು ಅನುಭವವನ್ನು ಹಂಚಿಕೊಳ್ಳಲು ಕೇಳಿರುತ್ತೀರಿ. ತಮ್ಮ ನಿರೀಕ್ಷೆಯಂತೆ ಗೊಂಬೆಗಳಲ್ಲಿ ಅನೇಕ ಪ್ರಕಾರಗಳಿರುವುದು ನಿಮಗೆ ತಿಳಿದಿದೆ. ಅದರಲ್ಲಿ  ಕಡಿಮೆ ಖರ್ಚಿನಲ್ಲಿ  ಸುಲಭವಾಗಿ ತಯಾರಿಸಬಹುದಾದ ಬೆರಳು ಬೊಂಬೆಗಳ ಮೂಲಕ ವಿಜ್ಞಾನ ಕಲಿಕೆಯನ್ನು ಹೇಗೆ ಮಾಡಬಹುದು ಎಂಬ ಅನುಭವಗಳನ್ನು ಹಂಚಿಕೊಳ್ಳುತ್ತೇನೆ.

ವಿಜ್ಞಾನದ ಒಗಟುಗಳು : ಡಿಸೆಂಬರ್ 2021

  ವಿಜ್ಞಾನದ ಒಗಟುಗಳು : ಡಿಸೆಂಬರ್ 2021

ನೈಜ ನ್ಯೂಕ್ಲಿಯಸ್ ನನ್ನೊಳಿಲ್ಲ

ಹೆಸರು ಕಾಳ ಜಾತಿಯ ಸಸ್ಯಗಳೇ ನನ್ನ ಆವಾಸ

ಪ್ರೋಟೀನ್ ಗಳಿಗೆ ಬೇಕಾದ ಧಾತು ರೂಪದಲ್ಲಿ

ನಾ ನೀಡುವ ಮನೆ ಬಾಡಿಗೆಯ !!!

ಜಾಣರೇ ಸುಳಿವ ಬಳಸಿ ಪತ್ತೆಹಚ್ಚುವಿರೇ ನನ್ನ?

 

    ರಾಸಾಯನಿಕಗಳಿಗೆ ನಾ ರಾಜ ಆದರೆ ಕಬ್ಬಿಣವಲ್ಲ

    ನನಗೋ ತೀರಾ ನೀರಡಿಕೆ ಶುಷ್ಕನಗೊಳಿಸುವೆ ನಾ

    ನಾನೇ ಕೈಗಾರಿಕೆಗಳ ಗುಣಮಟ್ಟ ನಿರ್ಧಾರಕ

    ಉಪ್ಪಿನೊಡನೆ ಸೇರಲು ಕೊಡುವೆ ಪ್ರಬಲಾಮ್ಲ

    ಸತುವಿನೊಂದಿಗೆ ವರ್ತಿಸಿ ಬಿಡುಗಡೆ ಮಾಡುವೆ ಅತಿಹಗುರ ಧಾತು

    ಬಿಡಿಸಿ ಹೇಳುವೆಯೋ ಒಗಟಿನ ಈ ಸಿಕ್ಕು?

 

ದೇಹವೇನೋ ಮೃದು ಆದರೆ ಮೃದ್ವಂಗಿಯಲ್ಲ

ದುಂಡಗಿನ ದೇಹವಿದೆ ದುಂಡುಹುಳುವಲ್ಲ

ಕಾಲುಗಳೇನೂ ಕಾಣವು ಆದರೆ ನಾ ಹಾವಲ್ಲ.

ದೇಹದಲ್ಲಿವೆ ಉಂಗುರದ ರಚನೆಗಳು ಆದರೆ ಜಿಗಣೆಯಲ್ಲಾ

ಮಣ್ಣ ಫಲವತ್ತತೆ ಹೆಚ್ಚಿಸುವ ನನಗೆ ಕಾಸು ಕೊಡಬೇಕಿಲ್ಲ

ಜಾಣ ಜಾಣೆಯರೇ ನನ್ನ ಗುರುತು ಹಿಡಿಯಬಲ್ಲಿರೇ ?

 

    ನೆಲದ ಮೇಲೆ ನೀ ಚಲಿಸುವುದು ನನ್ನ ಬಲದಿಂದ

    ನಾನಿಲ್ಲದೆ ನೀ ಜಾರಿ ಬೀಳುವೆಯಲ್ಲ

    ನನ್ನ ಬಲ ಹೆಚ್ಚಿದರೂ ನೀ ಚಲಿಸಲಾರೆ

    ಸ್ನೇಹಕಗಳ ಬಳಸಿ ನನ್ನ ಹಿಡಿತದಲ್ಲಿ ಇಡಬಲ್ಲೆ

    ಒಲವಿಂದ ಹೇಳಬಲ್ಲೆಯಾ ಈ ಬಲವ?

 

ಆಮ್ಲದ ಜೊತೆಯೂ ವರ್ತಿಸಬಲ್ಲೆ

ಕ್ಷಾರದ ಜೊತೆಯೂ ವರ್ತಿಸಬಲ್ಲೆ

ನನ್ನಿರುವಲ್ಲಿ ಕಬ್ಬಿಣ ತುಕ್ಕು ಹಿಡಿಯದು

ಕಬ್ಬಿಣದಂತಹ ವಸ್ತುಗಳ ಆಕರ್ಷಣೆಯ ಹೆಚ್ಚಿಸಬಲ್ಲೆ

ವಿದ್ಯುತ್ ಕೋಶದ ಕವಚವಾಗಿರುವೆ

ಜಾಣ ಜಾಣೆಯರೇ ಸುಳಿವ ಹಿಡಿದು ಹೇಳಿರಿ ಕ್ಷಣದಲ್ಲಿ 

ರಚನೆ : ರಾಮಚಂದ್ರ ಭಟ್ ಬಿ.ಜಿ.

ಉತ್ತರಗಳು : ಮುಂದಿನ ಸಂಚಿಕೆಯಲ್ಲಿ

ವ್ಯಂಗ್ಯಚಿತ್ರಗಳು - ಡಿಸೆಂಬರ್ 2021

ವ್ಯಂಗ್ಯಚಿತ್ರಗಳು -  ಡಿಸೆಂಬರ್ 2021

ರಚನೆ: ಶ್ರೀ ವಿಜಯ್‌ಕುಮಾರ್ ಹುತ್ತನಹಳ್ಳಿ 


ರಚನೆ: ಶ್ರೀಮತಿ ಜಯಶ್ರೀ ಶರ್ಮ