ಆಲೂಗೆಡ್ಡೆಯ ಪುರಾಣ
ಲೇಖಕರು: ಕೃಷ್ಣ ಸುರೇಶ
ಚಿಪ್ಸ್, ಮಸಾಲೆ ದೋಸೆ, ಸಮೋಸ ಭಾರತೀರಯರಿಗೆ ಪ್ರಿಯವಾದ ಖಾದ್ಯಗಳೆಂದರೆ ಅತಿಶಯೋಕ್ತಿ ಅಲ್ಲ. ಈ ತಿನಿಸುಗಳನ್ನು ತಯಾರಿಸಲು ಬಳಸುವ ಆಲೂಗಡ್ಡೆಯದು ಒಂದು ದೊಡ್ಡ ಕಥಾನಕವೇ ಇದೆ. ಆಲೂಗೆಡ್ಡೆಯು ಚಿಪ್ಸ್ ನಂತಹ ಕುರುಕುಲು ತಿಂಡಿಯನ್ನು ತಯಾರಿಸುವ ತರಕಾರಿಯಾಗಿ ಉಳಿಯದೆ ಜಗತ್ತಿನ ಬಹುತೇಕ ದೇಶಗಳಲ್ಲಿ ಹಸಿವನ್ನು ನೀಗಿಸುವ ಆಹಾರ ಪದಾರ್ಥವಾಗಿ ಬೆಳೆದು ನಿಂತಿದೆ. ಆಲೂಗೆಡ್ಡೆ ಮೂಲತಃ ಭಾರತದ ಬಳೆಯಲ್ಲ. ಅದು ದಕ್ಷಿಣ ಅಮೇರಿಕಾದ ಪೆರುವಿನ ಆಂಡಿಸ್ ಪರ್ವತಗಳಲ್ಲಿ ಬೆಳೆಯುತ್ತಿದ್ದ ಆಹಾರದ ಬೆಳೆ. ಅಲ್ಲಿ ಬೆಳೆಯುತ್ತಿದ್ದ ಕಾಡು ಜಾತಿಯ ಆಲೂಗೆಡ್ಡೆ ಸಣ್ಣ ಗೋಲಿಯ ಗಾತ್ರದಲ್ಲಿದ್ದು ತಿನ್ನಲು ಕಹಿಯಾಗಿರುತ್ತಿದ್ದವು ಅಷ್ಟೇ ಅಲ್ಲದೆ ಅವನ್ನು ತಿಂದ ಪ್ರಾಣಿಗಳಿಗೆ ಮಾನವರಿಗೆ ಗಂಭೀರವಾದ ಆರೋಗ್ಯ ಸಮಸ್ಯೆಗಳನ್ನು ತಂದೊಡ್ಡವ ವಿಷವನ್ನು ಹೊಂದಿದ್ದವು. ೧00 ರಿಂದ ೮00 AD ವರೆಗೆ ಮೋಚೆ ನಾಗರಿಕತೆಯು ಇಂದಿನ ಆಧುನಿಕ ಪೆರುವಿನ ಪ್ರದೇಶದಲ್ಲಿ ವಾಸಿಸುತ್ತಿತ್ತು. ಅವರು ಯಾವುದೇ ಲಿಖಿತ ದಾಖಲೆಯನ್ನು ಬಿಟ್ಟಿಲ್ಲದಿದ್ದರೂ, ಅವರ ಕಥೆ ಬಾಟಲಿಯಲ್ಲಿನ ಸಂದೇಶದ ಮೂಲಕ ಜೀವಂತವಾಗಿದೆ. ಅಥವಾ ಹೆಚ್ಚು ನಿಖರವಾಗಿ ಹೇಳುವುದಾದರೆ, ಸಂದೇಶವು ಬಾಟಲಿಯಾಗಿದೆ; ನೂರಾರು ಚಿತ್ರಿಸಿದ ಮತ್ತು ಕೆತ್ತಿದ ಪಿಂಗಾಣಿಗಳನ್ನು ಮರುಪಡೆಯಲಾಗಿದೆ, ಇದು ಕಲಾತ್ಮಕ ಕುರುಹು ಪಳೆಯುಳಿಕೆಗಳಾಗಿ ಮತ್ತು ಆಕರ್ಷಕ ನಾಗರಿಕತೆಯ ಜೀವನ ಮತ್ತು ನಂಬಿಕೆ ವ್ಯವಸ್ಥೆಗಳ ಒಂದು ನೋಟವಾಗಿ ಕಾರ್ಯನಿರ್ವಹಿಸುತ್ತದೆ. ಅವರು ರಚಿಸಿದ ಜಾಡಿಗಳು ಮತ್ತು ಬಾಟಲಿಗಳಲ್ಲಿ ಸಾಮಾನ್ಯ ವಿಷಯವೆಂದರೆ ಆಲೂಗಡ್ಡೆಯ ಚಿತ್ರ. ವಿಚಿತ್ರವೆಂದರೆ ಆಲೂಗಡ್ಡೆಯ ಹೋಲಿಕೆಯು ಸಾಮಾನ್ಯವಾಗಿ ಮಾನವರು, ಮಾನವ ಮುಖಗಳನ್ನು ಹೊಂದಿರುವ ಗೆಡ್ಡೆಗಳು, ಎರಡು ಆಲೂಗಡ್ಡೆ ಕಣ್ಣುಗಳು ಮಾನವ ಕಣ್ಣುಗಳಾಗಿ ದ್ವಿಗುಣಗೊಳ್ಳುತ್ತವೆ ಅಥವಾ ದೈತ್ಯ ಗೆಡ್ಡೆಗಳ ಮೇಲೆ ಕುಳಿತಿರುವ ಮಾನವರೊಂದಿಗೆ ವಿಲೀನಗೊಂಡಿದೆ. ಆಲೂಗಡ್ಡೆಯ ಮೇಲಿನ ಮೊಗ್ಗುಗಳನ್ನು ಉಲ್ಲೇಖಿಸುವಾಗ ಸಂವೇದನಾ ಅಂಗ 'ಕಣ್ಣು' ಎಂಬ ಪದದ ಬಳಕೆಯು ಇಂಗ್ಲಿಷ್ಗೆ ಸೀಮಿತವಾಗಿಲ್ಲ, ಆದರೆ ಸ್ಪ್ಯಾನಿಷ್ ಮತ್ತು ಅನೇಕ ಸ್ಥಳೀಯ ದಕ್ಷಿಣ ಅಮೆರಿಕಾದ ಭಾಷೆಗಳಲ್ಲಿಯೂ ಕಂಡುಬರುತ್ತದೆ [3]. ಮೋಚೆ ಕಲೆಯಲ್ಲಿ ಮಾನವ-ಆಲೂಗಡ್ಡೆ ಮಿಶ್ರತಳಿಗಳ ಮಹತ್ವ ಮತ್ತು ಸಂಕೇತವನ್ನು ನಾವು ಖಚಿತವಾಗಿ ತಿಳಿಯಲು ಸಾಧ್ಯವಿಲ್ಲ; ಆದಾಗ್ಯೂ, ಅವುಗಳ ಹರಡುವಿಕೆಯು ಆಲೂಗಡ್ಡೆ ಮೋಚೆ ಸಂಸ್ಕೃತಿಯ ಮತ್ತು ಧರ್ಮದ ಅವಿಭಾಜ್ಯ ಅಂಗವಾಗಿತ್ತು ಎಂದು ಸೂಚಿಸುತ್ತದೆ ಮತ್ತು ಕೆಲವು ಆಲೂಗಡ್ಡೆ ಪಾತ್ರೆಗಳನ್ನು ಅಂತ್ಯಕ್ರಿಯೆಯ ಆಚರಣೆಗಳಲ್ಲಿ ಬಳಸಲಾಗುತ್ತಿತ್ತು ಎಂದು ತೋರುತ್ತದೆ. ಹೊಸ ಜೀವನವನ್ನು ಸೃಷ್ಟಿಸಲು ಆಲೂಗಡ್ಡೆಯನ್ನು ಹೂಳಲಾಗುತ್ತದೆ, ಈ ಸಂದರ್ಭದಲ್ಲಿ ಆಲೂಗಡ್ಡೆಯ ಸಂಕೇತವು ಕಾಲದ ಮರಳಿನಿಂದ ಹೂತುಹೋಗಿರುವ ಸಂಸ್ಕೃತಿಯ ನಂಬಿಕೆ ವ್ಯವಸ್ಥೆಗಳಲ್ಲಿ ಆಕರ್ಷಕ ಆದರೆ ನಿಗೂಢ ಪೀರ್ ಆಗಿದೆ.
ಬರಗಾಲದಿಂದ ಕಂಗೆಟ್ಟಿದ್ದ ಅಲ್ಲಿನ ಇಂಕಾ ಜನಾಂಗದವರು ಈ ಕಾಡು ಆಲೂಗೆಡ್ಡೆಗಳನ್ನು ಅಹಾರ ಯೋಗ್ಯಗೊಳಿಸಲು ಪಳಗಿಸಿದವರಲ್ಲಿ ಮೊದಲಿಗರು. ಕಹಿ ಮತ್ತು ವಿಷಕರವಾಗಿದ್ದ ಕಾಡು ಆಲೂಗೆಡ್ಡೆಯನ್ನು ಆಂಡೀಸ್ ಪರ್ವತದಲ್ಲಿ ಆವರಿಸಿರುವ ಮಂಜು ಮತ್ತು ಅತಿ ತಂಪಿತ ನೀರಿನ ಪ್ರವಾಹಕ್ಕೆ ಒಡ್ಡಿ ಅನೇಕ ದಿನಗಳ ವರೆಗೆ ಇಟ್ಟಾಗ ಅದರಲ್ಲಿ ಕಹಿ ಮತ್ತು ವಿಷಕರ ಅಂಶಗಳು ತೊಳೆದು ಹೋಗಿ ಅವು ತಿನ್ನಲು ಯೋಗ್ಯವಾಗುವುದನ್ನು ಅವರು ಕಂಡು ಕೊಂಡರು. ಹೀಗೆ ಕಾಲಾಂತರದಲ್ಲಿ ಹೇಗೋ ಕಹಿ ರುಚಿ ಮತ್ತು ವಿಷದ ಅಂಶ ಮುಕ್ತವಾದ ಆಲೂಗೆಡ್ಡೆಯನ್ನು ಅವರು ತಮ್ಮ ಜಮೀನುಗಳಲ್ಲಿ ಬೆಳಸಲು ತೊಡಗಿದರು. ಈ ಹಂತ ತಲುಪುವಷ್ಟರಲ್ಲಿ ಆಲೂಗೆಡ್ಡೆ ಅವರ ದಿನನಿತ್ಯದ ಆಹಾರ ಪದಾರ್ಥವಾಗಿ ಅಡುಗೆ ಮನೆ ಸೇರಿದ್ದಿತು. ವರ್ಷದ ಒಂದು ಕಾಲದಲ್ಲಿ ಬೆಳೆದ ಆಲೂಗೆಡ್ಡೆಯನ್ನು ವರ್ಷವಿಡೀ ಬಳಸಲು ಅವರು ಒಂದು ಸಂರಕ್ಷಣಾ ವಿಧಾನವನ್ನು ಕಂಡು ಕೊಂಡಿದ್ದರು. ಭೂಮಿಯಿಂದ ಅಗೆದು ತೆಗೆದ ಆಲೂ ಗೆಡ್ಡೆಯನ್ನು ಬಯಲಿನಲ್ಲಿ ಹರಡಿ ರಾತ್ತಿ ಅಂತಿಯಾದ ತಂಡಿಗೆ ಒಡ್ಡುವುದು ಮತ್ತು ಹಗಲಿನಲ್ಲಿ ಪ್ರಕರವಾಗಿ ಸುಡುವ ಬಿಸಿಲಿಗೆ ಒಡ್ಡುವುದು. ಈ ನಡುವೆ ಕಾಲಿನಿಂದ ತುಳಿದು ಅದರಲ್ಲಿ ನೀರಿನ ಅಂಶವನ್ನು ಹೊರಬರುವಂತೆ ಮಾಡಿ ಪುನಃ ಪುನಃ ಒಣಗಿಸಿದಾಗ ಅದು ಇಡೀ ವರ್ಷ ಕೆಡದಂತೆ ಇಡಲು ಸಾಧ್ಯವಾಗುತ್ತಿತ್ತು. ಈ ವಿಧಾನವು ಬಹುಶಃ ಹಣ್ಣ ತರಕಾರಿಗಳನ್ನು ದೀರ್ಘಕಾಲ ಸಂರಕ್ಷಿಸಿಡಲು ಮಾಡಿದ ಮೊದಲ ಯಶಸ್ವಿ ಪ್ರಯತ್ನವೆನ್ನಬಹುದು. ಹೀಗೆ ಕಾಡು ಗಿಡವೊಂದು ಅಲ್ಲಿನ ಜನರ ಮುಖ್ಯ ಆಹಾರ ಪದಾರ್ಥವಾಗಿ ಪೆರು ಚಿಲಿ ಮುಂತಾದ ದೇಶಗಳ ಆಂಡಿಸ್ ಪರ್ವತಗಳಲ್ಲಿ ನೂರಾರು ವಿವಿಧ ತಳಿಗಳ ಆಲೂಗೆಡ್ಡೆಯನ್ನು ಅವರು ಬೆಳೆಯುತ್ತಿದ್ದರು.
ಹೀಗೆ ಆಂಡಿಸ್ ಪರ್ವತಗಳಿಗೆ ಮೀಸಲಾಗಿದ್ದ ಆಲೂಗೆಡ್ಡೆಯ ನಸೀಬು ಬದಲಾದದ್ದು ಸ್ಪೇನಾರ್ಡರ ದಾಳಿಯಿಂದ. ಪೆರು ಮುಂತಾದ ದೇಶಗಳನ್ನು ಆಕ್ರಮಿಸಿದ ಸ್ಪೇನಾರ್ಡರು ಅಲ್ಲಿನ ಇಂಕಾಗಳು ಮಾಯಾಗಳ ಕಲೆ ಧರ್ಮ ಸಂಸ್ಕೃತಿಯನ್ನು ನಿರ್ನಾಮ ಮಾಡಿದ್ದರ ಜೊತೆಗೆ , ನೆಲೆದ ಒಳಗೆ ಫಲ ಕೊಡುವ ವಿಚಿತ್ರ ಬೆಳೆಯೆನಿಸಿದ್ದ ಆಲೂಗೆಡ್ಡೆಯನ್ನು ಯುರೋಪಿಗೆ ಅಲಂಕಾರಿಕ ಗಿಡವಾಗಿ ಪರಿಚಯಿಸಿದ್ದು ಮತ್ತೊಂದುಕೀರ್ತಿಗೆ ಭಾಜನರಾಗಿದ್ದಾರೆ. ಗೋಧಿ, ಬಾರ್ಲಿ, ಓಟ್ಸ್, ನಂತಹ ನೆಲದ ಮೇಲೆ ಎತ್ತರಕ್ಕೆ ಬೆಳೆದು ಫಸಲು ಕೊಡುವ ಬೆಳೆಗಳನ್ನು ಕಂಡಿದ್ದ ಯುರೋಪಿಯನ್ನರು ನೆಲೆದೊಳೆಗೆ ಬೆಳೆಯುವ ಆಲೂಗೆಡ್ಡೆಯನ್ನು ತಿರಸ್ಕಾರದಿಂದ ಕೀಳಾಗಿಯೇ ಕಂಡರು. ಆಲೂಗೆಡ್ಡೆ ಹಂದಿ ಮುಂತಾದ ಪಶುಗಳಿಗೆ ಮಾತ್ರ ಲಾಯಕ್ಕಾದ ಆಹಾರವೆಂದು ಕಡೆಗಣಿಸಿದ್ದರು. ಆದರೂ ಕೂಲಿ ಕಾರ್ಮಿಕರು ಮತ್ತು ಸೆರೆವಾಸಿಗಳಿಗೆ ಆಲೂಗೆಡ್ಡೆಯನ್ನು ಆಹಾರವಾಗಿ ನೀಡುವುದು ಅಗ್ಗದ ಆಹಾರ ನಿರ್ವಹಣೆಯಾಗಿದ್ದಿತು. ಆಲೂಗೆಡ್ಡೆ ತಿಂದವರಿಗೆ ಕುಷ್ಟ ರೋಗ ಬರುತ್ತದೆ ಎಂಬ ಮೂಢ ನಂಬಿಕೆ ಕಡುಬಡವರೂ ಅದನ್ನು ಬಳಸಲು ಹಿಂದೇಟು ಹಾಕುವಂತೆ ಮಾಡಿದ್ದಿತು. ಕಾಲಾಂತರದಲ್ಲಿ ಆಲೂಗೆಡ್ಡೆಯ ಮೇಲೆ ಇದ್ದ ಅಪವಾದಗಳು ಕಡಿಮೆಯಾಗುತ್ತ ಬರತೊಡಗಿ ಜನರು ಆಹಾರವಾಗಿ ಬಳಸಲು ತೊಡಗಿದರು. ಯುದ್ದದ ಸನ್ನಿವೇಶಗಳಲ್ಲಿ ನೆಲದ ಮೇಲೆ ಬೆಳೆಯುತ್ತಿದ್ದ ಗೋಧಿ, ಬಾರ್ಲಿ ಮುಂತಾದ ಬೆಳೆಗಳನ್ನು ಶತೃಗಳ ಪಡೆ ದಾಳಿ ಮಾಡಿ ಸುಟ್ಟು ಹಾಕಿ ತಮ್ಮ ವಿರೋಧಿಗಳಿಗೆ ಆಹಾರದ ಸಮಸ್ಯೆಯಾಗುವಂತೆ ಮಾಡುತ್ತಿದ್ದರು. ಆಗ ಸಹಾಯಕ್ಕೆ ಬಂದದ್ದು ಆಲೂಗೆಡ್ಡೆ. ನೆಲದಾಳದಲ್ಲಿದ್ದ ಆಲೂಗೆಡ್ಡೆ ಪಸಲು ಶತ್ರಗಳ ದಾಳಿಗೆ ಸುಲಭವಾಗಿ ಸಿಲುಕುವುದಿಲ್ಲವಾದ್ದರಿಂದ ರಾಜರುಗಳು ಚಕ್ರಾಧಿಪತಿಗಳು ಆಲೂಗೆಡ್ಡೆಯನ್ನು ಬೆಳೆಯಲು ರೈತರಿಗೆ ಪ್ರೋತ್ಸಾಹ ನೀಡತೊಡಗಿದರು. ಅಂತಹವರಲ್ಲಿ ಪ್ರಶ್ಯಾದ ದೊರೆ ಫೆಡ್ರಿಕೆ ಮೊದಲಿಗನು. ಅವನು ತನ್ನ ಅರಮನೆಯ ಉದ್ಯಾನದಲ್ಲಿ ಆಲೂಗೆಡ್ಡೆಯನ್ನು ನೆಟ್ಟು ಆ ಬೆಳೆಗೆ ಇನ್ನಿಲ್ಲದಂತೆ ರಕ್ಷಕ ಭಟರಿಂದ ಬಿಗಿ ಬಂದೋಬಸ್ತು ಮಾಡಿ ಅದಕ್ಕೆ ಹೆಚ್ಚು ಪ್ರಚಾರ ಸಿಗುವಂತೆ ಮಾಡಿದನು. ರಾಜಬೆಳೆ ನೋಡಲು ಜನರು ಕಿಕ್ಕಿರಿದು ಸೇರುತ್ತಿದ್ದರು. ಫಸಲು ಕಟಾವು ಬರುವ ಹೊತ್ತಿಗೆ ಈ ರಾಜ ಬೆಳೆಯನ್ನು ಕಾಯಲು ರಾಜಭಟರು ಇಲ್ಲದಿರುತ್ತಿದ್ದರು. ಇಂತಹ ಪರಿಸ್ಥಿತಿಯನ್ನು ಬಳಸಿಕೊಂಡ ಸಾರ್ವಜನಿಕರು ಆಲೂಗೆಡ್ಡೆಯನ್ನು ಕದ್ದೊಯ್ದಯ ತಾವು ಬಳಸುವುದರ ಜೊತೆಗೆ ತಮ್ಮ ಕೈಲಾದ ಮಟ್ಟಿಗೆ ಬೆಳೆದು ಕೊಳ್ಳಲು ತೊಡಗಿದರು. ಇದರ ಪರಿಣಾಮ ಪ್ರಶ್ಯಾದಲ್ಲಿ ವರ್ಷಗಳುಉರುಳುವುದರ ಒಳಗೆ ಆಲೂಗೆಡ್ಡೆ ಜನಪ್ರಿಯ ಆಹಾರದ ಬೆಳೆಯಾಗಿ ವಿಸ್ತಾರ ಗೊಂದಿತ್ತು. ಪದೇ ಪದೇ ಶತ್ಥಗಳ ಗಾಳಿಗೆ ಸಿಲುಕುತ್ತಿದ್ದ ತನ್ನ ದೇಶದ ಪ್ರಜೆಗಳಲ್ಲಿ ಆಲೂಗೆಡ್ಡೆಯ ಬಗ್ಗೆ ಇದ್ದ ತಿರಸ್ಕಾರವನ್ನು ಹೋಗಲಾಡಿಸಿ ಬರಗಾಲದಲ್ಲಿ ಅವರು