ಇದು ‘ಸವಿಜ್ಞಾನ‘ದ ಮೂರನೆಯ ಸಂಚಿಕೆ. ಈ ಹಿಂದಿನ ಎರಡು ಸಂಚಿಕೆಗಳಿಗೆ ನೀವು ಸ್ಪಂದಿಸಿರುವ
ರೀತಿ ನಿಜಕ್ಕೂ ಅನನ್ಯ. ವಿಜ್ಞಾನ ಶಿಕ್ಷಕರೇ ಅಲ್ಲದೆ ವಿಜ್ಞಾನಾಸಕ್ತರ ಗಮನವನ್ನೂ
ಸೆಳೆಯುವುದರಲ್ಲಿ ‘ಸವಿಜ್ಞಾನ’ ಯಶಸ್ವಿಯಾಗಿರುವುದು ಹೆಮ್ಮೆಯ ವಿಷಯ. ನಿಮ್ಮೆಲ್ಲರ ಮೂಲಕ
‘ಸವಿಜ್ಞಾನ’ ಮುಂದಿನ ದಿನಗಳಲ್ಲಿ ಇನ್ನಷ್ಟು ವಿಜ್ಞಾನಾಸಕ್ತರನ್ನು ತಲುಪಲಿ ಎಂಬುದು ನಮ್ಮ ಆಶಯ.
ನಿಮ್ಮಿಂದ ಬಂದಿರುವ ಉತ್ತಮ ಸಲಹೆಗಳನ್ನು ಅಳವಡಿಸಿಕೊಳ್ಳುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ
ಮಾಡುವ ಜವಾಬ್ದಾರಿ ನಮ್ಮದು. ಅದರಂತೆ, ಪ್ರಕಟವಾಗುತ್ತಿರುವ
ಲೇಖನಗಳು ಮತ್ತು ಮಾಹಿತಿ ನಿಮಗೆ ಉಪಯುಕ್ತ ಎನಿಸಿದರೆ ನಮ್ಮ ಶ್ರಮ ಸಾರ್ಥಕ. ನಮ್ಮ ಈ
ಪ್ರಯತ್ನವನ್ನು ನೋಡಿ ರಾಜ್ಯದ ಜನಪ್ರಿಯ ಪ್ರೌಢ ಶಿಕ್ಷಣ ಸಚಿವರಾದ ಸನ್ಮಾನ್ಯ ಎಸ್. ಸುರೇಶ್
ಕುಮಾರ್ ಅವರು ಮೆಚ್ಚುಗೆ ಸೂಚಿಸಿರುವುದು ನಮ್ಮ ಉತ್ಸಾಹವನ್ನು ಇಮ್ಮಡಿಸಿದೆ.
ಮಾರ್ಚ್ ತಿಂಗಳಲ್ಲಿ ಪರಿಸರಕ್ಕೆ ಸಂಬಂಧಿಸಿದ ಎರಡು ಪ್ರಮುಖ ದಿನಾಚರಣೆಗಳಿವೆ. ಮಾರ್ಚ್ 3 ರೆಂದು’ವಿಶ್ವ ವನ್ಯಜಿವಿ ದಿನ” ಹಾಗೂ 22ರಂದು ‘ವಿಶ್ವ ಜಲದಿನ’. ಈ ಸಂಚಿಕೆಯಲ್ಲಿ ಈ ಎರಡು ಪ್ರಮುಖ
ಸಂದರ್ಭಗಳಿಗೆ ಸಂಬಂಧಿಸಿದಂತೆ ಲೇಖನಗಳಿವೆ. ಜೊತೆಗೆ,
ಬೆಳಕಿನ
ಬಗ್ಗೆ ಒಂದು ವಿಶೇಷ ಲೇಖನವೂ ಇದೆ. ವಿಜ್ಞಾನ ಪಾಠಗಳ ಮೂಲಕ ವಿದ್ಯಾರ್ಥಿಗಳಲ್ಲಿ ಜೀವನ
ಮೌಲ್ಯಗಳನ್ನು ಉದ್ದೀಪನಗೊಳಿಸುವ ಬಗ್ಗೆಯೂ ಒಂದು ಲೇಖನ ಇದೆ. ವಿಜ್ಞಾನ ಬೋಧನೆಯಲ್ಲಿ
ತಂತ್ರಜ್ಞಾನದ ಬಳಕೆ ಬಗ್ಗೆ ಬೆಳಕು ಚೆಲ್ಲುವ ಲೇಖನವಿದೆ. ಈ ತಿಂಗಳ ವಿಶೇಷವೆಂದರೆ, ಬ್ಯಾಂಕ್ ಉದ್ಯೋಗಿಯಾಗಿದ್ದುಕೊಂಡು ವಿಜ್ಞಾನ ಮತ್ತು ಗಣಿತ ವಿಷಯಗಳ
ಸಂಪನ್ಮೂಲ ವ್ಯಕ್ತಿಯಾಗಿಅದ್ಭುತ ಸಾಧನೆ
ಮಾಡಿರುವವರ ಪರಿಚಯವೂ ಇದೆ. ಇವೆಲ್ಲದರ ಜೊತೆಗೆ ನಿಮ್ಮ ಮನಸ್ಸನ್ನು ಹಗುರಾಗಿಸಲು ವ್ಯಂಗ್ಯ
ಚಿತ್ರಗಳು ಹಾಗೂ ಮಿದುಳನ್ನು ಚುರುಕಾಗಿಸಲು ಒಗಟುಗಳೂ ಇವೆ.
ಹಾಯ್ ಗೆಳೆಯರೆ, ನಾವೆಲ್ಲರೂ ಸಮೀಪದ
ಅರಣ್ಯಕ್ಕೋ, ಪ್ರಾಣಿ ಸಂಗ್ರಹಾಲಯಕ್ಕೊ ಅಥವಾ
ಉದ್ಯಾನವನಕ್ಕೊ ಭೇಟಿಕೊಟ್ಟಾಗ ಬಹಳ ಕುತೂಹಲದಿಂದ ನೋಡುವುದು ಪ್ರಾಣಿಗಳನ್ನು ಮಾತ್ರ. ಏಕೆಂದರೆ, ನಮಗೆ ವನ್ಯಜೀವಿಗಳೆಂದರೆ ಇರುವ ಕನಿಷ್ಟ ಜ್ಞಾನ ಅಷ್ಟೆ ಅಲ್ಲವೇ? ಹಾಗಾದರೆ, ವನ್ಯಜೀವಿಗಳೆಂದರೇನು? ಅವು ಎಷ್ಟು ಬಗೆಯವು?
ನಾವು
ಸಾಕುತ್ತಿರುವ ಪ್ರಾಣಿಗಳು ಹಿಂದೊಮ್ಮೆ ಕಾಡು ಪ್ರಾಣಿಗಳಾಗಿದ್ದವೆಯೇ? ಅಷ್ಟೆ ಏಕೆ? ಸ್ವತಃ ನಾವು
ವನ್ಯಪ್ರಾಣಿಯಾಗಿದ್ದೆವಾ? ಕಾಡುಪ್ರಾಣಿಗಳನ್ನು
ಕ್ರೂರ ಅಥವಾ ದುಷ್ಟ ಮೃಗಗಳು ಎನ್ನಬಹುದೇ? ಅವುಗಳಿಗಿಂತ ದುಷ್ಟ
ಮೃಗ ಈ ಭೂಮಿಯ ಮೇಲೆ ಇರುವುದೇ? ಎನ್ನುವುದರ ಬಗ್ಗೆ
ಒಂದಿಷ್ಟು ತಿಳಿಯೋಣ ಅಲ್ಲವೇ?
ತಮಸೋಮ ಜ್ಯೋತಿರ್ಗಮಯ . . . ಓ ಬೆಳಕೇ ನೀನೆಷ್ಟು ವಿಸ್ಮಯ...!
