ಜೀವ ಸಂಕುಲ-ಭವಿಷ್ಯದ ಸಂಪತ್ತು -ಅವುಗಳ ಸಂರಕ್ಷಣೆ ನಮ್ಮೆಲ್ಲರ ಜವಾಬ್ದಾರಿ
ಲೇಖನ:ಬಸವರಾಜ ಎಮ್ ಯರಗುಪ್ಪಿ
ಶಿಕ್ಷಕರು ಮತ್ತು ಹವ್ಯಾಸಿ ಬರಹಗಾರರು
ಸಾ.ಪೊ ರಾಮಗೇರಿ, ತಾಲೂಕು ಲಕ್ಷ್ಮೇಶ್ವರ,
ಜಿಲ್ಲಾ ಗದಗ, ದೂರವಾಣಿ 9742193758. ಮಿಂಚಂಚೆ :basu.ygp@gmail.com
ಮಾರ್ಚ್ 03-"ವಿಶ್ವ ವನ್ಯಜೀವಿಗಳ ದಿನ" ತನ್ನಿಮಿತ್ತ ವಿಶೇಷ ಲೇಖನ.
"ವನ್ಯಜೀವಿ ಎಂದರೆ ಮನುಷ್ಯನು ನಿರ್ಮಿಸಲು ಸಾಧ್ಯವಿಲ್ಲ. ಅದು ಒಮ್ಮೆ ಹೋದರೆ, ಅದು ಶಾಶ್ವತವಾಗಿ ಹೋಗುತ್ತದೆ" ಎಂದು ಜಾಯ್ ಆಡಮ್ಸನ್ ಅವರು ಪ್ರಸ್ತುತ ಮತ್ತು ಭವಿಷ್ಯದ ಜೀವ ಸಂಕುಲಗಳ ಕುರಿತು ಸಾರ್ವತ್ರಿಕವಾಗಿ ಒಪ್ಪಿಕೊಳ್ಳುವಂತಹ ಮಾತಾಗಿದೆ ಎಂದು ಹೇಳಿದ್ದಾರೆ.ವನ್ಯಜೀವಿಗಳು ಪರಿಸರ ಸಮತೋಲನ ಕಾಯ್ದುಕೊಳ್ಳಲು ನಾವು ವನ್ಯಜೀವಿಗಳನ್ನು ರಕ್ಷಿಸಬೇಕು ಏಕೆಂದರೆ ನೇರವಾಗಿ ಅಥವಾ ಪರೋಕ್ಷವಾಗಿ ನಮ್ಮ ಜೀವನವು ಅವುಗಳ ಮೇಲೆ ಅವಲಂಬಿತವಾಗಿದೆ ಕಳೆದ ಎರಡು ದಶಕಗಳಿಂದ, ಪ್ರಪಂಚದ ವಿವಿಧ ಭಾಗಗಳಲ್ಲಿ ವನ್ಯಜೀವಿ ಸಸ್ಯ ಸಂಕುಲ ಹಾಗೂ ಪ್ರಾಣಿ ಸಂಕುಲದ ಕುರಿತಾಗಿ ಜಾಗೃತಿ ಮೂಡಿಸಲು ವಿಶ್ವದಾದ್ಯಂತ ಪ್ರತಿವರ್ಷ ಮಾರ್ಚ್ 03 ರಂದು "ವಿಶ್ವ ವನ್ಯಜೀವಿಗಳ"ದಿನವನ್ನು ಆಚರಿಸಲಾಗುತ್ತದೆ. ವನ್ಯಜೀವಿಗಳು ಹಾಗೂ ವನ್ಯಜೀವಿ ವೈವಿದ್ಯತೆಯ ಪ್ರಾಮುಖ್ಯತೆಯ ತಿಳುವಳಿಕೆ ಹೆಚ್ಚಿಸಲು ಈ ದಿನವನ್ನು ಮೀಸಲಿಡಲಾಗಿದೆ. ನಮ್ಮ ಗ್ರಹದಲ್ಲಿನ ಜೀವಸಂಕುಲದ ವಿಶೇಷತೆ, ಸೌಂದರ್ಯವನ್ನು ಅರ್ಥಮಾಡಿಕೊಳ್ಳುವುದೇ ಈ ದಿನದ ಮತ್ತೊಂದು ವಿಶೇಷ ಎಂದೂ ಹೇಳಬಹುದಾಗಿದೆ.
ವನ್ಯಜೀವಿಗಳು ಎಂದರೆ ಸಾಕಲು-ಆಗದ ಸಸ್ಯಗಳು, ಪ್ರಾಣಿಗಳು ಮತ್ತು ಇತರ ಜೀವಿಗಳನ್ನೊಳಗೊಂಡಿದೆ.ಕಾಡುಪ್ರಾಣಿಗಳನ್ನು ತಮ್ಮ ಉಪಯೋಗಕ್ಕಾಗಿ ಸಾಕುವ, ಬೆಳೆಸುವ ಅಥವಾ ಪಳಗಿಸುವ ಭೂಮಿಯ ಎಲ್ಲಾ ಭಾಗಗಳಲ್ಲಿ ನಡೆದಿದೆ.
ಹಿನ್ನಲೆ :
ಡಿಸೆಂಬರ್ 2003 ರಲ್ಲಿ, ವಿಶ್ವ ಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ತನ್ನ 68 ನೇ ಅಧಿವೇಶನದಲ್ಲಿ ಮಾರ್ಚ್ 03 ಅನ್ನು ವಿಶ್ವ ವನ್ಯಜೀವಿ ದಿನವೆಂದು ಘೋಷಿಸಿತು. ಬದಲಾಗುತ್ತಿರುವ ಪ್ರಕೃತಿಯ ಬಗ್ಗೆ ಜಾಗೃತಿ ಹಾಗೂ ಮಾಹಿತಿ ನೀಡಲು ವಿಶ್ವ ವನ್ಯಜೀವಿ ದಿನವನ್ನು ಆಚರಿಸಲಾಗುತ್ತದೆ. ಮಾನವನ ಚಟುವಟಿಕೆಗಳಿಂದ ವೃಕ್ಷಗಳು, ಪ್ರಾಣಿಗಳು ಹಾಗೂ ಇತರೆ ಜೀವಿಗಳು ಸಮಸ್ಯೆ ಎದುರಿಸುತ್ತಿರುವ ವಿಚಾರ ತಿಳಿಹೇಳಲು ಕೂಡ ಈ ದಿನವನ್ನು ಗಮನಿಸಿಕೊಂಡು ಆಚರಿಸಲಾಗುತ್ತದೆ.
ವನ್ಯಜೀವಿಗಳ ಪ್ರಾಮುಖ್ಯತೆ:
ವನ್ಯಜೀವಿಗಳು ಪ್ರಕೃತಿಯ ಸಮತೋಲನವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತವೆ.ವನ್ಯ ಜೀವಿಗಳ ಸಂರಕ್ಷಣೆ ನಮ್ಮೆಲ್ಲರ ಹಕ್ಕು ಮತ್ತು ಕರ್ತವ್ಯವಾಗಿದೆ.
#ವನ್ಯಜೀವಿಗಳು ಎದುರಿಸುತ್ತಿರುವ ಸಮಸ್ಯೆಗಳು:
*ಗಣಿಗಾರಿಕೆ, ಕೃಷಿ ಮತ್ತು ಕಟ್ಟಡ ನಿರ್ಮಾಣದಂತಹ ಅನೇಕ ಮಾನವ ಚಟುವಟಿಕೆಗಳು ನಿರಂತರವಾಗಿ ವನ್ಯಜೀವಿಗಳನ್ನು ಅಪಾಯಕ್ಕೆ ತಳ್ಳುತ್ತಿವೆ.
*ನಾವು ಹಲವಾರು ಮರಗಳನ್ನು ಕಡಿಯುತ್ತಿದ್ದೇವೆ ಇದರಿಂದಾಗಿ ಹೆಚ್ಚು ನೆಲವನ್ನು ತೆರವುಗೊಳಿಸಿ, ಹಲವಾರು ರಸ್ತೆಗಳನ್ನು ನಿರ್ಮಿಸುತ್ತಿದ್ದೇವೆ.
