ಈ ಬ್ಲಾಗ್‌ಗೆ ಭೇಟಿ ನೀಡಿದ್ದಕ್ಕಾಗಿ ಧನ್ಯವಾದಗಳು. ನಿಮ್ಮ ಅನಿಸಿಕೆ ತಿಳಿಸಿ ಹಾಗೂ ಮತ್ತೊಮ್ಮೆ ಭೇಟಿ ಕೊಡಿ. ತಮ್ಮೆಲ್ಲರಲ್ಲಿ ಸವಿಜ್ಞಾನ ತಂಡದಿಂದ ಮನವಿ: ಕೋವಿಡ್-19 ರ ಸುರಕ್ಷತಾ ಕ್ರಮಗಳನ್ನು ಅನುಸರಿಸಿ 1)ಕಡ್ಡಾಯವಾಗಿ ಮಾಸ್ಕ್ ಧರಿಸಿ, 2)ವ್ಯಕ್ತಿಗತ ಅಂತರ ಕಾಪಾಡಿಕೊಳ್ಳಿ, 3)ಲಸಿಕೆ (ವ್ಯಾಕ್ಸಿನೇಷನ್) ಹಾಕಿಸಿಕೊಳ್ಳಿ 4)ಸಾಧ್ಯವಾದಷ್ಟು ಮನೆಯಿಂದಲೇ ಕೆಲಸ ನಿರ್ವಹಿಸಿ. 5)ಆಗಾಗ್ಗೆ ಕೈಗಳನ್ನು ಸೋಪಿನಿಂದ ತೊಳೆಯಿರಿ. 6)ರೋಗ ಲಕ್ಷಣಗಳು ಕಂಡುಬಂದ ಕೂಡಲೇ ಪರೀಕ್ಷೆ ಮಾಡಿಸಿಕೊಳ್ಳಿ Prevention is Better Than Cure

Tuesday, July 4, 2023

ಭಾರತೀಯ ಪೌರತ್ವ ಪಡೆದ ಬ್ರಿಟಿಷ್ ವಿಜ್ಞಾನಿ ಜೆ ಬಿ ಎಸ್ ಹಾಲ್ಡೇನ್

ಭಾರತೀಯ ಪೌರತ್ವ ಪಡೆದ ಬ್ರಿಟಿಷ್ ವಿಜ್ಞಾನಿ ಜೆ ಬಿ ಎಸ್ ಹಾಲ್ಡೇನ್  

                                ಲೇಖಕರು : ಡಾ..ಟಿ.ಎ.ಬಾಲಕೃಷ್ಣ ಅಡಿಗ

ಮಾನವ ಶರೀರಕ್ರಿಯಾಶಾಸ್ತ್ರ, ತಳಿವಿಜ್ಞಾನ, ಜೀವಮಾಪನಶಾಸ್ತ್ರ ಮುಂತಾದ ಹಲವು ಕ್ಷೇತ್ರಗಳಲ್ಲಿ ಸಂಶೋಧನೆ ನಡೆಸಿ, ತನ್ನ ಜೀವನದ ಕೊನೆಯ ಭಾಗದಲ್ಲಿ ಭಾರತಕ್ಕೆ ಬಂದು, ಇಲ್ಲಿಯ ಪೌರತ್ವ ಪಡೆದು, ಇಲ್ಲಿಯೇ ಕೊನೆಯುಸಿರೆಳೆದ ಖ್ಯಾತಿವೆತ್ತ ವಿಜ್ಞಾನಿ ಜೆ.ಬಿ.ಎಸ್. ಹಾಲ್ಡೇನ್ ಅವರ ಬಗ್ಗೆ ಈ ಲೇಖನ ಬರೆದವರು ಡಾ.ಟಿ.ಎ. ಬಾಲಕೃಷ್ಣ ಅಡಿಗ ಅವರು.