ಲೇಖನ: ರೋಹಿತ್ ವಿ ಸಾಗರ್
ಪ್ರಾಂಶುಪಾಲರು,
ಹೊಂಗಿರಣ ಸ್ವತಂತ್ರ ಪದವಿಪೂರ್ವ ಕಾಲೇಜು
ಸಾಗರ
ನಾವು ಏನನ್ನಾದರೂ ಓದುತ್ತಿದ್ದೇವೆ ಅಥವಾ ಯಾರನ್ನಾದರೂ ನೋಡುತ್ತಿದ್ದೇವೆ ಎಂದರೆ ಅದು
ಬೆಳಕಿನ ಸಹಾಯವಿಲ್ಲದೆ ಸಾಧ್ಯವಾಗಲಾರದು. ಇನ್ನೂ ಹೇಳಬೇಕೆಂದರೆ, ನಮ್ಮ ಕವಿಗಳು ನಿಸರ್ಗದ ಕುರಿತು ಪೇಜುಗಟ್ಟಲೆ ಕವನಗಳನ್ನು
ಗೀಚುತ್ತಾರಲ್ಲಾ ಅದಕ್ಕೂ ಈ ಬೆಳಕೇ ಕಾರಣ. ಬೆಳಕಿಲ್ಲದಿದ್ದರೆ ಗುಲಾಬಿಯ ಕೆಂಪು ನಿತ್ಯ
ಹರಿದ್ವರ್ಣದ ಕಂಪು, ಭತ್ತದೆಲೆಯ ಹಸಿರು, ಅದರ ಬುಡದ ಕೆಸರು ಇದೆಲ್ಲವನ್ನೂ ಕತ್ತಲೆಯ ಕರಿಛಾಯೆಯೇ
ನುಂಗಿಬಿಡುತ್ತಿತ್ತು, ಬಣ್ಣ ಬಣ್ಣದ
ಲೋಕವೆಂಬುದು ಒಂದು ಅರ್ಥವಿಲ್ಲದ ಪದವಾಗಿ ಬಿಡುತಿತ್ತು. ಆದ್ದರಿಂದಲೇ ಬೆಳಕಿಗೆ ಪುರಾತನ
ಕಾಲದಿಂದಲೂ ಅಪಾರ ಮನ್ನಣೆ ದೊರಕುತ್ತಿರುವುದು. ಜಗತ್ತಿನ ಅಪೂರ್ವ ಸೌಂದರ್ಯವನ್ನು ಬಿಚ್ಚಿಡುವ
ಮಾಧ್ಯಮವಾದ್ದರಿಂದಲೋ ಏನೋ, ಈ ಬೆಳಕಿನ ಬಗ್ಗೆ ಹಲವು
ಚಿಂತನೆಗಳು ಬಹಳ ಹಿಂದಿನ ಕಾಲದಿಂದಲೇ ನಡೆಯ ತೊಡಗಿದ್ದವು. ಗ್ರೀಕ್ ಮುಂತಾದ ದೇಶಗಳಲ್ಲಿ
ಕ್ರಿಸ್ತಪೂರ್ವದಲ್ಲಿಯೇ ಪ್ಲೇಟೋ ಮತ್ತು ಅರಿಸ್ಟಾಟಲ್ ತಮ್ಮ ಹಲವು ಸಿದ್ಧಾಂತಗಳಲ್ಲಿ ಬೆಳಕಿನ
ಸ್ವರೂಪವನ್ನು ವಿವರಿಸಲು ಪ್ರಯತ್ನಿಸಿದ್ದರು. ಹೆಚ್ಚು ಕಡಿಮೆ ಅದೇ ಕಾಲದಲ್ಲಿ ಭಾರತದ ಆರ್ಯಭಟ, ವರಾಹಿಮಿಹಿರಾ ಮುಂತಾದ ಜ್ಯೋತಿರ್ವಿಜ್ಞಾನಿಗಳು ಸಹ ಈ ಬೆಳಕಿನ ಹಿಂದೆ
ಬಿದ್ದಿದ್ದರು ಎನ್ನುತ್ತವೆ ಐತಿಹ್ಯಗಳು. ನಂತರದ ದಿನಗಳಲ್ಲಿ ಡಿಕಾರ್ಟೆ ಎಂಬ ಭೌತಶಾಸ್ತ್ರಜ್ಞ
ಬೆಳಕಿನ ರಚನೆಯ ಬಗ್ಗೆ ಮೊದಲ ಬಾರಿ ಸಿದ್ಧಾಂತವೊಂದರಲ್ಲಿ ಬೆಳಕು ಎಂಬುದು ಸಣ್ಣ ಸಣ್ಣ ಕಣಗಳಿಂದ
ಮಾಡಲ್ಪಟ್ಟ ಒಂದು ಪ್ರವಾಹ ಎಂದು ಪ್ರತಿಪಾದಿಸುತ್ತಾನೆ. ಅದೇ ಸಿದ್ಧಾಂತವನ್ನು ಇಂಗ್ಲೆಂಡಿನ ಸರ್
ಐಸಾಕ್ ನ್ಯೂಟನ್ ಸ್ವಲ್ಪ ಮಾರ್ಪಡಿಸಿ ನ್ಯೂಟನ್ನನ ಕಣ ಸಿದ್ಧಾಂತ (ಕಾರ್ಪಸ್ಕುಲರ್ ಥಿಯರಿ)ದ ಮೂಲಕ
ಬೆಳಕು ’ಕಾರ್ಪುಸ್ಕಲ್’ಗಳೆಂಬ ಕಣಗಳಿಂದ ಮಾಡಲ್ಪಟ್ಟಿದೆ ಎಂದೂ, ಅವುಗಳು ಮತ್ತು ಗಾಜಿನಂತ ವಸ್ತುಗಳ ಮಧ್ಯೆ ಇರುವ ಆಕರ್ಷಣೆ ಶಕ್ತಿಯಿಂದ
ಬೆಳಕು ಅಂತಹ ವಸ್ತುಗಳ ಮೂಲಕ ಹಾದು ಹೋಗುತ್ತದೆಂದೂ,
ಕನ್ನಡಿಯಂತಹ
ವಸ್ತುವಿನಜೊತೆ ಇರುವ ವಿಕರ್ಷಣೆಯಿಂದ ಅದು
ಪ್ರತಿಫಲನ ಹೊಂದುತ್ತದೆ ಎಂದೂ ಪ್ರತಿಪಾದಿಸುತ್ತಾನೆ. ಆದರೆ ಮುಂದೆ ಅವನೇ ಮಾಡಿದ ’ನ್ಯೂಟನ್ನ
ಉಂಗುರ’ಗಳಂತಹ ಕೆಲ ಬೆಳಕಿನ ಪ್ರಯೋಗಗಳಿಂದ ಈ ಸಿದ್ಧಾಂತದಲ್ಲಿ ದೋಷಗಳಿರುವುದು ಗೊತ್ತಾಗುತ್ತದೆ.
ನಂತರ ಬಂದ ಹೈಗೆನ್ಸ್ ಎಂಬಾತ ಬೆಳಕು ತರಂಗಗಳ ರೂಪದಲ್ಲಿರುತ್ತದೆ ಮತ್ತು ತನ್ನ ಚಲನೆಗೆ
ವಿಶ್ವದೆಲ್ಲೆಡೆ ಪಸರಿಸಿರುವ ಅಗೋಚರ’ಈಥರ್’ ಎಂಬ
ಮಾಧ್ಯಮವನ್ನು ಬಳಸಿಕೊಳ್ಳುತ್ತದೆ ಎಂದು ಪ್ರತಿಪಾದಿಸುತ್ತಾನೆ. ಆದರೆ ಈ ಸಿದ್ಧಾಂತವೂ
ಪ್ರಾಯೋಗಿಕವಾಗಿ ಈಥರ್ ಮಾಧ್ಯಮದ ಇರುವಿಕೆಯನ್ನು ತೋರಿಸಿಕೊಡುವಲ್ಲಿ ಸೋಲೊಪ್ಪಿಕೊಳ್ಳುತ್ತದೆ.