ಹಸಿವಿನಿಂದ ನರಳದಿರುವಂತೆ ಮಾಡಲು ಅಲೂಗೆಡ್ಡೆಯ ಪ್ರಚಾರಕ್ಕೆ ಫೆಡ್ರಿಕ್ ಮಾಡಿದ ಒಂದು ಈ ಒಂದು ಉಪಾಯ ಯಶಸ್ವಿಯಾಗಿತ್ತು. ಇದಕ್ಕೆ ಕೃತಜ್ಞತಾ ಪೂರ್ವಕವಾಗಿ ದೊರೆ ಫೆಡ್ರಿಕ್ಕನ ಸಮಾದಿಯ ಮೇಲೆ ಆಲೂಗೆಡ್ಡೆಯ ರಾಜ ಎಂಬ ಬರಹ ಇಂದಿಗೂ ರಾರಾಜಿಸುತ್ತಿದೆ. ಅವನ ಸಮಾದಿಯ ಸುತ್ತ ಆಲೂ ಗೆಡ್ಡೆಯ ಗಿಡಗಳು ವರ್ಷವಿಡೀ ನಳನಳಸುತ್ತಿರುತ್ತವೆ. ಇದೇ ಫೆಡ್ರಿಕ್ ಪಕ್ಕದ ಫ್ರಾಂಸಿನೊಂದಿಗೆ ನಡೆದ ಯುದ್ದದಲ್ಲಿ ಫ್ರೆಂಚರ ಆಂಟೋನಿಯೋ ಅಗಸ್ಟಿನೋ ಪಾರ್ಮೆಂಟಿಯರ್ ಎನ್ನುವ ಔಷಧಿ ಪಂಡಿತನನ್ನು ಸೆರೆಹಿಡಿಯುತ್ತಾನೆ. ಅವನನ್ನು ಬಂಧನದಲ್ಲಿರಿಸಿ ಪ್ರತಿದಿನ ಅವನಿಗೆ ಬೇಯಿಸಿದ ಆಲೂಗೆಡ್ಡೆಯನ್ನೆ ತಿನ್ನಲು ನೀಡಲಾಗುತ್ತದೆ. ಆಲೂಗೆಡ್ಡೆಯ ರುಚಿಗೆ ಪಳಗಿದ್ದ ಅವನನ್ನು ಬಿಡುಗಡೆಗೊಳಿಸಿದ ಮೇಲೆ ಅವನು ಫ್ರಾಂಸಿಗೆ ಇಂತಿರುಗಿ ಆಲೂಗೆಡ್ಡಯ ಕೃಷಿಯ ಪ್ರಚಾರದಲ್ಲಿ ತೊಡಗುತ್ತಾನೆ. ಇಷ್ಟಾಗಿ ಹದಿನೆಂಟನೆಯ ಶತಮಾನ ಮುಗಿಯುವ ಹೊತ್ತಿಗೆ ಆಲೂಗೆಡ್ಡೆ ಯುರೋಪು ಮತ್ತು ರಷ್ಯಾವನ್ನು ಆವರಿಸಿ ಬಹುತೇಕ ಮುಖ್ಯ ಆಹಾರ ಬೆಳೆಯಾಗಿ ಬಿಟ್ಟಿದ್ದಿತು. ಆಲೂಗೆಡ್ಡೆಯ ಪ್ರಸಿದ್ಧಿ ಮುಟ್ಟಿದ ಹಂತವನ್ನು ಕೇಳಿದರೆ ನೀವು ನಗದೆ ಇರಲಾರಿರಿ. ಈ ಗಿಡ ಎಕ್ಸಾಟಿಕ್ ಪ್ಲಾಂಟ್ ಆಗಿ ರಾಜರು, ಪಾದ್ರಿಗಳು ಮುಂತಾಗಿ ಸಮಾಜದ ಗಣ್ಯ ವ್ಯಕ್ತಿಗಳ ಪ್ರತಿಷ್ಠೆಯ ಗಿಡವಾಗಿ ಬೆಳೆದು ಬಿಟ್ಟಿತ್ತು. ಪ್ರತಿಷ್ಟಿತ ಕುಟುಂಬದ ಸಮಾಗಮದ ಸಂದರ್ಭದಲ್ಲಿ ಆಲೂಗೆಡ್ಡೆಯ ಹೂಗುಚ್ಚ ನೀಡುವುದೇನು, ತಮ್ಮ ತೋಟದ ಆಲೂಗೆಡ್ಡಯ ಹೂವಿನ ಸೊಬಗನ್ನು ವರ್ಣಿಸುವುದೇನು, ಹೀಗೆ ಮುಂದೆ ಮುಂದೆ ಅರಿಸ್ಟೋಕ್ರಾಟ್ ಮಹಿಳೆಯರು ತಮ್ಮ ತುರುಬಿನಲ್ಲಿ ಆಲೂಗೆಡ್ಡೆ ಹೂವನ್ನು ಮುಡಿದು ಬಿಂಕದಿಂದ ನಡಿಗೆ ಹಾಕುವುದು ಫ್ಯಾಷನ್ ಆಗಿ ಬಿಟ್ಟಿತು! ಒಟ್ಟಾರೆ ಹೊಟ್ಟೆಗೆ ಹಿಟ್ಟು ಮತ್ತು ಜುಟ್ಟಿಗೆ ಮಲ್ಲಿಗೆಯಾಗಿಯೂ ಮೆರೆದು ಇತಿಹಾಸ ಸೃಷ್ಟಿಸಿ ಬಿಟ್ಟಿತು ಅಲೂಗೆಡ್ಡೆ!!!
