ಈ ಬ್ಲಾಗ್‌ಗೆ ಭೇಟಿ ನೀಡಿದ್ದಕ್ಕಾಗಿ ಧನ್ಯವಾದಗಳು. ನಿಮ್ಮ ಅನಿಸಿಕೆ ತಿಳಿಸಿ ಹಾಗೂ ಮತ್ತೊಮ್ಮೆ ಭೇಟಿ ಕೊಡಿ. ತಮ್ಮೆಲ್ಲರಲ್ಲಿ ಸವಿಜ್ಞಾನ ತಂಡದಿಂದ ಮನವಿ: ಸವಿಜ್ಞಾನದ ಲೇಖನಗಳನ್ನು ಓದಿ, ಅಭಿಪ್ರಾಯ ದಾಖಲಿಸಿ. ನಿಮ್ಮ ಪ್ರೋತ್ಸಾಹಗಳೇ ಲೇಖಕರಿಗೆ ಶ್ರೀರಕ್ಷೆ Science is a beautiful gift to humanity; we should not distort it. A. P. J. Abdul Kalam

Tuesday, October 4, 2022

ಸಂಪಾದಕರ ಡೈರಿಯಿಂದ

 ಸಂಪಾದಕರ ಡೈರಿಯಿಂದ .....

    ನಾಡಿನೆಲ್ಲೆಡೆ ನವರಾತ್ರಿಯ ಸಂಭ್ರಮ ಜೊತೆಗೆ ದಸರೆಯ ಸಡಗರ. ‘ಸವಿಜ್ಞಾನ’ ತಂಡದ ಎಲ್ಲ ಸದಸ್ಯರಿಗೆ, ಸಹೃದಯಿ ಲೇಖಕರಿಗೆ‘ ಹಾಗೂ ಅಭಿಮಾನಿ ಓದುಗರಿಗೆ ಈ ಸಂದರ್ಭದಲ್ಲಿ ನಮ್ಮ ಶುಭ ಹಾರೈಕೆಗಳು. ಹಬ್ಬದ ವಾತಾವರಣದ ಮಧ್ಯೆ ನಿಮ್ಮ ಮಿದುಳಿಗೆ, ಮನಸ್ಸಿಗೆ ಕೊಂಚ ಮುದ ನೀಡಲು ‘ಸವಿಜ್ಞಾನ’ದ ಅಕ್ಟೋಬರ್ ತಿಂಗಳ ಸಂಚಿಕೆ ಪ್ರಕಟವಾಗಿದೆ.  

    ಈ ಸಂಚಿಕೆಯ ಪ್ರಮುಖ ಆಕರ್ಷಣೆಯಾಗಿ ಮೂರು ಲೇಖನಗಳಿವೆ. ಭಾರತದ ಮೊದಲ ಪ್ರನಾಳ ಶಿಶುವಿನ ಸೃಷ್ಟಿಕರ್ತ ಡಾ. ಸುಭಾಶ್ ಮುಖ್ಯೋಪಾಧ್ಯಾಯ ನೊಬೆಲ್ ಪ್ರಶಸ್ತಿಯಿಂದ ವಂಚಿತರಾದ ದುರಂತ ಕಥೆಯನ್ನು ಮನಕಲುಕುವಂತೆ ಚಿತ್ರಿಸಿದ್ದಾರೆ, ಡಾ.ಎಂ.ಜೆ.ಸುಂದರರಾಮ್ ಅವರು. ನಾವು ಅನುಭವಿಸುವ ದೈಹಿಕ ಹಾಗೂ ಮಾನಸಿಕ ನೋವುಗಳ ಹಿಂದಿನ ಮರ್ಮವನ್ನು ತೆರೆದಿಟ್ಟಿದ್ದಾರೆ, ತಮ್ಮ ಲೇಖನದಲ್ಲಿ ಶ್ರೀ ಸುರೇಶ್ ಸಂಕೃತಿ ಅವರು. ಖಭೌತವಿಜ್ಞಾನ ಕ್ಷೇತ್ರಕ್ಕೆ ಗಣನೀಯ ಕೊಡುಗೆ ನೀಡಿರುವ ಭಾರತೀಯ ಸಂಜಾತ ವಿಜ್ಞಾನಿ, ಸುಬ್ರಮಣ್ಯನ್ ಚಂದ್ರಶೇಖರ್ ಜನ್ಮ ದಿನದ ಸ್ಮರಣೆಯಲ್ಲಿ ಅವರ ಬಗ್ಗೆ ಲೇಖನವನ್ನು ಬರೆದಿದ್ದಾರೆ, ಶ್ರೀ ರಮೇಶ್.ವಿ.ಬಳ್ಳಾ ಅವರು. ಇನ್‌ಸ್ಸ್ಪೆಪೈರ್ ಅವಾರ್ಡ್ ಹಾಗೂ ಮಾನಕ್ ಪ್ರಶಸ್ತಿಗಳ ಬೆನ್ನೇರಿ ಹೊರಟ ರಾಜ್ಯದ ತಂಡದ ಅನುಭವಗಳನ್ನು ವಿವರಿಸಿದ್ದಾರೆ, ತಂಡದೊಂದಿಗೆ ತೆರಳಿದ್ದ ಶಿಕ್ಷಕ ಲಕ್ಷ್ಮೀಪ್ರಸಾದ್ ನಾಯಕ್ ಅವರು. ಈ ತಿಂಗಳ ‘ಸಾಧಕ ಶಿಕ್ಷಕ’ರಾಗಿ ನಾವು ಪರಿಚಯಿಸುತ್ತಿರುವುದು, ಜಿಲ್ಲಾ ಮಟ್ಟದ ಶ್ರೇಷ್ಠ ಶಿಕ್ಷಕ ಪ್ರಶ್ತಿಗೆ ಪಾತ್ರರಾದವರಲ್ಲಿ ಒಬ್ಬರಾದ ಶ್ರೀಮತಿ ಬಿ.ಎನ್.ರೂಪ ಅವರನ್ನು. ಅವರನ್ನು ಪರಿಚಯಿಸಿದ್ದಾರೆ, ಶ್ರೀ ಬಿ.ಜಿ.ರಾಮಚಂದ್ರ ಭಟ್ ಅವರು.

    ಇವೆಲ್ಲದರ ಜೊತೆಗೆ, ಎಂದಿನಂತೆ ಅಕ್ಟೋಬರ್ ತಿಂಗಳಿನ ಪ್ರಮುಖ ದಿನಾಚರಣೆಗಳ ಬಗ್ಗೆ ಮಾಹಿತಿ, ವಿಜ್ಞಾನಕ್ಕೆ ಸಂಬಂಧಿಸಿದ ನಮ್ಮ ಸ್ಥಿರ ಅಂಕಣಗಳಾದ, ಪದಬಂಧ, ಒಗಟುಗಳು ಹಾಗೂ ವ್ಯಂಗ್ಯ ಚಿತ್ರಗಳು ನಿಮ್ಮನ್ನು ರಂಜಿಸಲಿವೆ. ಸಂಚಿಕೆಯ ಎಲ್ಲ ಲೇಖನಗಳನ್ನು ಹಾಗೂ ಅಂಕಣಗಳನ್ನು ಓದಿ, ದಯವಿಟ್ಟು ನಿಮ್ಮ ಪ್ರತಿಕ್ರಿಯೆಯನ್ನು ದಾಖಲಿಸಿ.


ಪ್ರಧಾನ ಸಂಪಾದಕರು


No comments:

Post a Comment