ಈ ಬ್ಲಾಗ್‌ಗೆ ಭೇಟಿ ನೀಡಿದ್ದಕ್ಕಾಗಿ ಧನ್ಯವಾದಗಳು. ನಿಮ್ಮ ಅನಿಸಿಕೆ ತಿಳಿಸಿ ಹಾಗೂ ಮತ್ತೊಮ್ಮೆ ಭೇಟಿ ಕೊಡಿ. ತಮ್ಮೆಲ್ಲರಲ್ಲಿ ಸವಿಜ್ಞಾನ ತಂಡದಿಂದ ಮನವಿ: ಕೋವಿಡ್-19 ರ ಸುರಕ್ಷತಾ ಕ್ರಮಗಳನ್ನು ಅನುಸರಿಸಿ 1)ಕಡ್ಡಾಯವಾಗಿ ಮಾಸ್ಕ್ ಧರಿಸಿ, 2)ವ್ಯಕ್ತಿಗತ ಅಂತರ ಕಾಪಾಡಿಕೊಳ್ಳಿ, 3)ಲಸಿಕೆ (ವ್ಯಾಕ್ಸಿನೇಷನ್) ಹಾಕಿಸಿಕೊಳ್ಳಿ 4)ಸಾಧ್ಯವಾದಷ್ಟು ಮನೆಯಿಂದಲೇ ಕೆಲಸ ನಿರ್ವಹಿಸಿ. 5)ಆಗಾಗ್ಗೆ ಕೈಗಳನ್ನು ಸೋಪಿನಿಂದ ತೊಳೆಯಿರಿ. 6)ರೋಗ ಲಕ್ಷಣಗಳು ಕಂಡುಬಂದ ಕೂಡಲೇ ಪರೀಕ್ಷೆ ಮಾಡಿಸಿಕೊಳ್ಳಿ Prevention is Better Than Cure

Sunday, September 4, 2022

ಅಶ್ರು ವಾಯು, ಏನಿದರ ಮರ್ಮ ?

 ಅಶ್ರು ವಾಯು, ಏನಿದರ ಮರ್ಮ ?

ಲೇಖಕರು : ಶ್ರೀಮತಿ ನಾಗವೇಣಿ. ಬಿ

ಪೋಲೀಸರಿಂದ ಅಶ್ರುವಾಯು ಪ್ರಯೋಗ ಎಂಬ ಸುದ್ದಿಯನ್ನು ಆಗಾಗ ಕೇಳಿದ್ದೇವೆ. ಇದರ ರಾಸಾಯನಿಕ ಸಂಯೋಜನೆ ಹಾಗೂ ಪರಿಣಾಮಗಳ ಬಗ್ಗೆ ಈ ಲೇಖನದಲ್ಲಿ ಬೆಳಕು ಚೆಲ್ಲಿದ್ದಾರೆ, ಶಿಕ್ಷಕಿ ಶ್ರೀಮತಿ
ಬಿ. ನಾಗವೇಣಿ ಅವರು.

ಎಲ್ಲಿಯಾದರೂ ಗಲಭೆ, ಧಂಗೆ ಅಥವಾ ಮುಷ್ಕರ ನಡೆಯುತ್ತಿದ್ದು, ಅದರಲ್ಲಿ ಪಾಲ್ಗೊಂಡಿರುವ ಸಾರ್ವಜನಿಕರ ತೀವ್ರವಾದ ಪ್ರತಿಭಟನೆಯನ್ನು ನಿಯಂತ್ರಿಸಲು ಸಾಧ್ಯವಾಗದೇ ಹೋದಾಗ ಪರಿಸ್ಥಿತಿಯನ್ನು ಹತೋಟಿಗೆ ತರಲು ಪೋಲೀಸರು ಸಾಮಾನ್ಯವಾಗಿ ಲಾಠಿ ಪ್ರಹಾರ ಮಾಡುವುದು ನಮಗೆ ತಿಳಿದಿದೆ. ಲಾಠಿ ಪ್ರಹಾರಕ್ಕೂ ಪ್ರತಿಭಟನಕಾರರು ಬಗ್ಗದೇ ಹೋದರೆ ಪೋಲೀಸರು ಬಳಸುವ ಒಂದು ಪರಿಣಾಮಕಾರಿ ಅಸ್ತ್ರವೇ ಆಶ್ರುವಾಯು ಪ್ರಯೋಗ ಅಥವಾ ಟಿಯರ್‌ ಗ್ಯಾಸ್.

ಈ ಟಿಯರ್‌ ಗ್ಯಾಸ್‌ ಎಂದರೆ ಏನು?  ಕಣ್ಣಿಗೆ, ಬಾಯಿಗೆ ಗಂಟಲಿಗೆ, ಶ್ವಾಸಕೋಶಕ್ಕೆ ಮತ್ತು ಚರ್ಮಕ್ಕೆ ಕಿರಿಕಿರಿ ಉಂಟು ಮಾಡುವ ರಾಸಾಯನಿಕಗಳ ಒಂದು ಗುಂಪಿಗೆ ಒಟ್ಟಾಗಿ ಈ ಹೆಸರಿದೆ. ಅವುಗಳಲ್ಲಿ ಪ್ರಮುಖವಾದುವು ಕ್ಲೋರೋಅಸಿಟೋಫೀನೋನ್, ಕ್ಲೋರೋಬೆನ್‌ ಜಾಲ್‌ ಮೆಲನೋ  ನೈಟ್ರೈಲ್‌ ಹಾಗೂ ಕ್ಲೋರೋಪಿಕ್ರಿನ್.