ಜೊತೆಗ ಬೆಳಕು ನಿರ್ವಾತದಲ್ಲಿ ಅಂದರೆ ಯಾವುದೇ ಮಾಧ್ಯಮವಿಲ್ಲದಿದ್ದಲ್ಲಿಯೂ ಹೇಗೆ ಚಲಿಸುತ್ತದೆ
ಎಂಬುದಕ್ಕೆ ಆ ಸಿದ್ಧಾಂತ ವಿವರಣೆ ನೀಡುವುದಿಲ್ಲ.ಕಡೆಗೆ ಮ್ಯಾಕ್ಸವೆಲ್ ಎಂಬಾತ ಬೆಳಕು ಒಂದು ವಿದ್ಯುದ್ಕಾಂತೀಯ ತರಂಗವೆಂದೂ ಅದರಲ್ಲಿ
ವಿದ್ಯುತ್ ಮತ್ತು ಕಾಂತಕ್ಷೇತ್ರಗಳ ಪ್ರಭಾವ ಇರತ್ತವೆಂದೂ ಅವು ಯಾವುದೇ ಮಾಧ್ಯಮದ ಅವಶ್ಯಕತೆ
ಇಲ್ಲದೆ ಚಲಿಸಬಲ್ಲವೆಂದೂ ಪ್ರತಿಪಾದಿಸುತ್ತಾನೆ. ಅಲ್ಲದೆ ಹೆನ್ರಿ ಹರ್ಡ್ಸ್ ಎಂಬಾತ ಈ
ಸಿದ್ಧಾಂತಕ್ಕೆ ಪ್ರಾಯೋಗಿಕ ನಿದರ್ಶನವನ್ನು ಮಾಡಿ ತೋರಿಸುವುದರ ಜೊತೆಗೇ ವಿದ್ಯುತ್ ಮತ್ತು
ಕಾಂತಕ್ಷೇತ್ರಗಳನ್ನು ಬಳಸಿ ವಿದ್ಯುದ್ಕಾಂತೀಯ ತರಂಗಗಳನ್ನು ಉತ್ಪಾದಿಸಬಹುದು ಎಂದೂ
ತೋರಿಸಿಕೊಟ್ಟನು. ಹಾಗಾಗಿ ಬೆಳಕನ್ನು ಒಂದು ವಿದ್ಯುದ್ಕಾಂತೀಯ ತರಂಗವಾಗಿ ಸಾರ್ವತ್ರಿಕವಾಗಿ
ಒಪ್ಪಿಕೊಳ್ಳಲಾಯಿತು. ಆದರೆ ಕೆಲವೊಂದಿಷ್ಟು ಪ್ರಯೋಗಗಳಲ್ಲಿ ಬೆಳಕು ಕಣಗಳ ಪ್ರವಾಹದಂತೆ, ಇನ್ನೂ ಕೆಲವಷ್ಟರಲ್ಲಿ ವಿದ್ಯುದ್ಕಾಂತೀಯ ತರಂಗಗಳಂತೆ
ವರ್ತಿಸುತ್ತಿರುವುದನ್ನು ಮ್ಯಾಕ್ಸ್ ಪ್ಲಾಂಕ್ ಎಂಬಾತ ಗಮನಿಸಿ, ಬೆಳಕಿಗೆ ಕೆಲವೊಮ್ಮೆ ತರಂಗಗಳಂತೆಯೂ ಮತ್ತೆ ಕೆಲವೊಮ್ಮೆ ಕಣಗಳಂತೆಯೂ
ವರ್ತಿಸುವ ಇಬ್ಬಗೆಯ ಸ್ವಭಾವ ಅಥವಾ ದ್ವಂದ್ವ ಸ್ವಭಾವ ಇದೆಯೆಂದು ತೋರಿಸಿಕೊಟ್ಟನು. ಅಲ್ಲದೆ ಆ
ಬೆಳಕಿನ ಕಣಗಳು ನಿರ್ದಿಷ್ಟ ಶಕ್ತಿಯ ಪ್ಯಾಕೆಟ್ಟುಗಳಾಗಿವೆ ಎಂದು ಪ್ರತಿಪಾದಿಸಿದನು.
ಅವಕ್ಕೆಶಕ್ತಿಯ ಪ್ಯಾಕೆಟ್ಟುಗಳೆಂಬ ಅರ್ಥ ಬರುವ
’ಫೋಟಾನ್ ಅಥವಾ ಕ್ವಾಂಟಮ್’ಗಳೆಂಬ ಹೆಸರನ್ನು ನೀಡಿದನು. ಈ ಫೋಟಾನ್ ಸಿದ್ಧಾಂತದಿಂದಲೇ ದ್ಯುತಿ
ವಿದ್ಯುತ್ ಪರಿಣಾಮವನ್ನು ಐನ್ಸ್ಟೈನ್ ಯಶಸ್ವಿಯಾಗಿ ವಿವರಿಸಿ ನೋಬೆಲ್ ಪಡೆದದ್ದು. ಒಟ್ಟಾರೆಯಾಗಿ
ಬೆಳಕಿನ ಈ ದ್ವಂದ್ವ ಸ್ವಭಾವದಿಂದ ಅದರ ನಡತೆಯನ್ನು ನಾವು ಕೆಲವೊಮ್ಮೆ ಸಂಧರ್ಭಕ್ಕನುಗುಣವಾಗಿ
ಮ್ಯಾಕ್ಸ್ವೆಲ್ಲನ ವಿದ್ಯುದ್ಕಾಂತೀಯ ಸಿದ್ಧಾಂತದಿಂದಲೂ, ಇನ್ನೂ ಕೆಲವೊಮ್ಮೆ ಪ್ಲಾಂಕನ ಕ್ವಾಂಟಮ್ ಸಿದ್ಧಾಂತದಿಂದಲೂ ಅರ್ಥಮಾಡಿ ಕೊಳ್ಳಬೇಕಾಗುತ್ತದೆ.
ವಿದ್ಯಾರ್ಥಿಗಳು ದೇಶದ ಅತ್ಯಮೂಲ್ಯ ಆಸ್ತಿ. ಪ್ರತಿಯೊಬ್ಬ ವಿದ್ಯಾಥಿಯನ್ನು ಈ ದೇಶದ ಪ್ರಜ್ಞಾವಂತ ನಾಗರೀಕನನ್ನಾಗಿ ರೂಪಿಸುವಲ್ಲಿ ಪೋಷಕರ ಮತ್ತು ಶಿಕ್ಷಕರ ಪಾತ್ರ ಮಹತ್ತರವಾದುದು.
ಅದರಲ್ಲಿಯೂ ಈ ನಿಟ್ಟಿನಲ್ಲಿ ಶಿಕ್ಷಕರ ಜವಾಬ್ದಾರಿ ಎಲ್ಲ ಹಂತಗಳಲ್ಲಿ ಅತ್ಯಂತ ಪ್ರಮುಖವಾದುದು.
ಸರ್ವಜ್ಞ ತನ್ನ ತ್ರಿಪದಿಯೊಂದರಲ್ಲಿ ಹೇಳಿರುವಂತೆ
Nature is the master. It is the hidden treasure of many teaching or learning strategies. If you nurture your curiosity you will find ample examples for this. Modern man, well equipped with various tools of science and technology, has been evolving many innovative strategies to nurture young minds. In the current scenario, I am trying to throw some light on the current trends in teaching science.
ಸರ್ಕಾರಿ ಪ್ರೌಢಶಾಲೆ, ಮುತ್ತೂರು, ಶಿಡ್ಲಘಟ್ಟ (ತಾ),ಚಿಕ್ಕಬಳ್ಳಾಪುರ (ಜಿ).
“ಯಾರು ಸರ್ ಶಾಸ್ತ್ರಿಗಳಾ?”
“ಹೌದು. ಕೋಲಾರದ ವಿ.ಎಸ್. ಎಸ್,ಶಾಸ್ತ್ರಿಗಳು !!!”
“ಓಹೋ ಅವರಾ? ಅವರಿಗೆ ಗೊತ್ತಿಲ್ಲದ ವಿಷಯವೇ ಇಲ್ಲ ಬಿಡಿ.”
“ಓಹ್ ಹೌದಾ ?”
