ಈ ಬ್ಲಾಗ್‌ಗೆ ಭೇಟಿ ನೀಡಿದ್ದಕ್ಕಾಗಿ ಧನ್ಯವಾದಗಳು. ನಿಮ್ಮ ಅನಿಸಿಕೆ ತಿಳಿಸಿ ಹಾಗೂ ಮತ್ತೊಮ್ಮೆ ಭೇಟಿ ಕೊಡಿ. ತಮ್ಮೆಲ್ಲರಲ್ಲಿ ಸವಿಜ್ಞಾನ ತಂಡದಿಂದ ಮನವಿ: ಕೋವಿಡ್-19 ರ ಸುರಕ್ಷತಾ ಕ್ರಮಗಳನ್ನು ಅನುಸರಿಸಿ 1)ಕಡ್ಡಾಯವಾಗಿ ಮಾಸ್ಕ್ ಧರಿಸಿ, 2)ವ್ಯಕ್ತಿಗತ ಅಂತರ ಕಾಪಾಡಿಕೊಳ್ಳಿ, 3)ಲಸಿಕೆ (ವ್ಯಾಕ್ಸಿನೇಷನ್) ಹಾಕಿಸಿಕೊಳ್ಳಿ 4)ಸಾಧ್ಯವಾದಷ್ಟು ಮನೆಯಿಂದಲೇ ಕೆಲಸ ನಿರ್ವಹಿಸಿ. 5)ಆಗಾಗ್ಗೆ ಕೈಗಳನ್ನು ಸೋಪಿನಿಂದ ತೊಳೆಯಿರಿ. 6)ರೋಗ ಲಕ್ಷಣಗಳು ಕಂಡುಬಂದ ಕೂಡಲೇ ಪರೀಕ್ಷೆ ಮಾಡಿಸಿಕೊಳ್ಳಿ Prevention is Better Than Cure

Friday, November 4, 2022

ಸಂಪಾದಕರ ಡೈರಿಯಿಂದ .....

 

ಸಂಪಾದಕರ ಡೈರಿಯಿಂದ .....

    ನಾಡಿನೆಲ್ಲೆಡೆ ದೀಪಾವಳಿ ಹಬ್ಬದ ಸಡಗರ ಮುಗಿಯುತ್ತಲೇ ಕನ್ನಡ ನಾಡು ನುಡಿಯ ಜಾಗೃತಿ ಮೂಡಿಸುವ ಕನ್ನಡದ ಹಬ್ಬದ ಸಡಗರವೋ ಸಡಗರ. ಕೋಟಿಕಂಠ ಗಾಯನದೊಡನೆ ರಾಜ್ಯೋತ್ಸವಕ್ಕೆ ಅಣಿಯಾಗಿದ್ದೇವೆ.  


ಕನ್ನಡ ಎನೆ ಕುಣಿದಾಡುವುದೆನ್ನೆದೆ ಕನ್ನಡ ಎನೆ ಕಿವಿ ನಿಮಿರುವುದು ||

ಕಾಮನ ಬಿಲ್ಲನು ಕಾಣುವ ಕವಿಯೊಳು ತೆಕ್ಕನೆ ಮನ ಮೈ ಮರೆಯುವುದು….” 

                                ರಸಋಷಿಯ ಅಮರಗೀತವು ಹೊಸ ಹುರುಪನ್ನು ತುಂಬುತ್ತಿರುವ ಈ ಸುಸಂದರ್ಭದಲ್ಲಿ ‘ಸವಿಜ್ಞಾನ’ ತಂಡದ ಎಲ್ಲ ಸದಸ್ಯರಿಗೆ, ಸಹೃದಯಿ ಲೇಖಕರಿಗೆ ‘ ಹಾಗೂ ಅಭಿಮಾನಿ ಓದುಗರಿಗೆ ನಮ್ಮ ಶುಭ ಹಾರೈಕೆಗಳು.  ನಮ್ಮನಾಡಹಬ್ಬದ ಸಂಭ್ರಮದ ವಾತಾವರಣದ ಮಧ್ಯೆ ನಿಮ್ಮ ಮಿದುಳಿಗೆ, ಮನಸ್ಸಿಗೆ ಕೊಂಚ ಮುದ ನೀಡಲು ‘ಸವಿಜ್ಞಾನ’ದ ನವಂಬರ್‌ ತಿಂಗಳ ಸಂಚಿಕೆ ನಿಮ್ಮ ಮುಂದಿದೆ.                                                                                                         