ವಿಜ್ಞಾನದ ಪ್ರತಿಯೊಂದು ಶಾಖೆಯಲ್ಲಿಯೂ ಭಾರತೀಯ ವಿಜ್ಞಾನಿಗಳ ಸಾಧನೆಯನ್ನು ನಾವಿಂದು ನೋಡುತ್ತಿದ್ದೇವೆ. ತಮ್ಮ ಅಮೂಲ್ಯ ಕೊಡುಗೆಗಳ ಮೂಲಕ ಅನೇಕ ಭಾರತೀಯ ವಿಜ್ಞಾನಿಗಳು ಭಾರತದ ಸ್ಥಾನವನ್ನು ವಿಜ್ಞಾನದ ಭೂಪಠದಲ್ಲಿ ಉತ್ತುಂಗಕ್ಕೆ ಏರಿಸಿದ್ದಾರೆ. ನಮ್ಮ ದೇಶದ ಸಾಕಷ್ಟು ಮಂದಿ ವಿಜ್ಞಾನಿಗಳು ಬೇರೆ, ಬೇರೆ ದೇಶಗಳಿಗೆ ಹೋಗಿ, ಅಲ್ಲಿಯ ಪೌರತ್ವ ಪಡೆದು, ತಮ್ಮ ಸಂಶೋಧನೆಗಳನ್ನು ಮುಂದುವರೆಸುತ್ತಾ ಹೆಸರು ಗಳಿಸಿರುವ ಚಿತ್ರಣ ಒಂದು ಕಡೆ ಇದ್ದರೆ, ಕೆಲ ವಿದೇಶೀಯ ವಿಜ್ಞಾನಿಗಳು ನಮ್ಮ ದೇಶದ ಸಂಸ್ಕೃತಿಗೆ ಮಾರು ಹೋಗಿ, ಇಲ್ಲಿಯೇ ಬಂದು ನೆಲಸಿ, ಭಾರತೀಯ ಪೌರತ್ವ ಪಡೆದು ತಮ್ಮ ಸಂಶೋಧನೆಗಳನ್ನು ನಡೆಸಿದ ದೃಷ್ಟಾಂತಗಳೂ ನಮ್ಮ ಮುಂದೆ ಇವೆ. ಅಂಥ ಉದಾಹರಣೆಗಳಲ್ಲಿ ಮೊದಲ ಸಾಲಿನಲ್ಲಿ ನಿಲ್ಲುವ ಹೆಸರೆಂದರೆ, ಹೆಸರಾಂತ ಜೀವವಿಜ್ಞಾನಿ, ಜೆ.ಬಿ.ಎಸ್. ಹಾಲ್ಡೇನ್ ಅವರದ್ದು.

1892ರಲ್ಲಿ ಜನಿಸಿದ ಜಾನ್ ಬರ್ಡೋಸ್ ಸ್ಯಾಂಡರ್ಸನ್ ಹಾಲ್ಡೇನ್ (John Burdos Sanderson Haldane ತನ್ನ ಪ್ರಾರಂಭದ ವಿದ್ಯಾಭ್ಯಾಸವನ್ನು ಆಕ್ಸಫರ್ಡ್ನಲ್ಲಿ ಮುಗಿಸಿದ. ಸ್ನಾತಕೋತ್ತರ ಪದವಿ ಪಡೆದ ನಂತರ ಕೇಂಬ್ರಿಡ್ಜ್ನಲ್ಲಿ ಜೀವರಸಾಯನಶಾಸ್ತ್ರದ ಅಧ್ಯಾಪಕನಾಗಿ ತನ್ನ ವೃತ್ತಿ ಪ್ರಾರಂಭಿಸಿದ. ನಂತರ, ಲಂಡನ್ನಿನ ರಾಯಲ್ ಇನ್ಸ್ಟಿಟ್ಯೂಟ್‌ನಲ್ಲಿ ಶರೀರಕ್ರಿಯಾಶಾಸ್ತ್ರದ ಪ್ರಾಧ್ಯಾಪಕನಾಗಿ ಕೆಲವು ವರ್ಷ ಸೇವೆ ಸಲ್ಲಿಸಿದ. ಈ ಅವಧಿಯಲ್ಲಿ ಮಾನವ ಶರೀರಶಾಸ್ತ್ರದ ಬಗ್ಗೆ ಸಂಶೋಧನ ಕಾರ್ಯದಲ್ಲಿ ತೊಡಗಿಸಿಕೊಂಡ. ಅವನ ತಂದೆ ಜಾನ್ ಸ್ಕಾಟ್ ಹಾಲ್ಡೇನ್() ಕೂಡ ಒಬ್ಬ ಪ್ರಖ್ಯಾತ ವಿಜ್ಞಾನಿಯಾಗಿದ್ದ. ಮಾನವ ಶರೀರಶಾಸ್ತ್ರದಲ್ಲಿನ ತನ್ನ ಸಂಶೋಧನೆಗಳಿಂದ ಆತ ಅಪಾರ ಹೆಸರು ಗಳಿಸಿದ್ದ. ತನ್ನ ತಂದೆಯ ಜೊತೆಯಲ್ಲಿಯೇ ¸ಂಶೋಧನೆಯನ್ನು ಮುಂದುವರೆಸಿದ ಹಾಲ್ಡೇನ್, ಮಾನವನ ಉಸಿರಾಟ ಕ್ರಿಯೆಯ ಬಗ್ಗೆ ವಿಶೇಷ ಅಧ್ಯಯನವನ್ನು ನಡೆಸಿದ. ಅವನ ಈ ಸಂಶೋಧನೆಗಳು ಉಸಿರಾಟ ಕ್ರಿಯೆಯ ಮೇಲೆ ಗಾಳಿಯ ಒತ್ತಡದ ಪರಿಣಾಮಗಳನ್ನು ನಿರೂಪಿಸಿದ್ದವು.