ಹೌದು ಅವರ ಕೈಗೊಂದು ಬಿಸಾಕಿರುವ ಕಾಗದ,
ಕತ್ತರಿ
ಕೊಟ್ಟು ನೋಡಿ. ಕಣ್ಣೆವೆಯಿಕ್ಕುವಷ್ಟರಲ್ಲೇ ಅವರ ಹಸ್ತದಿಂದ ಕಾಗದದ ಚೂರು ಚಕಚಕನೆ ಕತ್ತರಿಸಲ್ಪಟ್ಟು ಇರುವೆ,
ಜೇಡ, ಮೊದಲಾದ ಆಕೃತಿಗಳು ಕಸವೇ
ರಸವಾದಂತೆ ಮೇಲೆದ್ದು ಜೀವತಳೆಯುತ್ತವೆ. ಮಕ್ಕಳಂತೂ ಬೆರಗುಗಣ್ಣಿಂದ ಅವರ ಮೈದಾಸ್ ಟಚ್
ನೋಡಲು ಬೆಲ್ಲವನ್ನು ಮುತ್ತುವ ಇರುವೆಗಳಂತೆ ಮುತ್ತುತ್ತವೆ. ಮಕ್ಕಳ ಪಾಲಿಗೆ ಕಿಂದರಿಜೋಗಿಯೇ ಈ
ಶಾಸ್ತ್ರಿ ತಾತ !!! ಇನ್ನು ನಿಮ್ಮ ಪಾಲಿಗೆ ?????
ಕಳೆದ ಜನವರಿ 4 ರಂದು ಲೋಕಾರ್ಪಣೆಯಾದ ‘ಸವಿಜ್ಞಾನ’ ಬ್ಲಾಗ್ನ ಮೊದಲ ಸಂಚಿಕೆಯನ್ನು
ನಮ್ಮ ನಿರೀಕ್ಷೆಗೂ ಮೀರಿ ಅತ್ಯಂತ ಆತ್ಮೀಯವಾಗಿ ಬರಮಾಡಿಕೊಂಡಿದ್ದೀರಿ. ಮೆಚ್ಚುಗೆಯ ಮಹಾಪೂರವನ್ನೇ
ಹರಿಸಿದ್ದೀರಿ. ಕೇವಲ ವಿಜ್ಞಾನ ಶಿಕ್ಷಕರೇ ಅಲ್ಲದೆ, ಅನೇಕ
ಮಂದಿ ವಿಜ್ಞಾನಾಸಕ್ತರೂ ನಮ್ಮ ಬ್ಲಾಗ್ಗೆ ಭೇಟಿಕೊಟ್ಟು, ಮೆಚ್ಚುಗೆಯ
ಮಾತುಗಳ ಜೊತೆಗೆ, ಸಲಹೆ, ಸೂಚನೆಗಳನ್ನೂ
ನೀಡಿದ್ದೀರಿ. ನಿಮಗೆಲ್ಲ ನಮ್ಮ ತಂಡದ ಪರವಾಗಿ ಹೃತ್ಪೂರ್ವಕವಾದ ಧನ್ಯವಾದಗಳು. ನಿಮ್ಮ
ಅಭಿಪ್ರಾಯಗಳಿಂದಾಗಿ ನಮ್ಮ ಶ್ರಮ ಸಾರ್ಥಕವಾಗಿದೆ, ಜೊತೆಗೆ
ನಮ್ಮ ಜವಾಬ್ದಾರಿಯೂ ಹೆಚ್ಚಾಗಿದೆ. ಬಂದಿರುವ ಸಲಹೆಗಳನ್ನು ಕ್ರಮೇಣ ಅಳವಡಿಸಿಕೊಂಡು
‘ಸವಿಜ್ಞಾನ’ವನ್ನು ಇನ್ನಷ್ಟು ಆಕರ್ಷಣೀಯವಾಗಿ, ಇನ್ನಷ್ಟು
ಉಪಯುಕ್ತವಾಗಿ ರೂಪಿಸುವ ಸಂಕಲ್ಪ ನಮ್ಮದು.
ಈ ಬಾರಿಯ ಸಂಚಿಕೆಯಲ್ಲಿರಾಷ್ಟ್ರೀಯಮತ್ತು
ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದ ದೇಶದ
ಇಬ್ಬರು ವಿಜ್ಞಾನಿಗಳ ಬಗ್ಗೆ ಸಾಂದರ್ಭಿಕ ಲೇಖನಗಳನ್ನು ಪ್ರಕಟಿಸಲಾಗಿದೆ. ಫೆಬ್ರವರಿ 28ರ ‘ರಾಷ್ಟ್ರೀಯ ವಿಜ್ಞಾನ ದಿನಾಚರಣೆ’ಗೆ ಸಂಬಂಧಿಸಿದಂತೆ,ನೊಬೆಲ್ ಪ್ರಶಸ್ತಿ ಪುರಸ್ಕೃತ ಸರ್ ಸಿ.ವಿ. ರಾಮನ್ ಅವರ
ಬಗ್ಗೆ ಒಂದು ಲೇಖನ ಹಾಗೂ ಸಸ್ಯ ವಿಜ್ಞಾನಿ ಮತ್ತು ವಿಜ್ಞಾನ ಬರಹಗಾರ ಡಾ. ಬಿ.ಜಿ.ಎಲ್.ಸ್ವಾಮಿ
ಅವರ 103ನೇ ಜನ್ಮ ದಿನೋತ್ಸವದ (ಫೆಬ್ರುವರಿ 5) ಸಂದರ್ಭದಲ್ಲಿ ಒಂದು ಲೇಖನವಿದೆ. ನಮ್ಮ
ಮೊದಲ ಸಂಚಿಕೆಯನ್ನು ಲೋಕಾರ್ಪಣೆ ಮಾಡಿದ ಖ್ಯಾತ ವಿಜ್ಞಾನಿ ಸುಧೀಂದ್ರ ಹಾಲ್ದೊಡ್ಡೇರಿ ಅವರೊಂದಿಗೆ
ನಮ್ಮ ತಂಡ ನಡೆಸಿದ ಸಂದರ್ಶನವೂ ಪ್ರಕಟವಾಗಿದೆ. ಜೊತೆಗೆ, ವಿಜ್ಞಾನ
ಶಿಕ್ಷಕರಿಗೆ ಉಪಯುಕ್ತವಾಗಬಲ್ಲ ಹಲವು ಲೇಖನಗಳೂ ಇವೆ. ಎಂದಿನಂತೆ,ಮಿದುಳಿಗೆ ಕಸರತ್ತು ನೀಡುವ ಒಗಟುಗಳು ಹಾಗೂ ಮನಸ್ಸಿಗೆ ಮುದ
ನೀಡುವ ವ್ಯಂಗ್ಯಚಿತ್ರಗಳೂ ಇವೆ. ಈ ಸಂಚಿಕೆಯೂ ನಿಮಗೆ ಮೆಚ್ಚುಗೆಯಾಗಬಹುದೆಂಬ ಆಶಯ ನಮ್ಮದು.
ಇನ್ನೇಕೆ ತಡ ? ಪುಟಗಳನ್ನು ತೆರೆಯಬಹುದಲ್ಲವೇ ?
