ಈ ಬ್ಲಾಗ್‌ಗೆ ಭೇಟಿ ನೀಡಿದ್ದಕ್ಕಾಗಿ ಧನ್ಯವಾದಗಳು. ನಿಮ್ಮ ಅನಿಸಿಕೆ ತಿಳಿಸಿ ಹಾಗೂ ಮತ್ತೊಮ್ಮೆ ಭೇಟಿ ಕೊಡಿ. ತಮ್ಮೆಲ್ಲರಲ್ಲಿ ಸವಿಜ್ಞಾನ ತಂಡದಿಂದ ಮನವಿ: ಕೋವಿಡ್-19 ರ ಸುರಕ್ಷತಾ ಕ್ರಮಗಳನ್ನು ಅನುಸರಿಸಿ 1)ಕಡ್ಡಾಯವಾಗಿ ಮಾಸ್ಕ್ ಧರಿಸಿ, 2)ವ್ಯಕ್ತಿಗತ ಅಂತರ ಕಾಪಾಡಿಕೊಳ್ಳಿ, 3)ಲಸಿಕೆ (ವ್ಯಾಕ್ಸಿನೇಷನ್) ಹಾಕಿಸಿಕೊಳ್ಳಿ 4)ಸಾಧ್ಯವಾದಷ್ಟು ಮನೆಯಿಂದಲೇ ಕೆಲಸ ನಿರ್ವಹಿಸಿ. 5)ಆಗಾಗ್ಗೆ ಕೈಗಳನ್ನು ಸೋಪಿನಿಂದ ತೊಳೆಯಿರಿ. 6)ರೋಗ ಲಕ್ಷಣಗಳು ಕಂಡುಬಂದ ಕೂಡಲೇ ಪರೀಕ್ಷೆ ಮಾಡಿಸಿಕೊಳ್ಳಿ Prevention is Better Than Cure

Thursday, February 4, 2021

ಸಂಪಾದಕರ ಡೈರಿಯಿಂದ

 ಸಂಪಾದಕರ ಡೈರಿಯಿಂದ ..........

ಕಳೆದ ಜನವರಿ 4 ರಂದು ಲೋಕಾರ್ಪಣೆಯಾದ ‘ವಿಜ್ಞಾ’ ಬ್ಲಾಗ್‌ನ ಮೊದಲ ಸಂಚಿಕೆಯನ್ನು ನಮ್ಮ ನಿರೀಕ್ಷೆಗೂ ಮೀರಿ ಅತ್ಯಂತ ಆತ್ಮೀಯವಾಗಿ ಬರಮಾಡಿಕೊಂಡಿದ್ದೀರಿ. ಮೆಚ್ಚುಗೆಯ ಮಹಾಪೂರವನ್ನೇ ಹರಿಸಿದ್ದೀರಿ. ಕೇವಲ ವಿಜ್ಞಾನ ಶಿಕ್ಷಕರೇ ಅಲ್ಲದೆ, ಅನೇಕ ಮಂದಿ ವಿಜ್ಞಾನಾಸಕ್ತರೂ ನಮ್ಮ ಬ್ಲಾಗ್‌ಗೆ ಭೇಟಿಕೊಟ್ಟು, ಮೆಚ್ಚುಗೆಯ ಮಾತುಗಳ ಜೊತೆಗೆ, ಸಲಹೆ, ಸೂಚನೆಗಳನ್ನೂ ನೀಡಿದ್ದೀರಿ. ನಿಮಗೆಲ್ಲ ನಮ್ಮ ತಂಡದ ಪರವಾಗಿ ಹೃತ್ಪೂರ್ವಕವಾದ ಧನ್ಯವಾದಗಳು. ನಿಮ್ಮ ಅಭಿಪ್ರಾಯಗಳಿಂದಾಗಿ ನಮ್ಮ ಶ್ರಮ ಸಾರ್ಥಕವಾಗಿದೆ, ಜೊತೆಗೆ ನಮ್ಮ ಜವಾಬ್ದಾರಿಯೂ ಹೆಚ್ಚಾಗಿದೆ. ಬಂದಿರುವ ಸಲಹೆಗಳನ್ನು ಕ್ರಮೇಣ ಅಳವಡಿಸಿಕೊಂಡು ‘ಸವಿಜ್ಞಾನ’ವನ್ನು ಇನ್ನಷ್ಟು ಆಕರ್ಷಣೀಯವಾಗಿ, ಇನ್ನಷ್ಟು ಉಪಯುಕ್ತವಾಗಿ ರೂಪಿಸುವ ಸಂಕಲ್ಪ ನಮ್ಮದು.