 



ಇದಲ್ಲದೆ, ಆಕ್ಸಿಜನ್‌ನ ಹೆಚ್ಚು ಒತ್ತಡ ಇರುವ ಪರಿಸರಗಳಲ್ಲಿ ಮಾನವನ ರಕ್ತದ ಒತ್ತಡದಲ್ಲಿ ಉಂಟಾಗುವ ಬದಲಾವಣೆಗಳ ಬಗ್ಗೆ ಅಧ್ಯಯನ ನಡೆಸಿದ ಹಾಲ್ಡೇನ್, ಅಂಥಾ ಸಂದರ್ಭಗಳಲ್ಲಿ ನೀಡಬಹುದಾದ ಸೂಕ್ತ ಚಿಕಿತ್ಸೆಗಳ ಬಗ್ಗೆಯೂ ತಿಳಿಸಿಕೊಟ್ಟ. ಅದೇ ರೀತಿ, ಧನುರ್ವಾಯು ಚಿಕಿತ್ಸೆಯಲ್ಲಿ ಬಳಸಬಹುದಾದ ಕೆಲವು ಸರಳ ವಿಧಾನಗಳನ್ನೂ ಸೂಚಿಸಿದ. ಕೃತಕ ಹೃದಯ-ಶ್ವಾಸಕೋಶ ಯಂತ್ರದ (Heart-lung machine) ಕಾರ್ಯತಂತ್ರಗಳನ್ನು ಸೂತ್ರದ ರೂಪದಲ್ಲಿ ತೋರಿಸಿಕೊಟ್ಟಿದ್ದು, ಹಾಲ್ಡೇನ್‌ನ ಮತ್ತೊಂದು ಪ್ರಮುಖ ಕೊಡುಗೆ.

ಹಾಲ್ಡೇನ್‌ನಲ್ಲಿ ಅಪಾರ ಆಸಕ್ತಿ ಮೂಡಿಸಿದ ಇನ್ನೊಂದು ಅಧ್ಯಯನ ಕ್ಷೇತ್ರ ಎಂದರೆ ತಳಿವಿಜ್ಞಾನ. ಆನುವಂಶೀಯತೆಗೆ ಸಂಬಂಧಿಸಿದತೆ ಮನುಷ್ಯರ ನಡುವೆ ಇರುವ ಭಿನ್ನತೆಗಳನ್ನು ಸೂಕ್ಷ್ಮವಾಗಿ ಗಮನಿಸಿದ ಹಾಲ್ಡೇನ್, ಈ ವ್ಯತ್ಯಾಸಗಳ ಆಧಾರದ ಮೇಲೆ ರಚಿತವಾದ ರಾಜಕೀಯ ಮತ್ತು ಆರ್ಥಿಕ ವ್ಯವಸ್ಥೆ ಮಾತ್ರ ಸಮರ್ಪಕವಾಗಿರಬಲ್ಲುದು ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದ !

ಪೋಷಕ ಜೀವಿಗಳಲ್ಲಿರುವ ವಂಶವಾಹಿ ಸಮೂಹಗಳ ಅಭಿವ್ಯಕ್ತಿಯಿಂದ ಹುಟ್ಟುವ ಸಂತತಿ ಎಂತಹುದು ? ಅದು, ಮಾತಾಪಿತೃಗಳ ಯಾವ ಗುಣಗಳನ್ನ ಪಡೆಯಬಹುದು? ಯಾವುದನ್ನು ಪಡೆಯಲಾರದು? ಎಂದು ಮುಂತಾದ ಲಿಂಗ ನಿರ್ಧಾರಕ ಸೂತ್ರಗಳಿಗೆ ಸಂಬಂಧಿಸಿದ ಪ್ರಶ್ನೆಗಳಿಗೆ ಉತ್ತರ ದೊರಕಿಸಿಕೊಳ್ಳುವಲ್ಲಿ ಹಾಲ್ಡೇನ್ ಯಶಸ್ವಿಯಾಗಿದ್ದ. ಇದಲ್ಲದೆ, 1920ರಲ್ಲಿ ಆರ್.ಎ.ಫಿಶರ್ ಮತ್ತು ಸೀವಾಲ್ ರೈಟ್ (R.A.Fisher and Sewall Wrightಎಂಬ ಇಬ್ಬರು ವಿಜ್ಞಾನಿಗಳ ಜೊತೆ ಸೇರಿ ತಳಿವಿಜ್ಞಾನದಲ್ಲಿ ಗಣಿತ ಸೂತ್ರಗಳನ್ನು ಬಳಸಲು ಅನುಕೂಲವಾಗುವಂಥ ಸಿದ್ಧಾಂತಗಳನ್ನು ಹಾಲ್ಡೇನ್ ರೂಪಿಸಿದ. ಒಂದು ಜೀವಿಸಮುದಾಯದಲ್ಲಿ ವಂಶವಾಹಿಗಳ ಕಲಸುವಿಕೆಯಿಂದಾಗಿ ಎಷ್ಟು ಬಗೆಯ ಭಿನ್ನತೆಗಳು ಉಂಟಾಗಬಹುದು? ಅವುಗಳಲ್ಲಿ ಅಳಿಯುವ ಹಾಗೂ ಉಳಿಯುವ ಪ್ರಮಾಣಗಳೇನು? ಎಂಬುದನ್ನು ತಿಳಿದುಕೊಳ್ಳಲು ಈ ಸಿದ್ಧಾಂತಗಳು ಉಪಯುಕ್ತ ಎನ್ನಿಸಿವೆ. ಇವುಗಳನ್ನು ಆಧಾರವಾಗಿಟ್ಟುಕೊಂಡು, ಆಧುನಿಕ ತಳಿವಿಜ್ಞಾನದ ಹಿನ್ನೆಲೆಯಲ್ಲಿ ಚಾರ್ಲ್ಸ್ ಡಾರ್ವಿನ್ನನ ‘ನೈಸರ್ಗಿಕ ಆಯ್ಕೆ’ಯ ಸಿದ್ದಾಂತವನ್ನು ವಿವರವಾಗಿ ವಿಶ್ಲೇಷಿಸಿದ ಹಾಲ್ಡೇನ್, ಇದಕ್ಕೆ ಸಂಬಂಧಿಸಿದ ಎಂಬ ಅಮೂಲ್ಯ ಕೃತಿಯೊಂದನ್ನು ಪ್ರಕಟಿಸಿದ.

ಹಾಲ್ಡೇನ್‌ನ ಮತ್ತೊಂದು ಪ್ರಮುಖ ಕೊಡುಗೆ ಎಂದರೆ ಜೀವಿಗಳ ಉಗಮಕ್ಕೆ ಸಂಬAಧಿಸಿದAತೆ ಆತ ಪ್ರ‍್ರತಿಪಾದಿಸಿರುವ ‘ ಜೀವದ ರಾಸಾಯನಿಕ ಉಗಮ ಸಿದ್ಧಾಂತ’. ಈ ಭೂಮಿಯ ಮೇಲೆ ಜೀವ ಹೇಗೆ ಹುಟ್ಟಿತು? ಮೊದಲಿನಿಂದಲೇ ಅದು ಸಸ್ಯ ಹಾಗೂ ಪ್ರಾಣಿಗಳ ರೂಪದಲ್ಲಿಯೇ ಇದ್ದಿತೇ? ಎಂಬಿತ್ಯಾದಿ ಪ್ರಶ್ನೆಗಳಿಗೆ ಉತ್ತರ ರೂಪವಾಗಿ ಬಂದ ಈ ಸಿದ್ಧಾಂತದಲ್ಲಿ ಭೂಮಿಯ ಮೇಲೆ ಜೀವದ ಹುಟ್ಟಿಗೆ ಕಾರಣವಾಗಿರಬಹುದಾದ ಪ್ರಾಚೀನ ಸ್ಥಿತಿಯನ್ನು ಹಾಲ್ಡೇನ್ ಕಲ್ಪಿಸಿಕೊಟ್ಟಿದ್ದಾರೆ.