ಹೀಗೆ ಯುರೋಪಿನಾದ್ಯಂತ ಹರಿಡಿದ ಈ ಬೆಳೆ ಒಂದು ಹಂತದಲ್ಲಿ ಅಮೇರಿಕಾದಿಂದ ಬಂದ ಆಲೂಗೆಡ್ಡೆಯ ನಂಜುರೋಗ ಐರ್ಲೆಂಡಿನ ಮುಖ್ಯ ಆಹಾರ ಬೆಳೆಯಾಗಿದ್ದ ಆಲೂಗೆಡ್ಡೆಯ ಫಸಲವನ್ನು ಸರ್ವ ನಾಶ ಮಾಡಿ ಬಿಟ್ಟಿತು. ಇದರ ಪರಿಣಾಮದಿಂದ ಐರ್ಲೆಂಡ್ ಒಂದರಲ್ಲಿ ಸುಮಾರು ಹತ್ತು ಲಕ್ಷ ಜನ ಹಸಿವಿನಿಂದ ಸತ್ತರು. ಮತ್ತು ಹತ್ತು ಲಕ್ಷ ಹೊಟ್ಟಿ ಪಾಡಿಗಾಗಿ ಜನ ಅಮೆರಿಕಾಗೆ ವಲಸೆ ಹೋಗಿ ನೆಲೆಸಿದರು. ವೈಜ್ಞಾನಿಕ ವಿಶ್ಲೇಷಣೆಯ ನಂತರ ತಿಳಿದು ಬಂದ ಕಾರಣ ಏನೆಂದರೆ ಒಂದೇ ತಳಿಯ ಆಲೂಗೆಡ್ಡೆಯನ್ನು ಬೆಳೆದದ್ದರ ಪರಿಣಾಮ ಒಟ್ಟಿಗೆ ಆದ ಫಸಲಿ ನಷ್ಟಕ್ಕೆ ಎಂದು ತೀರ್ಮಾನಕ್ಕೆ ಬರಲಾಯಿತು. ಕ್ರಮೇಣ ವಿವಿಧ ತಳಿಗಳ ಆಭಿವೃದ್ಧಿ ಮಾಡುವುದರ ಜೊತೆಗೆ ಸಸ್ಯ ಸಂರಕ್ಷಣೆಯಲ್ಲಿ ಆದ ಸುಧಾರಣೆಗಳ ಕಾರಣದಿಂದ ಫಸಲನ್ನು ಬಾಧಿಸುವ ರೋಗ ಕೀಟಗಳ ಸಮಸ್ಯೆಗೆ ಪರಿಹಾರವನ್ನು ಒದಗಿಸಿದವು.