ಬಹುಮುಖ ಪ್ರತಿಭೆಯ ಸಸ್ಯ ವಿಜ್ಞಾನಿ - ಡಾ. ಬಿ.ಜಿ.ಎಲ್.ಸ್ವಾಮಿ
ಲೇಖಕರು :
ಡಾ. ಟಿ.ಎ.ಬಾಲಕೃಷ್ಣ ಅಡಿಗ
ನಿವೃತ್ತ ಪ್ರಾಂಶುಪಾಲರು ಮತ್ತು ಜೀವಶಾಸ್ತç ಪ್ರಾಧ್ಯಾಪಕರು
ನಾಡು ಕಂಡ
ಅಪೂರ್ವ ಸಸ್ಯ ವಿಜ್ಞಾನಿ ಬಿ.ಜಿ.ಎಲ್.ಸ್ವಾಮಿ ಅವರು ಕನ್ನಡ ಸಾಹಿತ್ಯದದಿಗ್ಗಜರಲ್ಲೊಬ್ಬರಾದ ಡಾ.ಡಿ.ವಿ.ಗುಂಡಪ್ಪ ಅವರ ಪುತ್ರ
ರತ್ನ. ಬೆಂಗಳೂರು ಗುಂಡಪ್ಪ ಲಕ್ಷೀನಾರಾಯಣ ಸ್ವಾಮಿ ಅವರ ಪೂರ್ಣ ನಾಮಧೇಯ. ಬಿ.ಜಿ.ಎಲ್.ಸ್ವಾಮಿ
ಕೇವಲ ಸಸ್ಯ ವಿಜ್ಞಾನಿಯಲ್ಲ. ಅವರದ್ದು ಬಹುಮುಖ ಪ್ರತಿಭೆ. ಸಂಶೋದಕ, ಜನಪ್ರಿಯ
ವಿಜ್ಞಾನ ಲೇಖಕ, ಸಾಹಿತಿ, ಪ್ರಾಧ್ಯಾಪಕ, ದಕ್ಷ
ಆಡಳಿತಗಾರ, ಸಂಗೀತಜ್ಞ, ನೃತ್ಯಪಟು, ಚಿತ್ರಕಾರ, ಬಹು ಭಾಷಾ
ಕೋವಿದ, ಹೀಗೆ, ಹತ್ತು ಹಲವು
ಕ್ಷೇತ್ರಗಳಲ್ಲಿ ಅವರು ತಮ್ಮದೇ ಆದ ಛಾಪನ್ನು ಮೂಡಿಸಿದ್ದಾರೆ. 2021ರ ಫೆಬ್ರವರಿ 5 ರಂದು ಅವರ 103ನೇ ಜನ್ಮ ದಿನ. ಆ ಸಂದರ್ಭಕ್ಕೆ ಅವರ ಸ್ಮರಣೆಯಲ್ಲಿ ಈ
ಲೇಖನ.
ಶ್ರೀಯುತ ಹಾಲ್ದೊಡ್ಡೇರಿ ಸುಧೀಂದ್ರರವರು ನಮ್ಮ ಕನ್ನಡ ನಾಡು ಕಂಡ ಅತ್ಯತ್ತಮ ವಿಜ್ಞಾನಿಗಳಲ್ಲಿಒಬ್ಬರು.
ನಮ್ಮ ಸವಿಜ್ಞಾನ ಮಾಸಪತ್ರಿಕೆಯಬ್ಲಾಗನ್ನು ಲೋಕಾರ್ಪಣೆ ಮಾಡಿದಸಂದರ್ಭದಲ್ಲಿ ಸಂಪಾದಕೀಯ ಮಂಡಲಿ ಅವರೊಂದಿಗೆ
ಸಂದರ್ಶನನಡೆಸಿತು. ಈ ಸಂದರ್ಶನದ ಆಯ್ದ ಭಾಗವನ್ನು ಸವಿಜ್ಞಾನದ ಓದುಗರಿಗಾಗಿ
ನೀಡಿದೆ.
ಸಂದರ್ಶಕರು :
ರಾಮಚಂದ್ರಭಟ್ ಬಿ.ಜಿ.
ಶ್ರೀನಿವಾಸ್
. ಎ
ಗೋಪಾಲ
ರಾವ್ ಸಿ.ಕೆ.
ನಮ್ಮ ಸವಿಜ್ಞಾನ ಮಾಸಪತ್ರಿಕೆಯಬ್ಲಾಗನ್ನು ಲೋಕಾರ್ಪಣೆ ಮಾಡಿದಶ್ರೀಯುತ ಹಾಲ್ದೊಡ್ಡೇರಿ ಸುಧೀಂದ್ರರವರೊಂದಿಗೆ ಸಂಪಾದಕೀಯ ಮಂಡಲಿ
ಸಂದರ್ಶಕರು (ಸಂ): ನಮಸ್ಕಾರ ಸರ್
ಸುಧೀಂದ್ರ ಹಾಲ್ದೊಡ್ಡೇರಿ (ಸು.ಹಾ):ನಮಸ್ಕಾರ
ಸಂ: ತಾಂತ್ರಿಕ ವಿಜ್ಞಾನದ ಹಿನ್ನೆಲೆ ಇರುವ ತಾವು
ಕನ್ನಡದಲ್ಲಿ ಇಷ್ಟು ಸುಲಲಿತವಾಗಿ ಹೇಗೆ ಬರೆಯುತ್ತಿದ್ದೀರಿ? ಕನ್ನಡದಲ್ಲಿಯೇಬರೆಯಬೇಕೆನ್ನುವ ಪ್ರೇರಣೆ ಹಾಗೂ ತುಡಿತ ನಿಮ್ಮಲ್ಲಿ
ಹೇಗೆ ಮೂಡಿತು?
ಸು.ಹಾ: ಪತ್ರಕರ್ತರಾಗಿದ್ದ ನಮ್ಮ ತಂದೆನಾಗೇಶರಾವ್ ರವರು ಮನೆಗೆ ತರಿಸುತ್ತಿದ್ದದೇಶ-ವಿದೇಶಗಳ ಪತ್ರಿಕೆಗಳನ್ನು ಓದಲಾರಂಭಿಸಿದೆ. ಅವುಗಳಲ್ಲಿರುವ ವಿಜ್ಞಾನ ಲೇಖನಗಳು ನನ್ನನ್ನು ಕನ್ನಡದಲ್ಲಿ ಬರೆಯುವಂತೆ ಪ್ರೇರೇಪಿಸಿದವು. ತಂದೆಯವರ ಪ್ರೋತ್ಸಾಹ, ಪ್ರೇರಣೆ ಮತ್ತುಮಾರ್ಗದರ್ಶನದಿಂದ ಕನ್ನಡದಲ್ಲಿ ಬರೆಯಲಾರಂಭಿಸಿದೆ.
ವಿಜಯ ಕಾಲೇಜಿನಲ್ಲಿ ಪಿಯುಸಿ ಓದುತ್ತಿದ್ದಾಗ ಡಾ||ಬಿ.ಜಿ.ಎಲ್.ಸ್ವಾಮಿಯವರ ನಮ್ಮ ಹೊಟ್ಟೆಯಲ್ಲಿದಕ್ಷಿಣ
ಅಮೇರಿಕಎನ್ನುವ ಪುಸ್ತಕ ನನ್ನಲ್ಲಿ ಜೀವವಿಜ್ಞಾನದ ಕಡೆಗೂ ಆಸಕ್ತಿಯನ್ನು ಚಿಗುರಿಸಿತು. ಅತ್ಯಂತ ಸರಳವಾಗಿ, ಹೃದ್ಯವಾಗಿ, ನವಿರಾದ ತಿಳಿ
ಹಾಸ್ಯದೊಂದಿಗಿನ ಅವರ ಶೈಲಿ ನನ್ನಲ್ಲಿ ಅಪಾರವಾದ ಆಸಕ್ತಿಯನ್ನು ಬೆಳೆಸಿತು.
ಸಂ: ಸರ್, ಇಂದು
ಮಾತೃಭಾಷೆಯಲ್ಲಿ ಶಿಕ್ಷಣ ಎನ್ನುವ ಕೂಗನ್ನು ಕೇಳುತ್ತಿದ್ದೇವೆ. ಚೀನಾ, ಜಪಾನ್ಗಳಂತಹ ದೇಶಗಳಲ್ಲಿಮಾತೃಭಾಷಾಶಿಕ್ಷಣಇರುವಂತೆ ನಮ್ಮಲ್ಲಿಕನ್ನಡ ಮಾಧ್ಯಮದಲ್ಲಿಉನ್ನತವಿಜ್ಞಾನಶಿಕ್ಷಣನೀಡಬಾರದೇಕೆ? ಈಕುರಿತಾಗಿ
ನಿಮ್ಮ ಅಭಿಪ್ರಾಯವೇನು?
ಸು.ಹಾ: ಅನೇಕ ಭಾಷೆಗಳು, ಧರ್ಮ, ಸಂಸ್ಕೃತಿಗಳಿರುವ
ಭಾರತ ದೇಶದಲ್ಲಿಒಂದೇ ಭಾಷೆಯನ್ನು ಆಯ್ಕೆ ಮಾಡಿಕೊಳ್ಳುವಪರಿಸ್ಥಿತಿಯಲ್ಲಿಲ್ಲ.
