ಈ ಬ್ಲಾಗ್‌ಗೆ ಭೇಟಿ ನೀಡಿದ್ದಕ್ಕಾಗಿ ಧನ್ಯವಾದಗಳು. ನಿಮ್ಮ ಅನಿಸಿಕೆ ತಿಳಿಸಿ ಹಾಗೂ ಮತ್ತೊಮ್ಮೆ ಭೇಟಿ ಕೊಡಿ. ತಮ್ಮೆಲ್ಲರಲ್ಲಿ ಸವಿಜ್ಞಾನ ತಂಡದಿಂದ ಮನವಿ: ಕೋವಿಡ್-19 ರ ಸುರಕ್ಷತಾ ಕ್ರಮಗಳನ್ನು ಅನುಸರಿಸಿ 1)ಕಡ್ಡಾಯವಾಗಿ ಮಾಸ್ಕ್ ಧರಿಸಿ, 2)ವ್ಯಕ್ತಿಗತ ಅಂತರ ಕಾಪಾಡಿಕೊಳ್ಳಿ, 3)ಲಸಿಕೆ (ವ್ಯಾಕ್ಸಿನೇಷನ್) ಹಾಕಿಸಿಕೊಳ್ಳಿ 4)ಸಾಧ್ಯವಾದಷ್ಟು ಮನೆಯಿಂದಲೇ ಕೆಲಸ ನಿರ್ವಹಿಸಿ. 5)ಆಗಾಗ್ಗೆ ಕೈಗಳನ್ನು ಸೋಪಿನಿಂದ ತೊಳೆಯಿರಿ. 6)ರೋಗ ಲಕ್ಷಣಗಳು ಕಂಡುಬಂದ ಕೂಡಲೇ ಪರೀಕ್ಷೆ ಮಾಡಿಸಿಕೊಳ್ಳಿ Prevention is Better Than Cure

Thursday, January 4, 2024

ಕೃತಕ ಬುದ್ಧಿಮತ್ತೆ: ಮಾನವನ ಜನಾಂಗಕ್ಕೆ ಸವಾಲಾಗಬಲ್ಲದೆ?

ಕೃತಕ ಬುದ್ಧಿಮತ್ತೆ: ಮಾನವನ ಜನಾಂಗಕ್ಕೆ ಸವಾಲಾಗಬಲ್ಲದೆ?

         

                                                 ಬಿ ಎನ್ ರೂಪ,   ಸಹ  ಶಿಕ್ಷಕರು    ಕೆಪಿಎಸ್ ಜೀವನ್ ಭೀಮ ನಗರ,

                                                  ಬೆಂಗಳೂರು ದಕ್ಷಿಣ ವಲಯ -4.

ಜೀವ ವಿಕಾಸದ ಹಾದಿಯಲ್ಲಿ ಮಾನವನನ್ನು ಅತ್ಯಂತ ಬುದ್ಧಿವಂತ ಜೀವಿಯೆಂದು ಪರಿಗಣಿಸಲಾಗಿತ್ತು. ಇದಕ್ಕೆ ಕಾರಣ ಅವನ ದ್ವಿಪಾದ ನಿಲುವು ಮೆದುಳಿನ  ಹೆಚ್ಚಿದ ಸಾಮರ್ಥ್ಯ, ಸಂವಹನ ಕೌಶಲ್ಯ , ಹೆಬ್ಬೆರಳಿನ ಹೆಚ್ಚಿನ ದಕ್ಷತೆ ಹಾಗೂ ಕಾರ್ಯ,ಜವಾಬ್ದಾರಿಯುತ ವಿವೇಕಯುತ ನಡುವಳಿಕೆ .ಆದರೆ ಇತ್ತೀಚಿಗೆ ಮಾನವನು ಅಭಿವೃದ್ಧಿಯ ಗುತ್ತಿಗೆ ಹಿಡಿದು ತನ್ನ ಎಲ್ಲಾ ವಿಚಾರಗಳನ್ನು ಗಾಳಿಗೆ ಮೇಲೆ ತೇಲಿ ಬಿಟ್ಟಿದ್ದಾನೆ, ಅವನ ಬುದ್ಧಿಶಕ್ತಿಯಿಂದ ಹಾಗೂ ವಿಜ್ಞಾನ -ತಂತ್ರಜ್ಞಾನ ಬೆಳೆಸಿ ಹಿಂದೂ ಹಲವಾರು ನಾವಿನ್ಯತೆಯಿಂದ ಕೂಡಿದ ಕೇಳರಿಯದ ಆವಿಷ್ಕಾರಗಳನ್ನು ಮಾಡಿದ್ದಾನೆ. ಇದರಲ್ಲಿ ಒಂದು ಕೊಡುಗೆ ಕೃತಕ ಬುದ್ಧಿಮತ್ತೆ ಸಹ ಒಂದಾಗಿದೆ.