1928ರಲ್ಲಿ ಹಾಲ್ಡೇನ್ ಪ್ರತಿಪಾದಿಸಿದ ‘ಜೀವದ ರಾಸಾಯನಿಕ ಉಗಮ’ ಸಿದ್ಧಾಂತವು, ಅದಕ್ಕೆ ಕೆಲ ವರ್ಷಗಳ ಹಿಂದೆ, 1922ರಲ್ಲಿ ರಷ್ಯಾದ ಎ.ಐ.ಒಪಾರಿನ್ (A.I.Oparinಎಂಬ ವಿಜ್ಞಾನಿ ಪ್ರತಿಪಾದಿಸಿದ ಸಿದ್ಧಾಂತಕ್ಕೆ ಬಹಳಷ್ಟು ಪೂರಕವಾಗಿದೆ. ಈ ಸಿದ್ಧಾಂತದ ಪ್ರಕಾರ, ಭೂಮಿಯ ಮೇಲೆ ಜೀವದ ಉಗಮವಾಗಿದ್ದು ಸುಮಾರು 400 ಕೋಟಿೆ ವರ್ಷಗಳ ಹಿಂದೆ. ಆಗಿನ ಭೂಮಿಯು ಒಂದು ತೀವ್ರ ತಾಪಮಾನವಿದ್ದ ಬೆಂಕಿಯ ಚೆಂಡಿನAತಿತ್ತು. ಭೂಮಿಯ ತಾಪಮಾನ ಕ್ರಮೇಣ ಕಡಿಮೆಯಾದಂತೆ, ಅದರಲ್ಲಿದ್ದ ಮೂಲವಸ್ತುಗಳು ಒಂದನ್ನೊದು ಸೇರಿಕೊಳ್ಳತೊಡಗಿದವು. ಜೀವಿಗಳಿಗೆಲ್ಲ ಮೂಲವಾದ ವಸ್ತುವಿಶೇಷಗಳಾದ ಹೈಡ್ರೋಜನ್, ಆಕ್ಸಿಜನ್, ಕಾರ್ಬನ್, ಹಾಗೂ ನೈಟ್ರೋಜನ್, ಇವುಗಳ ವಿಶಿಷ್ಟ ಸಂಯೋಜನೆಯೇ ಮೊಟ್ಟಮೊದಲ ಆದಿ ಜೀವಕೋಶದ ಉಗಮಕ್ಕೆ ಕಾರಣ ಎಂಬುದು ಈ ಸಿದ್ಧಾಂತದ ವಿವರಣೆ.

ಈ ಸಿದ್ಧಾಂತದ ಪ್ರಕಾರ, ಜೀವಿಗಳ ಉಗಮವಾದಾಗ ಭೂಮಿಯ ವಾತಾವರಣದಲ್ಲಿ ಮೀಥೇನ್, ಅಮೋನಿಯ, ಕಾರ್ಬನ್ ಡೈಆಕ್ಸೈಡ್, ನೀರಾವಿ ಮುಂತಾದ ಅನಿಲಗಳು ಮಾತ್ರ ಇದ್ದವು. ಆಕ್ಸಿಜನ್ ಮುಕ್ತ ರೀತಿಯಲ್ಲಿ ಇರಲಿಲ್ಲ. ಮುಂದೆ ಭೂಮಿಯ ವಾತಾವರಣದಲ್ಲಿ ಕ್ರಮೇಣ ಉಂಟಾದ ಬದಲಾವಣೆಗಳ ಫಲವಾಗಿ ಅನೇಕ ರೀತಿಯ ರಾಸಾಯನಿಕ ಸಂಯೋಜನೆಗಳು ನಡೆದು, ಅಂತಿಮವಾಗಿ ಮೊದಲ ಜೀವಕೋಶ ಭೂಮಿಯ ಮೇಲೆ ಕಾಣಿಸಿಕೊಂಡಿತು ಎಂಬುದು ಈ ಸಿದ್ಧಾಂತದ ಸಾರಾಂಶ. ಮುಂದೆ, ಹೆರಾಲ್ಡ್ ಯೂರಿ ಮತ್ತು ಸ್ಟ್ಯಾನ್ಲಿ ಮಿಲ್ಲರ್ (Harold Yuri and Stanley Miller), ಸಿಡ್ನಿ ಫಾಕ್ಸ್ (Sydney Fox), ಷೆರಾರ್ಡ್(Sherardಮುಂತಾದ ವಿಜ್ಞಾನಿಗಳು ತಾವು ನಡೆಸಿದ ಪ್ರಯೋಗಗಳ ಫಲಿತಾಂಶಗಳ ಆಧಾರದ ಮೇಲೆ ಹಾಲ್ಡೇನ್ ಪ್ರತಿಪಾದಿಸಿದ ಈ ಸಿದ್ಧಾಂತವನ್ನು ಒಪ್ಪಿಕೊಂಡಿದ್ದಾರೆ.