ಈ ಸಂಚಿಕೆಯ ಪ್ರಮುಖ ಆಕರ್ಷಣೆಯಾಗಿ,  ಭಾರತದ ಮೊದಲ ಪ್ರನಾಳ ಶಿಶುವಿನ ಸೃಷ್ಟಿಕರ್ತ ಡಾ. ಸುಭಾಶ್ ಮುಖ್ಯೋಪಾಧ್ಯಾಯ ನೊಬೆಲ್ ಪ್ರಶಸ್ತಿಯಿಂದ ವಂಚಿತರಾದ ದುರಂತ ಕಥೆಯ ಮುಂದುವರೆದ ಭಾಗದಲ್ಲಿ ಅವರಿಗಾದ ಅನ್ಯಾಯಕ್ಕೆ ಪ್ರಾಯಶ್ಚಿತ್ತ ಮಾಡಿದ ಮಾಹಿತಿಯನ್ನು ಹೃದಯಂಗಮವಾಗಿ ಚಿತ್ರಿಸಿದ್ದಾರೆ, ಡಾ.ಎಂ.ಜೆ.ಸುಂದರರಾಮ್ ಅವರು. " ಹೆತ್ತworryಗೆ ಹೆಗ್ಗಣ ಮುದ್ದು" ಶೀರ್ಷಿಕೆಯಲ್ಲಿ ಜೀವ ಪ್ರಪಂಚದ ಅಚ್ಚರಿಗಳನ್ನು ಅನಾವರಣಗೊಳಿಸಿದ್ದಾರೆ ಸವಿಜ್ಞಾನದ ಪ್ರಧಾನ ಸಂಪಾದಕರಾದ  ಡಾ. ಟಿ.ಎ. ಬಾಲಕೃಷ್ಣ ಅಡಿಗ ಅವರು, ಪರಮಾಣುಗಳ ಬಗ್ಗೆ ಪ್ರಾಚೀನ ಭಾರತದ ಚಿಂತನೆಯಾದ ವೈಶೇಷಿಕ ದರ್ಶನದ ಕುರಿತಂತೆ  ಮಾಹಿತಿಪೂರ್ಣ ಲೇಖನವನ್ನು  ಬರೆದಿದ್ದಾರೆ. ಶ್ರೀನಿವಾಸ್ ಎ. ಅವರು.  ಜೇಡ: ಅದರ ಸೋಜಿಗ ನೋಡ ! ಎನ್ನುವ ಲೇಖನದ ಮೂಲಕ ಜೇಡಗಳ ಜಗತ್ತನ್ನು ತೆರೆದಿಟ್ಟಿದ್ದಾರೆ, ಲೇಖಕ ಕೃಷ್ಣ ಚೈತನ್ಯರವರು. ಕೈತೊಳೆಯುವುದು ಅನೇಕ ರೋಗಗಳನ್ನು ದೂರವಿಡುತ್ತದೆ. ಶಾಲೆಗಳಲ್ಲಿ ನಡೆಸುತ್ತಿರುವ ಈ ಆಚರಣೆಗೆ ಸಂಬಂಧಿಸಿದಂತೆ.  ಕೈ ತೊಳೆಅದೇ ಆರೋಗ್ಯ ಕಳೆ  ಎಂಬ ಅನುಷ್ಠಾನಯೋಗ್ಯ ವಿಚಾರದ ಬಗ್ಗೆ ಲೇಖನವನ್ನು ಬರೆದಿದ್ದಾರೆ, ಮೇಶವಿ,ಬಳ್ಳಾ ಅವರು,   ಈ ತಿಂಗಳ ‘ಸಾಧಕ ಶಿಕ್ಷಕ’ರಾಗಿʼ ಈ ಬಾರಿಯ ಜಿಲ್ಲಾ ಮಟ್ಟದ ಶ್ರೇಷ್ಠ ಶಿಕ್ಷಕ ಪ್ರಶಸ್ತಿಗೆ ಪಾತ್ರರಾದವರಲ್ಲಿ ಒಬ್ಬರಾದ ಶ್ರೀಮತಿ ನಾಗವೇಣಿ ನಾಯಕ್‌ ಅವರನ್ನು.ಅವರ ಸಾಧನೆಯ ಹಾದಿಯನ್ನು  ಪರಿಚಯಿಸಿದ್ದಾರೆ, ಶ್ರೀಮತಿ ರೂಪ ಬಿ.ಎನ್‌ ಅವರು.

    ಇವೆಲ್ಲದರ ಜೊತೆಗೆ, ಎಂದಿನಂತೆ ಶಾಲೆಗಳಲ್ಲಿ ಮಕ್ಕಳಲ್ಲಿ ಜಾಗೃತಿ ಮೂಡಿಸಲು ಸಹಾಯಕವಾಗುವಂತೆ ನವಂಬರ್‌ ತಿಂಗಳಿನ ಪ್ರಮುಖ ದಿನಾಚರಣೆಗಳ ಬಗ್ಗೆ ಮಾಹಿತಿ ನೀಡಿದೆ. ವಿಜ್ಞಾನಕ್ಕೆ ಸಂಬಂಧಿಸಿದ ನಮ್ಮ ಸ್ಥಿರ ಅಂಕಣಗಳಾದ, ಪದಬಂಧ, ಒಗಟುಗಳು ಹಾಗೂ ವ್ಯಂಗ್ಯ ಚಿತ್ರಗಳು ನಿಮ್ಮನ್ನು ರಂಜಿಸಲಿವೆ. ಸಂಚಿಕೆಯ ಎಲ್ಲ ಲೇಖನಗಳನ್ನು ಹಾಗೂ ಅಂಕಣಗಳನ್ನು ಓದಿ, ದಯವಿಟ್ಟು ನಿಮ್ಮ ಪ್ರತಿಕ್ರಿಯೆಯನ್ನು ಬ್ಲಾಗ್‌ನಲ್ಲಿ ದಾಖಲಿಸಿ. ನಾಡು, ನುಡಿ, ವಿಜ್ಞಾನಗಳಿಗೆ ನಿಮ್ಮ ಲೇಖನಗಳ ಕಾಣಿಕೆಯ ಪುಷ್ಪಾಂಜಲಿ ಸಲ್ಲಿಲಿ ಎಂದು ಆಶಿಸುತ್ತೇನೆ.

 

ಪ್ರಧಾನ ಸಂಪಾದಕರ ಪರವಾಗಿ

ರಾಮಚಂದ್ರಭಟ್‌ ಬಿ.ಜಿ.

 

No comments:

Post a Comment