-ಕೃತಕ ಬುದ್ಧಿಮತ್ತೆ ಹಾಗಾದರೆ ಏನಿದು ಕೃತಕ ಬುದ್ಧಿಮತ್ತೆ?


ಕೃತಕ ಬುದ್ಧಿಮತ್ತೆ ಇಂದು ಸಕಲ ಕ್ಷೇತ್ರಗಳಲ್ಲೂ ಹಾಸುಹೊಕ್ಕಾಗಿದೆ. ಇದು ಮಾನವನ ಹಾಗೂ ಇತರ ಪ್ರಾಣಿಗಳ ಬುದ್ಧಿಶಕ್ತಿಗೆ ವಿರುದ್ಧವಾಗಿರುವ ಬುದ್ಧಿಮತ್ತೆ. ಇದು ಯಂತ್ರಗಳಲ್ಲಿ ಬುದ್ಧಿಶಕ್ತಿ ತುಂಬುವ ತಂತ್ರಾಂಶಗಳು ತುಂಬುವ ಕೃತಕ ಬುದ್ಧಿವಂತಿಕೆಯಾಗಿದೆ.

ನಾವು ಇತ್ತೀಚಿನ ವರ್ಷಗಳಲ್ಲಿ ಹಲವಾರು ಗಣಕಯಂತ್ರಕ್ಕೆ ಸಂಬಂಧಪಟ್ಟ ಅಪ್ಲಿಕೇಶನ್‌ಗಳನ್ನು ಬಳಸುತ್ತಿದ್ದೇವೆ. ಕೆಲವು ಉನ್ನತ ಅಪ್ಲಿಕೇಶನ್‌ಗಳೆಂದರೆ ಗೂಗಲ್, ಬಿಂಗ್‌ಗಳಂತಹ ವೆಬ್ ಸರ್ಚ್ ಇಂಜಿನ್ ಗಳು

 ನಿಮ್ಮ ಆದೇಶವನ್ನು ಅರಿತು ಕಾರ್ಯ ನಿರ್ವಹಿಸುವ ಸಿರಿ, ಅಲೆಕ್ಸಾಗಳಿಂದ ಹಿಡಿದು ವ್ಯಾಮೋದಂತಹ ಚಾಲಕ ರಹಿತ ಸ್ವಯಂ ಚಾಲಿತ ವಾಹನಗಳು, ಚಾಟ್ ಜಿಪಿಟಿ , ಬಾರ್ಡ್‌ ಗಳಂತಹ ಎ ಐ ನಮ್ಮ ಬದುಕನ್ನು ಬದಲಿಸುತ್ತಿವೆ.

ಅಲನ್ ಟೂರಿಕ್ ರವರು ಮೆಷಿನ್ ಇಂಟಲಿಜೆನ್ಸ್ ಕ್ಷೇತ್ರದಲ್ಲಿ ಗಣನೀಯ ಸಂಶೋಧನೆ ನಡೆಸಿದ ಮೊದಲ ವ್ಯಕ್ತಿ ಯಾಗಿದ್ದಾರೆ. 1956 ರಲ್ಲಿ ಕೃತಕ ಬುದ್ಧಿಮತ್ತೆಯನ್ನು ಶೈಕ್ಷಣಿಕ  ವಿಭಾಗವಾಗಿ ಸ್ಥಾಪಿಸಲಾಯಿತು. ಕೃತಕ ಬುದ್ಧಿಮತ್ತೆ 2020 ದಶಕದ ನಂತರ ಗಮನಾರ್ಹ ಪ್ರಗತಿಯನ್ನು ಸಾಧಿಸಿದೆ. ಮಾನವನ ಬೌದ್ಧಿಕ ಕೌಶಲಗಳಾದ - ತಾರ್ಕಿಕತೆ , ಜ್ಞಾನ ಪ್ರಾತಿನಿಧ್ಯ, ಗ್ರಹಿಸುವಿಕೆ ಹಾಗೂ ಭಾಷಾ ಸಂಸ್ಕರಣೆ , ಕಲಿಕೆ- ಗ್ರಹಿಕೆ ಮತ್ತು ರೋಬೋಟಿಕ್ಸ್ ತಂತ್ರಜ್ಞಾನವನ್ನು ಇದು ಒಳಗೊಂಡಿದೆ.

