ಈ ಬ್ಲಾಗ್‌ಗೆ ಭೇಟಿ ನೀಡಿದ್ದಕ್ಕಾಗಿ ಧನ್ಯವಾದಗಳು. ನಿಮ್ಮ ಅನಿಸಿಕೆ ತಿಳಿಸಿ ಹಾಗೂ ಮತ್ತೊಮ್ಮೆ ಭೇಟಿ ಕೊಡಿ. ತಮ್ಮೆಲ್ಲರಲ್ಲಿ ಸವಿಜ್ಞಾನ ತಂಡದಿಂದ ಮನವಿ: ಕೋವಿಡ್-19 ರ ಸುರಕ್ಷತಾ ಕ್ರಮಗಳನ್ನು ಅನುಸರಿಸಿ 1)ಕಡ್ಡಾಯವಾಗಿ ಮಾಸ್ಕ್ ಧರಿಸಿ, 2)ವ್ಯಕ್ತಿಗತ ಅಂತರ ಕಾಪಾಡಿಕೊಳ್ಳಿ, 3)ಲಸಿಕೆ (ವ್ಯಾಕ್ಸಿನೇಷನ್) ಹಾಕಿಸಿಕೊಳ್ಳಿ 4)ಸಾಧ್ಯವಾದಷ್ಟು ಮನೆಯಿಂದಲೇ ಕೆಲಸ ನಿರ್ವಹಿಸಿ. 5)ಆಗಾಗ್ಗೆ ಕೈಗಳನ್ನು ಸೋಪಿನಿಂದ ತೊಳೆಯಿರಿ. 6)ರೋಗ ಲಕ್ಷಣಗಳು ಕಂಡುಬಂದ ಕೂಡಲೇ ಪರೀಕ್ಷೆ ಮಾಡಿಸಿಕೊಳ್ಳಿ Prevention is Better Than Cure

Saturday, April 3, 2021

ಅಪೇಕ್ಷೆ

ಅಪೇಕ್ಷೆ

ಹಾಡುತಿಹಳು ಧರಿತ್ರಿ

ನೊಂದು ಬೆಂದು ಬಸವಳಿದ

ಬಾಳಗೀತೆ

ಕೇಳದೇನು ಅವಳ ಬತ್ತಿದೆದೆಯ

ಭಾವಗೀತೆ...?

ಅವಳೊಡಲ ಜೀವನಾಳಗಳಾಗಿ

ಜೀವಜಂತುಗಳಿಗೆ

ಅಮೃತಸಿಂಚನಗೈವ

ಜಾಲನಿಧಿಗಳು

ಬಳಲಿ ಬಾಯರಿವೆಯಲ್ಲ...

ಒಣಗಿ ಸೊರಗಿ ಕಾದಿವೆ

ನೀರ ಹನಿಗಳ ಸ್ಪರ್ಶಕ್ಕೆ

ಎರೆಯಬಹುದಲ್ಲ ಆಗಸವೆ

ಎರಡು ಹನಿ ನೀರ...?

ಒಣಗಿದ ಅವನೀ ಹೃದಯವ

ತಣಿಸ ಬಾರ.

- ಜಯಶ್ರೀ ಶರ್ಮ




4 comments:

  1. ಭೂಮಿಯ ಅಳಲನ್ನು ಕೇಳುವವರು ಯಾರೋ? ಅವನಿಯ ದಿನದಂದು ಭಾಷಣಕ್ಕೆ ಸೀಮಿತಗೊಳಿಸಿದ್ದೇವೆಯೇ? ನೈಸ್‌ ಮೇಡಂ

    ReplyDelete
  2. ನಿಮ್ಮ ಕರೆಗೆ ಓಗೊಟ್ಟು ವರ್ಷಧಾರೆ ಸುರಿಯಲಿ. ಇಳೆ ತಂಪಾಗಲಿ ಮೇಡಂ. ಧನ್ಯವಾದಗಳು

    ReplyDelete