*ನಾವು ಲಕ್ಷಾಂತರ ಜೀವಿಗಳ ನೈಸರ್ಗಿಕ ಆವಾಸಸ್ಥಾನಗಳನ್ನು ನಾಶಪಡಿಸುತ್ತಿದ್ದೇವೆ ಮತ್ತು ಪ್ರಪಂಚದ ಜೀವವೈವಿಧ್ಯವನ್ನು ಅಪಾಯಕ್ಕೆ ತಳ್ಳುತ್ತಿದ್ದೇವೆ.
*ಕಾನೂನುಬಾಹಿರ ವನ್ಯಜೀವಿ ಬೇಟೆ ಮತ್ತು ಮಾರಾಟ ಮಾಡುವುದು.
*ಅತಿಯಾದ ಮೀನುಗಾರಿಕೆ ಮತ್ತು ಮಾನವರಿಂದ ಸಾಗರ ಮಾಲಿನ್ಯ.
*ಬೇಟೆ ಆಡುವ ಸಂದರ್ಭದಲ್ಲಿ ಗುಂಡು ಹಾರಿಸುವುದು, ಕೊಲ್ಲುವುದು ಮತ್ತು ಮಾನವ ಬಳಕೆಗಾಗಿ ಬಲೆಗೆ ಬೀಳಿಸುವುದು ಅಥವಾ ಸಾಂಪ್ರದಾಯಿಕ ಔಷಧಿಗಳಲ್ಲಿ ಬಳಸುವುದು.
*ಮಾನವರು, ಕಾಡುಪ್ರಾಣಿಗಳ ಬೇಟೆ ಜತೆಗೆ ಅವುಗಳ ಚರ್ಮ, ಉಗುರು, ಕೊಂಬು, ದಂತಗಳ ಮಾರಾಟ ಅಕ್ರಮವಾಗಿ ನಡೆಯುತ್ತಿದೆ. ಇದರಿಂದ ಹಲವು ವನ್ಯಜೀವಿಗಳ ಸಂತತಿ ಅಳಿವಿನಂಚಿನಲ್ಲಿವೆ.
*ಅರಣ್ಯ ಪ್ರದೇಶದ ಒತ್ತುವರಿ, ಮರಗಳ ಮಾರಣಹೋಮದಿಂದ ಕಾಡುಪ್ರಾಣಿಗಳು ಜನವಸತಿ ಪ್ರದೇಶಗಳತ್ತ ಬರುತ್ತಿವೆ. ಇದರಿಂದ ಭವಿಷ್ಯದಲ್ಲಿ ಪ್ರಕೃತಿಯಲ್ಲಿ ಅಸಮತೋಲನ ಕಂಡುಬರಲಿದೆ.
*ಆವಾಸಸ್ಥಾನ ನಾಶ:ಕಾಡ್ಗಿಚ್ಚು, ಮನುಷ್ಯನ ದುರಾಸೆಗೆ ಕಾಡುಗಳ ನಾಶ, ಕಾಡನ್ನೆಲ್ಲ ನಾಡು ಮಾಡುತ್ತಿರುವುದು ಮುಂತಾದ ಕಾರಣಗಳಿಗಾಗಿ ಕಾಡುಪ್ರಾಣಿಗಳ ಆವಾಸಸ್ಥಾನ ನಾಶವಾಗುತ್ತಿದೆ. ಬಹುತೇಕ ವನ್ಯಪ್ರಾಣಿಗಳಿಗೆ ಜೀವಿಸಲು ಕಾಡೇ ಇಲ್ಲದ ಸ್ಥಿತಿಗೆ ತಂದುಬಿಟ್ಟಿದ್ದೇವೆ.
#ವಿಶ್ವದಲ್ಲಿ ವನ್ಯಜೀವಿ ಸಂರಕ್ಷಣೆಗೆ ಕೈಗೊಂಡ ಕ್ರಮಗಳು:
*ಅಳಿವಿನಂಚಿನಲ್ಲಿರುವ ಪ್ರಾಣಿಗಳನ್ನು ಉಳಿಸುವುದು.
*ಪ್ರಾಣಿಗಳನ್ನು ತಮ್ಮ ಜೀವನದೊಂದಿಗೆ ಸರಿಯಾಗಿ ನೋಡಿಕೊಳ್ಳುವುದು.