ಕೃತಕ ಬುದ್ಧಿಮತ್ತೆ ಎರಡಲಗಿನ ಕತ್ತಿಯಂತಿದೆ. ಕೃತಕ ಬುದ್ಧಿಮತ್ತೆಯ ಅನುಕೂಲ ಹಾಗೂ ಅನಾನುಕೂಲಗಳನ್ನು  ಪರಾಮರ್ಶಿಸೋಣ.


ಉಪಯೋಗಗಳು ಅಥವಾ ಅನುಕೂಲಗಳು:-

1.     ಮಾನವನ  ಮಾಡುವಂತಹ ಪುನರಾವರ್ತಿತ ದೋಷವನ್ನು ಇದು ಮಾಡುವುದಿಲ್ಲ.

2.     ರೋಬೋಟ್‌ಗಳು ಹೆಚ್ಚು ಜವಾಬ್ದಾರಿಯೊಂದಿಗೆ ನಿಖರವಾವಾಗಿ ಕೆಲಸವನ್ನು ಒದಗಿಸಬಲ್ಲದು

3.     ವಿರಾಮ ರಹಿತ ಹಾಗೂ ಆಯಾಸವಿಲ್ಲದೆ ಕೆಲಸವನ್ನು ದಿನಪೂರ್ತಿ ಮಾಡಬಲ್ಲದು .

4.     ಡಿಜಿಟಲ್ ಸಹಾಯದಿಂದ ಮಾನವನ ಸಿಬ್ಬಂದಿ ಕಡಿಮೆ ಮಾಡಬಹುದು.

5.      ಹೊಸ ಆವಿಷ್ಕಾರಗಳು ಸ್ವಯಂಚಾಲಿತ ಕಾರುಗಳು ಅಲ್ಗಾರಿದಮ್ ಗಳ ಸಂಯೋಗವನ್ನು ಬಳಸುತ್ತದೆ . 

6.     ಪಕ್ಷಪಾತವಿಲ್ಲದ ನಿರ್ಧಾರವನ್ನು ಮಾಡುತ್ತದೆ.

7.      ದೈನಂದಿನ ಅಪ್ಲಿಕೇಶನ್‌ಗಳನ್ನು ಬಳಸಲು ಸಹಕಾರಿಯಾಗಿದೆ .

8.     ಪುನರಾವರ್ತಿತ ಕಾರ್ಯಗಳನ್ನು ಸುಲಭವಾಗಿ ನಿರ್ವಹಿಸಬಲ್ಲದು

9.     ವೈದ್ಯಕೀಯ ಕ್ಷೇತ್ರಗಳಲ್ಲೂ ಸಹ ಇದರ ಅನ್ವಯ ಅಪಾರವಾಗಿದೆ. 

       10   . ಉನ್ನತ ಹಾಗೂ ಸುಧಾರಿತ ಸಂವಹನ ಇಂಟರ್ಫೇಸ್ ಅನ್ನು ಪರಿಚಯಿಸುತ್ತದೆ. 

 ಅನಾನುಕೂಲಗಳು:-

1. ದುಬಾರಿ .

2. ಸೃಜನಶೀಲವಲ್ಲ

3.ಇದು ನಿರುದ್ಯೋಗವನ್ನು ಸೃಷ್ಟಿ ಮಾಡುತ್ತದೆ

4. ಮಾನವನನ್ನು ಸೋಮಾರಿಯಾಗಿ ಮಾಡುತ್ತದೆ

5. ನೈತಿಕತೆ ಇಲ್ಲ

6. ಭಾವರಹಿತ

7.  ಗೌಪ್ಯತೆಯನ್ನು ಕಾಪಾಡಿಕೊಳ್ಳುವುದು ಕಷ್ಟ.

  

 ಇತ್ತೀಚಿಗೆ ಆಗುತ್ತಿರುವ ಹಠಾತ್ ಬದಲಾವಣೆಯನ್ನು ಗಮನಿಸಿದಾಗ ನಮ್ಮನ್ನು ನಾವು ಹಾಗೂ ನಮ್ಮ ಮುಂದಿನ ಪೀಳಿಗೆಯನ್ನು ಕೃತಕ ಬುದ್ಧಿಮತ್ತೆಯಿಂದ ರಕ್ಷಿಸಿಕೊಳ್ಳುವ ಜವಾಬ್ದಾರಿ ಎದುರಾಗುತ್ತಿದೆ. ಆಧುನಿಕ ಅಸುರರು ಆಗದಂತೆ ಕಾಯುವ ಹಾಗೂ ಒಳ್ಳೆಯ ಪ್ರಜೆಯಾಗುವಂತೆ ರೂಪಿಸುವಲ್ಲಿ ಮಹತ್ತರ ಜವಾಬ್ದಾರಿ ಇದೆ.