ಬ್ರಿಟನ್ನಿನಲ್ಲಿ ಆಲೂಗೆಡ್ಡೆಯ ಸೇವನೆಯಿಂದ ರಿಕೆಟ್ಸ್, ಕ್ಷಯರೋಗ, ಸಿಫಿಲಿಸ್ ಮುಂತಾದ ರೋಗಗಳು ಬರುವುದು ಬೊಜ್ಜು ಬೆಳೆಯುವುದು ಎಂಬ ಅಪಪ್ರಚಾರ ಜೋರಾಗಿಯೇ ಇದ್ದಿತು. ಆಲೂಗೆಡ್ಡೆ ಬೆಳೆಯುವುದನ್ನು ನಿರ್ಬಂಧಿಸಬೇಕೆಂದು ಚಳುವಳಿ ನಡೆಸಲು ಅನೇಕ ಸಂಘಟನೆಗಳು ಸಹ ಹುಟ್ಟಿದ್ದವು. ಆದರೆ ಕಾಲ ಕ್ರಮೇಣ ಬ್ರಿಟನ್ ಸಹ ಆಲೂಗೆಡ್ಡಯನ್ನು ತನ್ನದಾಗಿಸಿಕೊಂಡಿತು, ಎರಡನೆಯ ಮಹಾಯುದ್ದದ ಸಮಯದಲ್ಲಿ ಗೋಧಿಯು ಹೋರಾಟದ ಮುಂಚೋಣಿಯಲ್ಲಿದ್ದ ಬ್ರಿಟಿಷ್ ಸೈನಿಕರಿಗೆಂದು ಮೀಸಲಿರಿಸಿದಾಗ ಜನಸಾಮಾನ್ಯರನ್ನು ಹಸಿವಿನಿಂದ ಕಾಪಾಡಿದ್ದು ಇದೇ ಅಲೂಗೆಡ್ಡೆಯೇ. ದಿನಕ್ಕೊಂದು ಸೇಬು ತಿನ್ನು,ವೈದರನ್ನು ದೂರವಿಡು ಎನ್ನುವ ಮಾತನ್ನು ಈ ದಿನ ನಾವು ಕೇಳಿದ್ದೇವೆ. ಅಂದಿನ ಬ್ರಿಟನ್ನಿನಲ್ಲಿ ಆಲೂಗೆಡ್ಡಯ ಪ್ರಚಾರವೂ ಇದೇ ರೀತಿ ಇತ್ತು ಅಂದರೆ ನೀವು ಆಶ್ಚರ್ಯಪಡುತ್ತೀರಿ. ಎರಡನೆಯ ಮಹಾಯುದ್ಧದ ತರುವಾಯ ಯುದ್ಧದ ಕಾರಣದಿಂದ ನಲುಗಿಹೋಗಿದ್ದ ಅನೇಕ ಯುರೊಪಿಯನ್ ದೇಶಗಳು ಚೇತರಿಸಿಕೊಳ್ಳಲು ಆಲೂಗೆಡ್ಡೆಯ ಕೊಡುಗೆ ದೊಡ್ಡದಿದೆ. ಈಮಧ್ಯ ಕೊಲೊರಾಡೋ ಬೀಟಲ್ ಎಂಬ ಹುಳಿವಿನ ಕಾಟ ಯುರೋಪಿನ ಆಲೂಗೆಡ್ಡಯ ಬೆಳೆಯ ಅಸ್ತಿತ್ವವನ್ನೇ ಅಲುಗಾಡಿಸ ತೊಡಗಿತು. ಅಮೇರಿಕನ್ನರು ಈ ಕೀಟವನ್ನು ತಂದು ಪ್ಯಾರಶೂಟಗಳ ಮೂಲಕ ದುರುದ್ಧೇಶಪೂರ್ವಕವಾಗಿ ಸುರಿದಿದ್ದಾರೆ ಎನ್ನುವ ಮಾತುಗಳು ಆಗ ಕೇಳಿಬಂದವು.
ಬಟಾಟಾ ಎಂದು ಉಲ್ಲೇಖಿಸಿಲಾದ ಈ ಗೆಡ್ಡೆಯನ್ನು 17 ನೇ ಶತಮಾನದ ಆರಂಭದಲ್ಲಿ ಸಮುದ್ರ ಮಾರ್ಗದ ಮೂಲಕ ಪೋರ್ಚುಗೀಸ್ ವ್ಯಾಪಾರಿಗಳು ಭಾರತಕ್ಕೆ ತಂದರು, ಆರಂಭದಲ್ಲಿ ಮಲಬಾರ್ ಕರಾವಳಿಯಲ್ಲಿ ಮತ್ತು ನೀಲಗಿರಿ ಬೆಟ್ಟಗಳಲ್ಲಿ ಸಣ್ಣ ಪ್ರಮಾಣದಲ್ಲಿ ಬೆಳೆಯಲಾಗುತ್ತಿತ್ತು. 18 ನೇ - 19 ನೇ ಶತಮಾನದ ಅಂತ್ಯದಲ್ಲಿ ಬ್ರಿಟಿಷ್ ವಸಾಹತುಶಾಹಿ ವ್ಯಾಪಾರಿಗಳು ಮತ್ತು ಸಸ್ಯಶಾಸ್ತ್ರಜ್ಞರು ಈ ಬೆಳೆಯನ್ನು ಬಂಗಾಳ ಮತ್ತು ಉತ್ತರದ ಪರ್ವತ ಪ್ರದೇಶಗಳಿಗೆ ಕೃಷಿ ಮೂಲ ಬೆಳೆಯಾಗಿ ಪರಿಚಯಿಸಿದರು, ಹಿಂದಿ ಪ್ರದೇಶದ ಜನರು ಇದರ ಹೆಸರನ್ನು ಅಲು ಎಂದು ವ್ಯಾಪಕವಾಗಿ ಅಳವಡಿಸಿಕೊಂಡರು