ಇವು ಸಾಮಾನ್ಯವಾಗಿ ದ್ರವ ರೂಪ ಅಥವಾ ಹರಳಿನಾಕಾರದಲ್ಲಿರುತ್ತವೆ. ಶಾಖ ತಗುಲಿದಾಗ ನೀರಾವಿಯಂಥ ಹೊಗೆಯನ್ನುಂಟುಮಾಡಿ ತಮ್ಮ ಪರಿಣಾಮವನ್ನು ಪ್ರದರ್ಶಿಸುತ್ತವೆ. ಮೊದಲು ಕಣ್ಣಿಗೆ ಆಕ್ರಮಣ ಮಾಡುತ್ತವೆ. ಸ್ಪರ್ಶಿಸಿದ‌ ಕೆಲವೇ ಸೆಕೆಂಡುಗಳಲ್ಲಿ ತಮ್ಮ ಪರಿಣಾಮ ಬೀರುತ್ತವೆ. ಕಣ್ಣುಗಳಲ್ಲಿ ತುರಿಕೆ, ನೀರು ಸೋರುವುದು, ಕಣ್ಣು ಮಂಜಾಗುವುದು ಮುಂತಾದ ಸಮಸ್ಯೆಗಳು ಉಂಟಾಗಬಹುದು. ಬಾಧಿತ ವ್ಯಕ್ತಿಗಳು ಚಡಪಡಿಸಲು ಪ್ರಾರಂಭಿಸುತ್ತಾರೆ. ಸುಮಾರು ೧೫ರಿಂದ ೩೦ ನಿಮಿಷ ಪರಿಣಾಮ ಉಳಿಯುತ್ತದೆ. ಟಿಯರ್‌ ಗ್ಯಾಸ್‌ ಆಮ್ಲೀಯ ಗುಣ ಹೊಂದಿದ್ದು ವಿನಿಗರ್‌ ರೀತಿಯ ವಾಸನೆ ಹೊಂದಿರುತ್ತದೆ.

ಕ್ಲೋರೋಬೆನ್‌ ಜಾಲ್‌ ಮೆಲನೋ  ನೈಟ್ರೈಲ್ ಅನ್ನು ಆವಿಷ್ಕರಿಸಿದವರು. ಅಮೆರಿಕಾದ ಬೆನ್‌ ಕಾರ್ಸೆನ್‌ (Ben Corsen) ಹಾಗೂ ರೋಜರ್‌ ಸ್ಟೌಟನ್‌ (Roger Stoughton)  ಎಂಬ ವಿಜ್ಞಾನಿಗಳು. ಇದರ ಅಣು ಸೂತ್ರ C10 H5 Cl N2 ಕಂಡುಹಿಡಿದರು.

ಇಂಥ ರಾಸಾಯನಿಕಗಳಿಗೆ ಪದೇ, ಪದೇ ಒಡ್ಡಿಕೊಂಡರೆ, ಅದರಿಂದ ತೀವ್ರ ಪರಿಣಾಮಗಳಿಗೆ ಒಳಗಾಗಬೇಕಾಗಬಹುದು. ಅಂಧತ್ವ ಉಂಟಾಗುವ ಸಾಧ್ಯತೆಯೂ ಇದೆ. ಗಂಟಲು, ಶ್ವಾಸಕೋಶಗಳ ಅಂಗಾಂಶಗಳು ಸುಟ್ಟು ಹೋಗಬಹುದು. ಉಸಿರಾಟ ಸಮಸ್ಯೆ ಉಂಟಾಗಿ, ಅದರಿಂದ ಸಾವು ಸಂಭವಿಸಬಹುದು.

ಶ್ರೀಮತಿ ಬಿ.ನಾಗವೇಣಿ ಅವರು 2022 ರ ಶಿಕ್ಷಕರ ದಿನಾಚರಣೆಯ ಸಂದರ್ಭದಲ್ಲಿ “ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕಿ”  ಪ್ರಶಸ್ತಿಗೆ ಭಾಜನರಾಗಿದ್ದಾರೆ. ಅವರಿಗೆ ʼಸವಿಜ್ಞಾನʼ ತಂಡದ ಪರವಾಗಿ ಹಾರ್ದಿಕ ಅಭಿನಂದನೆಗಳು.

 

 ಲೇಖಕರು : ಶ್ರೀಮತಿ ನಾಗವೇಣಿ.ಬಿ.

ಸಹಶಿಕ್ಷಕಿ,

ಕರ್ನಾಟಕ ಪಬ್ಲಿಕ್‌ ಶಾಲೆ

ಬಸವನಗುಡಿ, ಬೆಂಗಳೂರು-೪

4 comments:

  1. ಉತ್ತಮ ಲೇಖನ. ಅಶ್ರುವಾಯು ಇದರಲ್ಲಿ ಉಪಯೋಗಿಸುವ ರಾಸಾಯನಿಕಗಳ ಮೇಲೇ ಬೆಳಕು ಚೆಲ್ಲಿದೆ

    ReplyDelete
  2. ಅಶ್ರುವಾಯುವಿನಲ್ಲಿ ಉಪಯೋಗ ಮಾಡುವ ರಾಸಾಯನಿಕ ಮತ್ತು ಅವುಗಳ ಪರಿಣಾಮದ ಬಗ್ಗೆ ಸಾಕಷ್ಟು ಉಪಯುಕ್ತ ಮಾಹಿತಿ. ಧನ್ಯವಾದಗಳು ಮೇಡಂ.

    ReplyDelete