  ಏಕೆಂದರೆ ಇಂದಿನ  ಬಹುತೇಕ ವಿದ್ಯಾರ್ಥಿಗಳು ಯಾವುದೇ ರೀತಿಯ ಅಧ್ಯಯನ, ಸತತ ಪರಿಶ್ರಮ, ಕಠಿಣ ಪರಿಶ್ರಮ, ಆಸಕ್ತಿ, ಇವುಗಳಲ್ಲಿ ಕುಂದು ಕೊರತೆ ಕಂಡು ಬಂದು, ಸುಲಭವಾಗಿ ಕೃತಕ ಬುದ್ಧಿಮತ್ತೆಯ ಹಲವಾರು ಅಪ್ಲಿಕೇಶನ್‌ಗಳನ್ನು ಬಳಸಿ ತಮ್ಮ ಮನೆಗೆಲಸ, ಯೋಜನೆಗಳನ್ನು ಸಿದ್ಧಪಡಿಸುತ್ತಿದ್ದಾರೆ. ಇದರಿಂದಾಗಿ ಕೃತಿ ಚೌರ್ಯ ಆಗುವ ಭಯಾವೂ ಸಹ ಎದುರಾಗಿದೆ. ಇದರಿಂದಾಗಿ ಪ್ರತಿ ಅಪ್ಲಿಕೇಶನ್ ಗಳನ್ನು ಬಳಸಿ ಶಿಕ್ಷಕರು ಇದನ್ನು ಕಂಡು ಹಿಡಿಯುವ ಕಾರ್ಯವು ಸಹ ಈಗ ಎದುರಾಗಿದೆ. ಆದ್ದರಿಂದ ಹೊಸ ಆವಿಷ್ಕಾರಗಳಲ್ಲಿ ಅದರದೇ ಆದ ಸಾಧಕ- ಬಾಧಕ ಹಾಗೂ ಅನುಕೂಲ-ಅನಾನುಕೂಲಗಳಿವೆ. ಇವುಗಳಲ್ಲಿ ಇರುವಂತ ಧನಾತ್ಮಕ ಉಪಯೋಗಗಳನ್ನು ಮಾತ್ರ ಬಳಸಿಕೊಂಡು ಋಣಾತ್ಮಕ ಅಂಶಗಳನ್ನು ತ್ಯಜಿಸಬೇಕು. ಮುಂದಿನ ಪೀಳಿಗೆಯ ಉತ್ತಮ ಆಲೋಚನೆಯನ್ನು ಮಾಡುವಂತಹ ಒಂದು ಪ್ರವೃತ್ತಿಯನ್ನು ಬೆಳೆಸಬೇಕು.

ಮುಂದಿನ ಪೀಳಿಗೆಯವರನ್ನು ಉತ್ತಮ ಆಚಾರವಂತ, ವಿಚಾರವಂತ ,ಗುಣವಂತ, ಮೌಲ್ಯಯುತ ಕೌಶಲ್ಯ ಭರಿತ, ಹೃದಯವಂತ, ಸತ್ಪ್ರಜೆಯಾಗಿ ಮಾಡುವಲ್ಲಿ ನಾವು ಕಾರ್ಯಪ್ರವೃತ್ತರಾಗಬೇಕು. ಮುಂದಿನ ಪೀಳಿಗೆಯವರನ್ನು ಅಧ್ಯಯನ ಶೀಲರನ್ನಾಗಿ ಸ್ವಯಂ ಆತ್ಮವಲೋಕನ ಮಾಡಿಕೊಳ್ಳುವವರಾಗಿ, ಪರಿಶ್ರಮ, ಕಾಳಜಿ ,ಕಳಕಳಿ,ಸಂಪತ್ ಭರಿತ ಒಳ್ಳೆಯ ಮಾನವನನ್ನಾಗಿ ಮಾಡುವ ಕರ್ತವ್ಯ ನಮ್ಮೆಲ್ಲರ ಮುಂದಿದೆ . ಈ ಕಾರ್ಯದಲ್ಲಿ ಎಲ್ಲರೂ ಕೈಜೋಡಿಸಿ ಭಾಗಿಯಾಗೋಣ ನೀವೇನೆನ್ನುತ್ತೀರಿ? ಮಾನವೀಯತೆ ಗೆಲ್ಲಲಿ ಎಂಬುದೇ ನಮ್ಮ ಆಶಯ.

 

No comments:

Post a Comment