ಹಾಗೆಯೇ ಇಂದು ಪ್ರಪಂಚವೇ
ಗ್ಲೋಬಲ್ ವಿಲೇಜ್ ಆಗಿರುವಸಂದರ್ಭದಲ್ಲಿ ಇಂಗ್ಲೀಷ್ ಭಾಷೆ ವಿಶ್ವದ ಬಹುತೇಕ ರಾಷ್ಡ್ರಗಳಲ್ಲಿಸಂವಹನಮಾಧ್ಯಮವಾಗಿದೆ. ಮಗುವಿಗೆ ಹೊಸ ಭಾಷೆ ಕಲಿಯುವುದು ಅತ್ಯಂತ ಸುಲಭಎನ್ನುವುದುನಮ್ಮೆಲ್ಲರ ಅನುಭವ.ಹೆಚ್ಚೆಚ್ಚು ಭಾಷೆಗಳನ್ನು ಕಲಿತಷ್ಟು ಅವಕಾಶಗಳೂ ಹೆಚ್ಚು. ಒಂದು
ಹಂತದವರೆಗೆ ಮಾತೃಭಾಷೆಯಲ್ಲಿ ಶಿಕ್ಷಣ ಅತ್ಯಂತ ಅಗತ್ಯ . ನಂತರದ ಶಿಕ್ಷಣವನ್ನು ಅಂತಾರಾಷ್ಟ್ರೀಯಭಾಷೆಯಲ್ಲಿ ಕಲಿಯುವುದು ಅಪೇಕ್ಷಣೀಯ.
ಆಂಗ್ಲಭಾಷೆಯಂತೆಕನ್ನಡ ಸಶಕ್ತಭಾಷೆಯಾಗಿ ಬೆಳೆಯಲು ಸಾಕಷ್ಟು ಕಾಲಾವಕಾಶ ಬೇಕು.ವಿದ್ಯಾರ್ಥಿಗಳಿಗೂ ಪೋಷಕರಿಗೂ ತಮ್ಮ ಕಲಿಕೆಯ ಮಾಧ್ಯಮವನ್ನು ಆಯ್ಕೆ ಮಾಡಿಕೊಳ್ಳುವ ಅವಕಾಶವಿರಲಿ. ಕಲಿಕಾ ಮಾಧ್ಯಮದ ಮೇಲೆ ನಿರ್ಬಂಧ ಹೇರುವುದು ಸರಿಯಲ್ಲ ಎನ್ನುವುದು ನನ್ನ ವೈಯಕ್ತಿಕ ಅಭಿಪ್ರಾಯ.
ಸವಿಜ್ಞಾನ
ಬಳಗದೊಂದಿಗೆ ಖ್ಯಾತ ವಿಜ್ಞಾನಿ ಹಾಲ್ದೊಡ್ಡೇರಿ ಸುಧೀಂದ್ರ
ಸಂ: ಸರ್, ಇಂದು ಭಾರತದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಿಜ್ಞಾನಿಗಳು, ಇಂಜಿನಿಯರ್ ಗಳು, ವೈದ್ಯರು ಹೊರಬರುತ್ತಿದ್ದಾರೆ. ಆದಾಗ್ಯೂ ವಿಜ್ಞಾನ ಕ್ಷೇತ್ರದಲ್ಲಿ ಹೆಚ್ಚಿನ ಸಂಶೋಧನೆ
ಆಗದಿರಲು ಕಾರಣವೇನು?
ಸು.ಹಾ: ಇದಕ್ಕೆ ಕಾರಣಗಳು ಹಲವಾರು. ವಿಶ್ವದ ಇತರ
ದೇಶಗಳಿಗೆ ಹೋಲಿಸಿದಲ್ಲಿಶಿಕ್ಷಣ ಮತ್ತು ಸಂಶೋಧನಾ
ಕ್ಷೇತ್ರಕ್ಕೆ ಮೀಸಲಿಟ್ಟ ಹಣದ ಪ್ರಮಾಣ ಅತ್ಯಂತ ಕಡಿಮೆ. ಮೂಲವಿಜ್ಞಾನ ಕಲಿಕೆಗೆ, ಸಂಶೋಧನೆಗಳಿಗೆ ನಾವು ಹೆಚ್ಚಿನ ಮಹತ್ವವನ್ನು ನೀಡಬೇಕು. ವಿಜ್ಞಾನ-ತಂತ್ರಜ್ಞಾನಗಳು ಸದೃಢವಾಗಿದ್ದರೆ ಮಾತ್ರ ಭಾರತದೇಶ
ವಿಶ್ವ ಮನ್ನಣೆಯನ್ನು ಪಡೆಯುತ್ತದೆ. ಹಲವಾರು ವೈರುಧ್ಯಗಳ ನಡುವೆಯೂ ನಾವು ಸಾಕಷ್ಟು ಸಾಧನೆಯನ್ನು
ಮಾಡಿದ್ದೇವೆ ಎನ್ನುವುದು ಮೆಚ್ಚತಕ್ಕ ಅಂಶವೇ.
ಸಂ: ಸರ್, ಇತ್ತೀಚಿಗೆ ಕೀರ್ತಿಶೇಷರಾದನಿಮ್ಮ
ಗುರುಗಳಾದ ರೊದ್ದಂ ನರಸಿಂಹರವರ ಬಗ್ಗೆ ಒಂದಷ್ಟು ಮಾಹಿತಿ ಕೊಡಿ.
ಸು.ಹಾ: ಕನ್ನಡ, ಸಂಸ್ಕೃತ, ಇಂಗ್ಲಿಷ್
ಭಾಷೆಗಳಲ್ಲಿಪ್ರಕಾಂಡಪಂಡಿತರಾಗಿದ್ದ ರೊದ್ದಂ ನರಸಿಂಹರವರು ಸಂಸ್ಕೃತದ ಯಾವುದೇ ಶ್ಲೋಕಕ್ಕೂ ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ವಿವರಣೆ ನೀಡಬಲ್ಲವರಾಗಿದ್ದರು. ದ್ರವ ಚಲನ ವಿಜ್ಞಾನ ಅಥವಾ ಫ್ಲೂಯಿಡ್
ಮೆಕ್ಯಾನಿಕ್ಸ್ ಹಾಗೂ ಹವಾಮಾನ ವಿಜ್ಞಾನದಲ್ಲಿ ಅವರಿಗೆ
ವಿಶೇಷವಾದ ಪರಿಣತಿ ಇತ್ತು.ನಾವಿಂದು ವೈಮಾನಿಕ ವಿಜ್ಞಾನಕ್ಷೇತ್ರದಲ್ಲಿ ಬಳಸುತ್ತಿರುವ
ಅಂಕಿಅಂಶಗಳ ಡೇಟಾಬೇಸ್ಗಳು ರೊದ್ದಂರವರ ಸಂಶೋಧನೆಯ ಫಲ. ಅನೇಕ ವಿಜ್ಞಾನಿಗಳ ಸಹಕಾರದೊಂದಿಗೆ ಒಂದು ವ್ಯಾಪಕಅಧ್ಯಯನವನ್ನು ನಡೆಸಿ ನಮ್ಮ ದೇಶಕ್ಕೇ
ವಿಶಿಷ್ಟವಾದಂತಹ ಪರಾಮರ್ಶನ ಆಕರ ತಾಪಮಾನ (ಸ್ಟ್ಯಾಂಡರ್ಡ್ ರೆಫರೆನ್ಸ್)ವನ್ನು ನಮ್ಮವೈಮಾನಿಕಕ್ಷೇತ್ರಕ್ಕೆನೀಡಿದ್ದಾರೆ. ರೊದ್ದಂರವರ ಪ್ರಯತ್ನದಿಂದ ಭಾರತದಲ್ಲಿ ಸೂಪರ್ ಕಂಪ್ಯೂಟರ್ಗಳ ಯುಗ ಪ್ರಾರಂಭವಾಯಿತು. ನೋಬಲ್ ಪ್ರಶಸ್ತಿಗೆ
ಯೋಗ್ಯರಿದ್ದ ರೊದ್ದಂರವರ ಕೊಡುಗೆ ಅಪಾರ.
