ಈ ಬ್ಲಾಗ್‌ಗೆ ಭೇಟಿ ನೀಡಿದ್ದಕ್ಕಾಗಿ ಧನ್ಯವಾದಗಳು. ನಿಮ್ಮ ಅನಿಸಿಕೆ ತಿಳಿಸಿ ಹಾಗೂ ಮತ್ತೊಮ್ಮೆ ಭೇಟಿ ಕೊಡಿ. ತಮ್ಮೆಲ್ಲರಲ್ಲಿ ಸವಿಜ್ಞಾನ ತಂಡದಿಂದ ಮನವಿ: ಕೋವಿಡ್-19 ರ ಸುರಕ್ಷತಾ ಕ್ರಮಗಳನ್ನು ಅನುಸರಿಸಿ 1)ಕಡ್ಡಾಯವಾಗಿ ಮಾಸ್ಕ್ ಧರಿಸಿ, 2)ವ್ಯಕ್ತಿಗತ ಅಂತರ ಕಾಪಾಡಿಕೊಳ್ಳಿ, 3)ಲಸಿಕೆ (ವ್ಯಾಕ್ಸಿನೇಷನ್) ಹಾಕಿಸಿಕೊಳ್ಳಿ 4)ಸಾಧ್ಯವಾದಷ್ಟು ಮನೆಯಿಂದಲೇ ಕೆಲಸ ನಿರ್ವಹಿಸಿ. 5)ಆಗಾಗ್ಗೆ ಕೈಗಳನ್ನು ಸೋಪಿನಿಂದ ತೊಳೆಯಿರಿ. 6)ರೋಗ ಲಕ್ಷಣಗಳು ಕಂಡುಬಂದ ಕೂಡಲೇ ಪರೀಕ್ಷೆ ಮಾಡಿಸಿಕೊಳ್ಳಿ Prevention is Better Than Cure

Sunday, September 4, 2022

ಒಗಟುಗಳು ಸೆಪ್ಟಂಬರ್‌

 ಒಗಟುಗಳು


ಶಂಕುಗಳಿವೆ ನನ್ನಲ್ಲಿ ನಾ ಪ್ರಾಣಿಯಲ್ಲ

 ಸೂಜಿಗಳು ನನ್ನಲ್ಲಿವೆ ಆದರೂ ನಾ ದರ್ಜಿಯಲ್ಲ

 ಸೂಚಿಪರ್ಣಗಳಿದ್ದರೂ ಪರ್ಣಪಾತಿಗಳಲ್ಲ

ಬೀಜಗಳಿದ್ದರೂ ಹಣ್ಣುಗಳಿಲ್ಲದ ಸಸ್ಯವರ್ಗ ನಾ

 ಸುಳಿವ ಹಿಡಿದು ನನ್ನ ಹುಡುಕಿ ಓ ಜಾಣ ಜಾಣೆಯರೆ


 ನಾ ವೈದ್ಯನಲ್ಲ ಆದರೂ ನೋವಿಲ್ಲದ ಶಸ್ತ್ರ ಚಿಕಿತ್ಸೆ ಮಾಡಬಲ್ಲೆ,

 ನಾ ಆಭರಣ ಪ್ರಿಯನಲ್ಲ ಆದರೂ ಮೈತುಂಬಾ ಉಂಗುರಗಳ ಸಿಂಗಾರ 

 ರಕ್ತ ಹೀರಬಲ್ಲೆ ಆದರೆ ನಾ ತಿಗಣೆಯಲ್ಲ

 ಹೆಪ್ಪುಗಟ್ಟದಂತೆ ಮಾಡಿ ರಕ್ತ ಸರಾಗವಾಗಿ ಹೀರಬಲ್ಲೆ

 ರೈತನ ಮಿತ್ರನೂ ನನ್ನ ವಂಶಜನೆ 

 ಈ ಸುಳಿವು ಹಿಡಿದು ನನ್ನ ಕಂಡುಹಿಡಿ ಓ ಮನುಜ !!!


 ಇದಕ್ಕೂ ಕನಿಷ್ಠ ತಾಪವಿರದು 

ಇದೇ ಅನಿಲದ ಗಾತ್ರ ಶೂನ್ಯ ಮಾಡಬಲ್ಲ  ತಾಪ

 ಚಾರ್ಲ್ಸ್ ನಿಯಮಕ್ಕೂ ತಾಪದ ಏಕಮಾನಕ್ಕೂ ಇದೆ ಸಹ ಸಂಬಂಧ

 ವಿವರಿಸಿ ಹೇಳಬಲ್ಲಿರೇ ನನ್ನ ಕಥೆಯ?


 ಆಮ್ಲ ಪ್ರತ್ಯಾಮ್ಲಗಳ ಸಂಗಮ ನಾ

 ಬೇಕಿಂಗ್ ಸೋಡಾ ತಯಾರಿಕೆಯಲು ನಾ ಹುಟ್ಟಿ ಬರುವೆ 

ಕಾಸಿದಿರೋ ನೀರಾಗದೆ  ಅನಿಲವಾಗುವ ಘನ ಮಹಿಮ ನಾ

 ನನ್ನೊಬ್ಬ ಜ್ಞಾತಿ ಕೀಟ ವಿಕರ್ಷಕ ಗುಣದವರು

 ಮತ್ತೊಬ್ಬರು C10H16O ಸೂತ್ರದವರು 

 ವಿಜ್ಞಾನದ ಈ ಒಗಟ ಒಡೆದು 

ಗುರುತುಹಿಡಿಯಿರಿ ಓ ಜಾಣ ಜಾಣೆಯರೇ


 ವಿದ್ಯುತ್ತಿನ ಪ್ರಿಯ ಸುಖ ವಾಹಕ 

ನಾ ಸಿಹಿ ಬರ್ಫಿಯ ಹೊದಿಕೆಯಾಗಬಲ್ಲೆ 

ಎಚ್ಚರ ! ಗಾಳಿಗೆ ತೆರೆದಿಟ್ಟಿರೋ 

ಹೊಳೆವ ನನ್ನ ಮೈ ಕಪ್ಪುಗಟ್ಟೀತು

 ಆಭರಣ ತಯಾರಿಕೆಯಲ್ಲೂ ನನ್ನ ಪಾಲುಂಟು 

ವ್ಯಾಪಾರದಲ್ಲೂ ನನಗೆ ಬೆಲೆಯುಂಟು

ಇಷ್ಟು ಸುಳಿವು ಸಾಲದೇ ಜಾಣ?

 ಹೂಡು ನಿನ್ನ ತಿಳಿವಿನ ಹೂ ಬಾಣ


ಲೇಖಕರು : ಬಿ.ಜಿ.ರಾಮಚಂದ್ರ ಭಟ್ 
ವಿಜ್ಞಾನ ಶಿಕ್ಷಕರು
ಸರ್ಕಾರಿ ಪ್ರೌಢಶಾಲೆಬ್ಯಾಟರಾಯನಪುರ,
ಮೈಸೂರು ರಸ್ತೆಬೆಂಗಳೂರು

No comments:

Post a Comment