ಹೀಗೆ, ಜೀವವಿಜ್ಞಾನದ ಹಲವು ಪ್ರಮುಖ ಕ್ಷೇತ್ರಗಳಲ್ಲಿ ಸಂಶೋಧನೆ ನಡೆಸಿ, ಪ್ರಖ್ಯಾತಿ ಪಡೆದ ಹಾಲ್ಡೇನ್ ಅನೇಕ ಉತ್ತಮ ಕೃತಿಗಳನ್ನು ರಚಿಸಿ, ಅವುಗಳ ಮೂಲಕವೂ ವಿಜ್ಞಾನ ಕ್ಷೇತ್ರಕ್ಕೆ ಚಿರಪರಿಚಿತನಾಗಿದ್ದಾನೆ. ಕಿಣ್ವಗಳ ಕಾರ್ಯವೈವಿಧ್ಯವನ್ನು ತಿಳಿಸುವ Enzymes ಎಂಬ ಕೃತಿ ಅವನಿಗೆ ಅಪಾರ ಜನಮನ್ನಣೆಯನ್ನು ತಂದಿತ್ತಿದೆ. ಜೂಲಿಯನ್ ಹಕ್‌ಸ್ಲೀ() ಎಂಬ ವಿಜ್ಞಾನಿಯ ಜೊತೆಗೂಡಿ ರಚಿಸಿದ Animal Biology ಎಂಬ ಕೃತಿ ಪ್ರಾಣಿ ಪ್ರಪಂಚದ ವೈವಿಧ್ಯತೆ ಮತ್ತು ಅಚ್ಚರಿಗಳನ್ನು ನಮ್ಮ ಮುಂದೆ ತೆರೆದಿಡುತ್ತದೆ. ಹಾಲ್ಡೇನ್ ರಚಿಸಿದ ಇತರ ಜನಪ್ರಿಯ ಕೃತಿಗಳೆಂದರೆ,‘ Possible Words‘(1927), ‘Science and Ethics‘(1928),‘The Causes of Evolution’ (1938), ‘Science In War and Peace ‘ (1940) ಹಾಗೂ New Paths in Genetics‘ (1941).  

ಮಹಾನ್ ಮಾನವತಾವಾದಿಯಾಗಿದ್ದ ಹಾಲ್ಡೇನ್ 1930g ದಶಕದಲ್ಲಿ ಕಮ್ಯೂನಿಸಮ್‌ನ ತತ್ವಗಳಿಗೆ ಮಾರುಹೋಗಿ, ತನ್ನನ್ನು ಒಬ್ಬ ಮಾರ್ಕ್ಸ್ವಾದಿಯಾಗಿ ಗುರುತಿಸಿಕೊಳ್ಳಲು ಪ್ರಾರಂಭಿಸಿದ. ಕಮ್ಮುನಿಷ್ಟರ ಮುಖವಾಣಿಯಾಗಿದ್ದ ‘Daily Mirror‘ ಪತ್ರಿಕೆಯ ಸಂಪಾದಕನಾಗಿಯೂ ಹಲವು ವರ್ಷಗಳ ಕಾಲ ಸೇವೆ ಸಲ್ಲಿಸಿದ. ಅಲ್ಲಿ ಅವನಿಗೆ ಕ್ರಮೇಣ ಭರಮನಿರಸನ ಉಂಟಾಗತೊಡಗಿತು. ತನ್ನ ಸಮಕಾಲೀನನಾಗಿದ್ದ ರಷ್ಯಾದ ಖ್ಯಾತ ವಿಜ್ಞಾನಿ ಲೈಸೆಂಕೋ (Lysenko)ಗೆ ದೊರಕುತ್ತಿದ್ದ ಮನ್ನಣೆ ಅವನ ಈ ಭ್ರಮನಿರಸನಕ್ಕೆ ಪ್ರಮುಖ ಕಾರಣವಾಗಿತ್ತು. ಇದರೊಂದಿಗೆ, ಕಮ್ಯೂನಿಸಮ್ ಜೊತೆಗಿನ ಅವನ ಸಂಬಧ ಕಡಿದುಬಿತ್ತು.