ಸಂ: ವಿಜ್ಞಾನದ ಹೆಸರಿನಲ್ಲಿ ಧರ್ಮ, ಮೂಢನಂಬಿಕೆಗಳ ಅನೇಕ ತಪ್ಪು ಕಲ್ಪನೆಗಳೂ ನುಸುಳಿವೆ. ಇಂದಿನ ನಮ್ಮ ಬಹುತೇಕ ವಿಜ್ಞಾನ ಸಾಹಿತ್ಯ ಪಾಶ್ಚಾತ್ಯರಿಂದ
ಬಂದಿದ್ದು. ಹಾಗಾಗಿ ನಮ್ಮ ಕೊಡುಗೆ ಯಾವುದು ಇಲ್ಲ ಎನ್ನುವಂತಹ
ಕೀಳರಿಮೆ ಇದೆ. ಈ ಕುರಿತು ನಿಮ್ಮ ಅಭಿಪ್ರಾಯವೇನು?
ಸು.ಹಾ: ನಾನು ಕಂಡಂತೆ ಜಪಾನ್ ದೇಶದಲ್ಲಿ
ಮೊದಲ ಐದು ವರ್ಷಗಳ ಶಿಕ್ಷಣದಲ್ಲಿ ಅವರಿಗೆ ಯಾವುದೇ ವಿದೇಶೀ
ವಿಜ್ಞಾನಿಯನ್ನು ಪರಿಚಯಿಸುವುದೇ ಇಲ್ಲ. ಅವರ ವಿದ್ಯಾರ್ಥಿಗಳಿಗೆ ಕೇವಲ ಜಪಾನ್ ವಿಜ್ಞಾನಿಗಳ ಸಾಧನೆಗಳು, ಅವರ ಸಂಶೋಧನೆಗಳ ಪರಿಚಯವನ್ನು ಮಾಡಿಕೊಡುತ್ತಾರೆ.
ದೌರ್ಭಾಗ್ಯವಶಾತ್
ಭಾರತದಲ್ಲಿ ಜೆ.ಸಿ. ಬೋಸ್ರವರು ಮಾರ್ಕೋನಿಗಿಂತಲೂ ಮೊದಲೇ ರೇಡಿಯೋ ಕಂಡುಹಿಡಿದಿದ್ದರೂ ನಮ್ಮ ಯಾವುದೇ ಪಠ್ಯಪುಸ್ತಕ ಈ ಕುರಿತಾಗಿ ಮಾಹಿತಿಯನ್ನು ಕೊಡುವುದಿಲ್ಲ. ಇವತ್ತಿಗೂ ಕೂಡ ರೇಡಿಯೋವನ್ನು ಕಂಡುಹಿಡಿದವರು ಯಾರು ಎಂದರೆನಾವುಮಾರ್ಕೋನಿಎಂದೇಹೇಳುತ್ತೇವೆ. ಹಾಗೆಯೇಸತ್ಯೇಂದ್ರನಾಥಬೋಸ್ರವರುಐನ್ಸ್ಟೀನ್ರವರಜೊತೆಗೂಡಿಸಾ ಕಷ್ಟುಸಂಶೋಧನೆಗಳನ್ನುಮಾಡಿದ್ದಾರೆ. ಆದರೆನಾವುಅವರಸಂಶೋಧನೆಗಳಬಗ್ಗೆ, ಅವರ ಹೆಸರಿನ ಕಣ - ಬೋಸಾನ್ಗಳ ಬಗ್ಗೆ ಹೆಚ್ಚುತಿಳಿಸುವುದಿಲ್ಲ.
ಪ್ರೊಫೆಸರ್
ಬಾಲಕೃಷ್ಣ ಅಡಿಗ: ಹಾಗೆಯೇಪರಾಶರಮಹರ್ಷಿಯವರುಕೃಷಿಗೆಸಂಬಂಧಿಸಿದಂತೆಸಾಕಷ್ಟುಮಹತ್ವದಅಂಶಗಳನ್ನುತಿಳಿಸಿದ್ದಾರೆ. ಅಷ್ಟೇಅಲ್ಲದೇಜೀವಕೋಶ, ಪತ್ರಹರಿತ್ತು
ಕುರಿತ ಮಾಹಿತಿಗಳನ್ನು ನೀಡಿದ್ದರು. ನಾವಿದನ್ನುನಮ್ಮಮಕ್ಕಳಿಗೆತಿಳಿಸಿಹೇಳದಿರುವುದು ಇತಿಹಾಸಕ್ಕೆ ಮಾಡುತ್ತಿರುವ ಅಪಚಾರವೇ ಸರಿ.
ಅಟಾಮಿಕ್ಥಿಯರಿಯಬಗ್ಗೆಹೇಳುವಾಗನಾವುಕಣಾದಮಹರ್ಷಿಗಳಕೊಡುಗೆಯನ್ನುವಿದ್ಯಾರ್ಥಿಗಳಿಗೆತಿಳಿಸಬೇಕು. ವಿಕ್ರಮ್ ಸಾರಾಭಾಯಿ, ಹೋಮಿ ಜಹಾಂಗೀರ್
ಬಾಬಾರವರಂತಹ ಶ್ರೇಷ್ಠವಿಜ್ಞಾನಿಗಳನ್ನು ಸಿ.ವಿ.ರಾಮನ್ರವರು
ಭಾರತಕ್ಕೆಬರುವಂತೆಪ್ರೇರೇಪಿಸಿದ್ದರು.ವಿಶೇಷವೆಂದರೆಸಿ.ವಿ.ರಾಮನ್ರವರರಾಮನ್ಎಫೆಕ್ಟ್ಆಧಾರದಮೇಲೆಅನೇಕಸಂಶೋಧನೆಗಳುನಡೆಯುತ್ತಲೇ
ಇವೆ. ನೊಬೆಲ್ಪ್ರಶಸ್ತಿಬಂತುಎನ್ನುವುದನ್ನುಬಿಟ್ಟರೆಸಿ.ವಿ.ರಾಮನ್ರವರ ಸಮಗ್ರಕೊಡುಗೆಗಳನ್ನುನಾವು ಚರ್ಚಿಸುವುದಿಲ್ಲ. ದ್ರವ್ಯದಕಣಗಳಲ್ಲಿಸೂಕ್ಷ್ಮಚಲನೆಯನ್ನುಗುರುತಿಸಲುಇಂದಿಗೂಕೂಡನಾವುರಾಮನ್ರವರಸಂಶೋಧನೆಯನ್ನೇ ನಾವು ಬಳಸುತ್ತಿದ್ದೇವೆ. ಇವೆಲ್ಲವೂ ನಮ್ಮ ದೇಶದ ಬಗ್ಗೆ ಪ್ರೀತಿ, ಅಭಿಮಾನ ಬೆಳೆಸಿಕೊಳ್ಳಲು, ಕೀಳರಿಮೆಯಿಂದ ಹೊರಬರಲುಸಹಾಯಕ .
ಸಂ: ಸರ್, ನಿಮ್ಮ
ಸಂಶೋಧನಾ ಕ್ಷೇತ್ರದ ಬಗ್ಗೆಒಂದಷ್ಟು ಮಾಹಿತಿಯನ್ನು ನೀಡಿ.