ಈ ಬಾರಿಯ ಸಂಚಿಕೆಯಲ್ಲಿ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದ ದೇಶದ ಇಬ್ಬರು ವಿಜ್ಞಾನಿಗಳ ಬಗ್ಗೆ ಸಾಂದರ್ಭಿಕ ಲೇಖನಗಳನ್ನು ಪ್ರಕಟಿಸಲಾಗಿದೆ. ಫೆಬ್ರವರಿ 28 ರ ‘ರಾಷ್ಟ್ರೀಯ ವಿಜ್ಞಾನ ದಿನಾಚರಣೆ’ಗೆ ಸಂಬಂಧಿಸಿದಂತೆ, ನೊಬೆಲ್ ಪ್ರಶಸ್ತಿ ಪುರಸ್ಕೃತ ಸರ್ ಸಿ.ವಿ. ರಾಮನ್ ಅವರ ಬಗ್ಗೆ ಒಂದು ಲೇಖನ ಹಾಗೂ ಸಸ್ಯ ವಿಜ್ಞಾನಿ ಮತ್ತು ವಿಜ್ಞಾನ ಬರಹಗಾರ ಡಾ. ಬಿ.ಜಿ.ಎಲ್.ಸ್ವಾಮಿ ಅವರ 103ನೇ ಜನ್ಮ ದಿನೋತ್ಸವದ (ಫೆಬ್ರುವರಿ 5) ಸಂದರ್ಭದಲ್ಲಿ ಒಂದು ಲೇಖನವಿದೆ. ನಮ್ಮ ಮೊದಲ ಸಂಚಿಕೆಯನ್ನು ಲೋಕಾರ್ಪಣೆ ಮಾಡಿದ ಖ್ಯಾತ ವಿಜ್ಞಾನಿ ಸುಧೀಂದ್ರ ಹಾಲ್ದೊಡ್ಡೇರಿ ಅವರೊಂದಿಗೆ ನಮ್ಮ ತಂಡ ನಡೆಸಿದ ಸಂದರ್ಶನವೂ ಪ್ರಕಟವಾಗಿದೆ. ಜೊತೆಗೆ, ವಿಜ್ಞಾನ ಶಿಕ್ಷಕರಿಗೆ ಉಪಯುಕ್ತವಾಗಬಲ್ಲ ಹಲವು ಲೇಖನಗಳೂ ಇವೆ. ಎಂದಿನಂತೆ, ಮಿದುಳಿಗೆ ಕಸರತ್ತು ನೀಡುವ ಒಗಟುಗಳು ಹಾಗೂ ಮನಸ್ಸಿಗೆ ಮುದ ನೀಡುವ ವ್ಯಂಗ್ಯಚಿತ್ರಗಳೂ ಇವೆ. ಈ ಸಂಚಿಕೆಯೂ ನಿಮಗೆ ಮೆಚ್ಚುಗೆಯಾಗಬಹುದೆಂಬ ಆಶಯ ನಮ್ಮದು. ಇನ್ನೇಕೆ ತಡ ? ಪುಟಗಳನ್ನು ತೆರೆಯಬಹುದಲ್ಲವೇ ?

ಡಾ. ಟಿ.ಎ.ಬಾಲಕೃಷ್ಣ ಅಡಿಗ

ಪ್ರಧಾನ ಸಂಪಾದಕರು 

2 comments:

  1. ಸರ್ ಬಹಳ ಉಪಯುಕ್ತ ಮಾಹಿತಿಯ ಆಗರ ಸುವಿಜ್ಞಾನ ಸವಿಯಾಗಿದೆ

    ReplyDelete
  2. ಸರ್ ಸರಳ ಸಾಹಿತ್ಯ, ಉಪಯುಕ್ತ ಮಾಹಿತಿ, ಸುಲಲಿತ ಪದಪುಂಜಗಳೊಂದಿಗೆ ಸುವಿಜ್ಞಾನ ಸುಂದರ ಹಂದರವಾಗಿದೆ.

    ReplyDelete