ತನ್ನ ವೃತ್ತಿ ಜೀವನಕ್ಕೆ ಸಂಬAಧಿಸಿದAತೆ ಬ್ರಿಟಿಷ್ ಸರ್ಕಾರದ ಕೆಲವು ಧೋರಣೆಗಳು ಸರಿಹೊಂದುತ್ತಿಲ್ಲ ಎಂದು ಅನಿಸಿದ ಕಾರಣ, 1957ರಲ್ಲಿ ಹಾಲ್ಡೇನ್ ಲಂಡನ್ ಬಿಟ್ಟು ಭಾರತಕ್ಕೆ ವಲಸೆ ಬಂದು ಕೊಲ್ಕತ್ತಾದಲ್ಲಿ ನೆಲೆಸಿದ. ಅಲ್ಲಿಜೀವಮಾಪನ (biometryಕ್ಷೇತ್ರದಲ್ಲಿ ತನ್ನ ಸಂಶೋಧನೆಯನ್ನು ಮುಂದುವರೆಸಿದ. ಕೆಲ ವರ್ಷಗಳ ನಂತರ,  ಒರಿಸ್ಸಾದ ಭುವನೇಶ್ವರ ವಿಶ್ವವಿದ್ಯಾಲಯದಲ್ಲಿ ತಳಿವಿಜ್ಞಾನ ಹಾಗೂ ಜೀವಮಾಪನ ವಿಜ್ಞಾನದ ಮುಖ್ಯಸ್ಥನಾಗಿ  ಸೇರಿ, ತನ್ನ ಉಳಿದ ಜೀವಿತಾವಧಿಯನ್ನು ಅಲ್ಲಿಯೇ ಕಳೆದ.

ಭಾರತಕ್ಕೆ ಬಂದು ನೆಲಸಿದ ಮೇಲೆ ಹಾಲ್ಡೇನ್ ಭಾರತೀಯ ಜೀವನ ಶೈಲಿಗೆ ಮಾರು ಹೋದ. ತಾನೂ ಭಾರತೀಯ ಜೀವನಶೈಲಿಯನ್ನೇ ಅಳವಡಿಸಿಕೊಂಡ. ಭಾರತೀಯ ಉಡುಗೆಗಳನ್ನೇ ಧರಿಸುತ್ತಿದ್ದ. 1961ರಲ್ಲಿ ಭಾರತೀಯ ಪೌರತ್ವವನ್ನೂ ಪಡೆದುಕೊಂಡ.     


ತನ್ನ ವಿಶ್ಲೇಷಣಾತ್ಮಕ ಆಲೋಚನಾ ಶಕ್ತಿ, ಅಪಾರ ತಿಳುವಳಿಕೆ, ಧೀಮಂತ ಬರವಣಿಗೆ ಹಾಗೂ ಪ್ರಭಾವಪೂರ್ಣ ವ್ಯಕ್ತಿತ್ವದಿಂದ ವಿಜ್ಞಾನ ಪ್ರಪಂಚದಲ್ಲಿ ತನ್ನದೇ ಆದ ವಿಶಿಷ್ಟ ಛಾಪನ್ನು ಮೂಡಿಸಿದ್ದ ಹಾಲ್ಡೇನ್ ಅನಿರೀಕ್ಷಿತವಾಗಿ ಕ್ಯಾನ್ಸರ್ ರೋಗಕ್ಕೆ ತುತ್ತಾಗಿ, 1964ರಲ್ಲಿ ಭಾರತದಲ್ಲೇ ಕೊನೆಯುಸಿರೆಳೆದ.

No comments:

Post a Comment