ಸು.ಹಾ: ಯಾವುದೇದೇಶತನ್ನನ್ನುತಾನು ರಕ್ಷಣೆಮಾಡಿಕೊಳ್ಳುವಸಾಮರ್ಥ್ಯ ಹೊಂದಿರಬೇಕು. ನಮ್ಮ
ದೇಶರಕ್ಷಣೆಗಾಗಿಮತ್ತೊಂದು ದೇಶವನ್ನು ಅವಲಂಬಿಸಿದಲ್ಲಿನಾವುಮತ್ತೊಮ್ಮೆಪರತಂತ್ರಕ್ಕೆಒಳಗಾಗಬೇಕಾಗುತ್ತದೆ. ಯುದ್ಧವಿಮಾನಗಳನ್ನುತಯಾರಿಸುವುದುಅಥವಾತರಿಸಿಕೊಳ್ಳುವುದುಅಂತಂದರೆಸಾವಿರಾರುಕೋಟಿಗಳವ್ಯವಹಾರ.ಒಂದುವೇಳೆವಿದೇಶಗಳಿಂದಯುದ್ಧವಿಮಾನಗಳನ್ನುತರಿಸಿದರೆನಮ್ಮಹಣವಿದೇಶಕ್ಕೆ ಹೋಗುತ್ತದೆ.ನಮ್ಮದೇಶದಲ್ಲಿಯೇಹೂಡಿಕೆಯಾದರೆ ಆ ಹಣವು ಇಲ್ಲೇ ವಿನಿಯೋಗವಾಗುತ್ತದೆ. ಈ ಕಾರ್ಯದಲ್ಲಿ ಸುಮಾರು 80ಕ್ಕೂಹೆಚ್ಚಿನಬೃಹತ್ಕೈಗಾರಿಕೆಗಳು, 60ಕ್ಕೂಹೆಚ್ಚಿನವಿದ್ಯಾಸಂಸ್ಥೆಗಳುಹಾಗೂಅನೇಕಖಾಸಗಿಸಂಸ್ಥೆಗಳುಭಾಗಿಯಾಗಿವೆ. ಈ
ಹಣ ದೇಶದಲ್ಲೇ ಹೂಡಿಕೆಯಾದರೆ ಹಣದಹರಿವುಇಲ್ಲೇನಡೆದುಅನೇಕಸಂಸ್ಥೆಗಳುಅಭಿವೃದ್ಧಿಹೊಂದುತ್ತವೆ. ಇದರಿಂದ ಉದ್ಯೋಗಾವಕಾಶಗಳುಹೆಚ್ಚಿ ಆರ್ಥಿಕ ಸ್ವಾವಲಂಬನೆ
ಉಂಟಾಗುತ್ತದೆ.
ಆಕಾಶದಲ್ಲಿತೇಜಸ್ವಿಮಾನಹಾರಾಡುತ್ತಿರುವುದನ್ನುನೋಡಿದಾಗದೇಶದ ರಕ್ಷಣೆಗೆ ನಾನು ಪುಟ್ಟ
ಕೊಡುಗೆ ನೀಡಿದೆ ಎನ್ನುವ ಭಾವನೆ ನನ್ನಲ್ಲಿ ಹೆಮ್ಮೆಯನ್ನು ಉಂಟುಮಾಡಿ ನನ್ನನ್ನು ಪುಳಕಿತನನ್ನಾಗಿಸುತ್ತದೆ. ಇಲ್ಲಿಕೆಲಸಮಾಡುತ್ತಿದ್ದಾಗಎ.ಪಿ.ಜೆಅಬ್ದುಲ್ಕಲಾಮರುನನಗೆ ಮಾರ್ಗದರ್ಶಕರಾಗಿದ್ದರು.ಅವರೊಂದಿಗೆಕೆಲಸ
ಮಾಡಿದ ಸಂತೃಪ್ತಿನನಗಿದೆ.
ಸು.ಹಾ: ನಾನುವಿಜಯಕಾಲೇಜಿನಲ್ಲಿಪಿಯುಸಿ ಓದುತ್ತಿದ್ದಾಗ ನಮಗೆ ಪ್ರಾಣಿಶಾಸ್ತ್ರ ಬೋಧಿಸುತ್ತಿದ್ದ
ಅಡಿಗರು ಜೀವಶಾಸ್ತ್ರದ ಕಡೆಗೆ ಆಸಕ್ತಿ ಮೂಡಿಸಿದರು.
ಪ್ರಥಮಕನ್ನಡವಿಜ್ಞಾನಸಮ್ಮೇಳನದಲ್ಲಿನಾನುನನ್ನಪ್ರಬಂಧವನ್ನುಮಂಡಿಸಿದ್ದುಗುರುಗಳಎದುರಿನಲ್ಲಿಯೇ.ಗುರುಗಳುರಾಷ್ಟ್ರೋತ್ಥಾನಕ್ಕೆಸಂಬಂಧಿಸಿದಅನೇಕಶಿಕ್ಷಕರಮತ್ತುವಿದ್ಯಾರ್ಥಿಗಳವಿಜ್ಞಾನ ಸಮ್ಮೇಳನಗಳಲ್ಲಿ,ತರಬೇತಿಗಳಲ್ಲಿನನ್ನನ್ನುತೊಡಗಿಸಿಕೊಂಡಿದ್ದಾರೆ. ಅವರುಪ್ರಾಂಶುಪಾಲರಾಗಿದ್ದಕಾಲೇಜಿಗೂನನ್ನನ್ನುಕರೆಸಿದ್ದಾರೆ. ಅವರುಈ ಇಳಿವಯಸ್ಸಿನಲ್ಲೂಕೂಡಇಷ್ಟುಲವಲವಿಕೆಯಿಂದ
ಕೆಲಸ ಮಾಡುತ್ತಿರುವುದು ,ಇನ್ನಷ್ಟುಕೆಲಸಮಾಡಬೇಕೆನ್ನುವಉತ್ಸಾಹ , ಪ್ರೇರಣೆನೀಡುತ್ತಿದೆ.
ನೀವುವಿಜ್ಞಾನಿಯಾಗಿ,ಪ್ರೊಫೆಸರ್ಆಗಿಆಂಗ್ಲ ಭಾಷೆಯಲ್ಲೇ ವ್ಯವಹರಿಸಬೇಕಾಗಿದ್ದರೂ ಕೂಡಇಷ್ಟು ಸರಾಗವಾಗಿಕ್ಲಿಷ್ಟಕರ ತಾಂತ್ರಿಕ ಪಾರಿಭಾಷಿಕ ಪದಗಳನ್ನು ಕನ್ನಡದಲ್ಲಿಯೇ
ಬಳಸುತ್ತಿರುವುದು ನಮ್ಮೆಲ್ಲರಿಗೂ ಅಚ್ಚರಿ ತಂದಿದೆ ಸರ್. ಇದು ನಮ್ಮೆಲ್ಲರಿಗೂ ಒಂದು ದೊಡ್ಡಪ್ರೇರಣೆ ಸರ್.
ಸಂ: ಧನ್ಯವಾದಗಳು ಸರ್. ನಮ್ಮ ವಿಜ್ಞಾನ ಮಾಸಿಕ ಇ - ಪತ್ರಿಕೆಯ ಬ್ಲಾಗನ್ನು ಲೋಕಾರ್ಪಣೆ ಮಾಡಿದ್ದಲ್ಲದೇ ಸಂದರ್ಶನದಲ್ಲಿಸ್ಫೂರ್ತಿಯುತ ಮಾಹಿತಿಗಳನ್ನು ನೀಡಿದಿರಿ.ಡಿ.ಆರ್.ಡಿ.ಓ.ದಂತಹ ದೇಶದ
ಹೆಮ್ಮೆಯಸಂಸ್ಥೆಗಳಲ್ಲಿ ಸಂಶೋಧಕರಾಗಿ , ದೇಶಕ್ಕೆಅನನ್ಯ ಕೊಡುಗೆಯನ್ನುಕೊಟ್ಟಂತಹನೀವುವಿಜ್ಞಾನವನ್ನುಜನಪ್ರಿಯಗೊಳಿಸಲುಲೇಖನಗಳಮೂಲಕಪ್ರಯತ್ನಿಸುತ್ತಿದ್ದೀರಿ . ನಿಮ್ಮನ್ನುಸಂದರ್ಶಿಸುವಒಂದುಅವಕಾಶದೊರೆತದ್ದಕ್ಕಾಗಿ ನಿಮಗೂ ನಮ್ಮ ಪ್ರೀತಿಯ ಗುರುಗಳೂ ಮಾರ್ಗದರ್ಶಕರೂ
ಆದ ಶ್ರೀಯುತಬಾಲಕೃಷ್ಣಅಡಿಗರಿಗೂಹೃತ್ಪೂರ್ವಕವಂದನೆಗಳು.
ಧನ್ಯವಾದಗಳು.
ಸುಧೀಂದ್ರ ಹಾಲ್ದೊಡ್ಡೇರಿ ಅವರೊಂದಿಗಿನ ಸಂಪೂರ್ಣ ಸಂದರ್ಶನವನ್ನು ಇಲ್ಲಿ ವೀಕ್ಷಿಸಿ.