*ಪ್ರಕೃತಿ ಮತ್ತು ಇತರ ವನ್ಯಜೀವಿ ಪ್ರಭೇದಗಳ ಮಹತ್ವವನ್ನು ಗುರುತಿಸಲು ವನ್ಯಜೀವಿಗಳ ಸಂರಕ್ಷಣೆ ಅಗತ್ಯ.
*ನಾವು ಹೆಚ್ಚು ಸಮರ್ಥನೀಯ ಜೀವನವನ್ನು ನಡೆಸಬೇಕು ಮತ್ತು ಅಳಿವಿನಂಚಿನಲ್ಲಿರುವ ಎಲ್ಲಾ ಜೀವಿಗಳ ನೈಸರ್ಗಿಕ ಆವಾಸಸ್ಥಾನಗಳನ್ನು ಸಂರಕ್ಷಿಸಲು ಮತ್ತು ರಕ್ಷಿಸಲು ನಾವು ನಮ್ಮ ಸರ್ಕಾರಗಳನ್ನು ಒತ್ತಾಯಿಸಬೇಕಾಗಿದೆ. ನಮ್ಮ ಗ್ರಹವನ್ನು ಮತ್ತು ನಮ್ಮನ್ನು ರಕ್ಷಿಸಲು ನಾವೆಲ್ಲರೂ ಒಟ್ಟಾಗಿ ಕೆಲಸ ಮಾಡಬೇಕಾಗಿದೆ.
#ಭಾರತದಲ್ಲಿ ವನ್ಯಜೀವಿ ಸಂರಕ್ಷಣಾ ಕಾಯಿದೆ:
ವನ್ಯಜೀವಿಗಳನ್ನು ರಕ್ಷಿಸಬೇಕು ಎಂಬ ಉದ್ದೇಶದಿಂದ ಭಾರತೀಯ ಸಂಸತ್ತು 1972 ರಲ್ಲಿ ವನ್ಯಜೀವಿ ಸಂರಕ್ಷಣಾ ಕಾಯಿದೆಯನ್ನು ಜಾರಿಗೊಳಿಸಿತು. ಇದು ದೇಶದಲ್ಲಿ ವನ್ಯಜೀವಿಗಳಿಗೆ ರಕ್ಷಣೆಯನ್ನು ಒದಗಿಸುವ ಪ್ರಮುಖ ಶಾಸನವಾಗಿದೆ. ಈ ಕಾಯಿದೆಯು ಪರಿಸರ ಮತ್ತು ಪರಿಸರ ಸುರಕ್ಷತೆಯನ್ನು ಖಾತ್ರಿಪಡಿಸುವ ಸಲುವಾಗಿ ದೇಶದ ಕಾಡು ಪ್ರಾಣಿಗಳು, ಪಕ್ಷಿಗಳು ಮತ್ತು ಸಸ್ಯ ಪ್ರಭೇದಗಳ ರಕ್ಷಣೆಯನ್ನು ಒದಗಿಸುತ್ತದೆ. ಇತರ ವಿಷಯಗಳ ಜೊತೆಗೆ, ಕಾಯಿದೆಯು ಅನೇಕ ಪ್ರಾಣಿ ಜಾತಿಗಳನ್ನು ಬೇಟೆಯಾಡಲು ನಿರ್ಬಂಧಗಳನ್ನು ಹಾಕುತ್ತದೆ.
#ಈ ಕಾಯಿದೆಯಲ್ಲಿರುವ ಅಂಶಗಳು:
*ಅಳಿವಿನಂಚಿನಲ್ಲಿರುವ ಪ್ರಾಣಿಗಳನ್ನು ಬೇಟೆಯಾಡುವುದನ್ನು ಕಾಯಿದೆಯು ನಿಷೇಧಿಸಿದೆ .
*ಕಾಯಿದೆಯ ನಿಬಂಧನೆಗಳ ಪ್ರಕಾರ ಪರಿಶಿಷ್ಟ ಪ್ರಾಣಿಗಳನ್ನು ವ್ಯಾಪಾರ ಮಾಡುವುದನ್ನು ನಿಷೇಧಿಸುತ್ತದೆ.
*ಈ ಕಾಯಿದೆಯು ಕೆಲವು ವನ್ಯಜೀವಿ ಪ್ರಭೇದಗಳ ಮಾರಾಟ, ವರ್ಗಾವಣೆ ಮತ್ತು ಸ್ವಾಧೀನಕ್ಕೆ ಪರವಾನಗಿಗಳನ್ನು ಒದಗಿಸುತ್ತದೆ.
*ಇದು ವನ್ಯಜೀವಿ ಅಭಯಾರಣ್ಯಗಳು, ರಾಷ್ಟ್ರೀಯ ಉದ್ಯಾನವನಗಳು ಇತ್ಯಾದಿಗಳ ಸ್ಥಾಪನೆಗೆ ಅವಕಾಶ ಒದಗಿಸುತ್ತದೆ.
ಕರ್ನಾಟಕದಲ್ಲಿನ ವನ್ಯಜೀವಿ ಸ್ಥಳಗಳು:
*ಬಂಡೀಪುರ ರಾಷ್ಟ್ರೀಯ ಉದ್ಯಾನವನ
*ನಾಗರಹೊಳೆ ರಾಷ್ಟ್ರೀಯ ಉದ್ಯಾನವನ
*ದಾಂಡೇಲಿ ವನ್ಯಜೀವಿ ಅಭಯಾರಣ್ಯ
*ಭದ್ರಾ ವನ್ಯಜೀವಿ ಅಭಯಾರಣ್ಯ
*ರಂಗನತಿಟ್ಟು ಪಕ್ಷಿಧಾಮ
ಒಟ್ಟಾರೆಯಾಗಿ ಈ ಭೂ ಗ್ರಹದಲ್ಲಿ ಮನುಷ್ಯ ಮತ್ತು ಕಾಡು ಪ್ರಾಣಿಗಳು ಒಟ್ಟಿಗೆ ವಿಕಸನಗೊಂಡಿವೆ.ಭೂಮಿಯ ಮೇಲಿನ ಎಲ್ಲಾ ಜೀವಿಗಳು ಒಂದೇ.ಎಲ್ಲಾ ಜೀವಿಗಳು ಬೇರ್ಪಡಿಸಲಾಗದಂತೆ ಪರಸ್ಪರ ಸಂಬಂಧ ಹೊಂದಿವೆ ಹಾಗಾಗಿ ಪರಿಸರ ವ್ಯವಸ್ಥೆಯಲ್ಲಿ ಆಹಾರ ಸರಪಳಿಯನ್ನು ರೂಪಿಸುತ್ತವೆ.ನಾವು ವನ್ಯಜೀವಿಗಳನ್ನು ರಕ್ಷಿಸಬೇಕು ಏಕೆಂದರೆ ನೇರವಾಗಿ ಅಥವಾ ಪರೋಕ್ಷವಾಗಿ ನಮ್ಮ ಜೀವನವು ಅವುಗಳ ಮೇಲೆ ಅವಲಂಬಿತವಾಗಿದೆ.
ಹೀಗಾಗಿ ಅಳಿವಿನಂಚಿನಲ್ಲಿರುವ ಎಲ್ಲಾ ಜೀವಿಗಳ ನೈಸರ್ಗಿಕ ಆವಾಸಸ್ಥಾನಗಳನ್ನು ಸಂರಕ್ಷಿಸುವುದು ನಮ್ಮ ಆದ್ಯ ಕರ್ತವ್ಯವಾಗಬೇಕಾಗಿದೆ.
ಕೊನೆಯ ಮಾತು:
"ಪ್ರಕೃತಿ ಒಂದು ಸಂಪತ್ತು ಅದನ್ನು ಸಂತೋಷಕ್ಕಾಗಿ ಉಳಿಸಿಕೊಳ್ಳಲು ಪ್ರಯತ್ನಿಸೋಣ".
ವನ್ಯಜೀವಿಗಳು ಮತ್ತು ಅರಣ್ಯ ಸಂಪತ್ತಿನ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಿ, ಅವುಗಳ ಸಂರಕ್ಷಣೆಗಾಗಿ ನಾವೆಲ್ಲರೂ ಕೈ ಜೋಡಿಸೋಣ.
.jpeg)

No comments:
Post a Comment