ಭಾರತೀಯರು ಹಿಂದಿನಿಂದಲೂ ಬಳಸುತ್ತಾ ಬಂದಿರುವ ಗೆಣಸುಗಳು (ಸುರಾನ್) ಮತ್ತು ಕೊಲೊಕಾಸಿಯಾ (ಅರ್ಬಿ) ನಂತಹ ಸ್ಥಳೀಯ ಗೆಡ್ಡೆಗಳ ಜೊತೆಗೆ ಆಲೂಗಡ್ಡೆ ಹೊಸ ಸೇರ್ಪಡೆಯಾಯಿತು. ಆದರೂ ಆಲೂಗೆಡ್ಡೆಯು ಕ್ಯಾರೆಟ್, ಬೀಟ್ ರೂಟ್, ಟೊಮೊಟೊ, ಕ್ಯಾಬೇಜ್ ನಂತೆಯೇ ವಿದೇಶಿ ತರಕಾರಿಗಳಂತೆಯೆ ವಿದೇಶದಿಂದ ಬಂದದ್ದರಿಂದ ಇದನ್ನೂ ಸಂಪ್ರದಾಯಸ್ತ ಜನರು ಹಾಗು ವಾತ ಪ್ರಕೋಪವೆಂಬ ಕಾರಣಕ್ಕೆ ಮತ್ತೆ ಕೆಲವರು ಆಹಾರವಾಗಿ ಬಳಸುವುದಿಲ್ಲ. ಆದರೂ ಇಂದು, ಭಾರತೀಯ ಪಾಕ ಪದ್ಧತಿಯಲ್ಲಿ ವ್ಯಾಪಕವಾಗಿ ಇದನ್ನು ಬಳಸಲಾಗುತ್ತದೆ, ಸಮೋಸಾಗಳು, ಆಲೂ ಪರಾಠಗಳು, ವಡಾ ಪಾವ್, ಆಲೂಬಜ್ಜಿ, ಮತ್ತು ಮಸಾಲಾ ದೋಸೆಯಂತಹ ರಾಷ್ಟ್ರೀಯ ಪ್ರಧಾನ ಪದಾರ್ಥಗಳಲ್ಲಿ ಪ್ರಮುಖ ಘಟಕಾಂಶವಾಗಿ ಕಾರ್ಯನಿರ್ವಹಿಸುತ್ತದೆ. ಇದು ಭಾರತದಲ್ಲಿ ಹೆಚ್ಚು ಸೇವಿಸುವ ಎರಡನೇ ತರಕಾರಿಯ ಸ್ಥಾನಕ್ಕೆ ಬೆಳೆದಿದೆ. ಇಂದು, ಚೀನಾದ ನಂತರ ಭಾರತವು ಜಾಗತಿಕವಾಗಿ ಎರಡನೇ ಅತಿದೊಡ್ಡ ಆಲೂಗಡ್ಡೆ ಉತ್ಪಾದಕ ರಾಷ್ಟ್ರವಾಗಿದ್ದು, ಇಂಡೋ-ಗಂಗಾ ಬಯಲು ಪ್ರದೇಶಗಳಲ್ಲಿ ವ್ಯಾಪಕವಾಗಿ ಬೆಳೆಯಲಾಗುತ್ತದೆ. ಭಾರತದ ಒಟ್ಟು ಉತ್ಪಾದನೆ ವಾರ್ಷಿಕವಾಗಿ ೫೮ ರಿಂದ ೬೦ ಮಿಲಿಯನ್ ಮೆಟ್ರಿಕ್ ಟನ್ಗಳಾಗಿದೆ.
ಆಂಡಿಯನ್ ಮೂಲದಿಂದ ಜಾಗತಿಕ ಪ್ರಾಮುಖ್ಯತೆಯವರೆಗಿನ ಆಲೂಗಡ್ಡೆಯ ಪ್ರಯಾಣವು ಐತಿಹಾಸಿಕ ಮಹತ್ವ, ಸಾಂಸ್ಕೃತಿಕ ವೈವಿಧ್ಯತೆ ಮತ್ತು ಕೃಷಿ ನಾವೀನ್ಯತೆಗಳಿಂದ ಸಮೃದ್ಧವಾದ ನಿರೂಪಣೆಯಾಗಿದೆ. ನಾವು ತಿಳಿದಿರುವಂತೆ, ಆಲೂಗಡ್ಡೆಯ ಮಹತ್ವ ಕೇವಲ ತರಕಾರಿ ಅಥವಾ ಒಂದು ಆಹಾರವಾಗಿರದೇ ಅದಕ್ಕಿಂತ ಹೆಚ್ಚಿನದಾಗಿದೆ. ಜಾಗತಿಕ ಆಹಾರ ಭದ್ರತೆಯ ಒಂದು ನಿರ್ಣಾಯಕ ಅಂಶವಾಗಿದೆ. ಹಸಿವು ಮತ್ತು ಬಡತನದ ವಿರುದ್ಧದ ಹೋರಾಟದಲ್ಲಿ ಪ್ರಮುಖ ಬೆಳೆಯಾಗಿ ಮುಂದುವರೆದಿದೆ. ಇದು ಮಾನವ ಜಾಣ್ಮೆ ಮತ್ತು ಪರಿಶ್ರಮಕ್ಕೆ ಸಾಕ್ಷಿಯಾಗಿದೆ. ಆಲೂಗೆಡ್ಡೆಯ ಕತೆ ಸವಾಲುಗಳನ್ನು ಎದುರಿಸುವಲ್ಲಿ ಹೊಂದಾಣಿಕೆ, ನಾವೀನ್ಯತೆ ಮತ್ತು ಕಾಲಕ್ಕೆ ಹೊಂದಿಕೊಳ್ಳುವ ಮಾನವರಾದ ನಮ್ಮದೇ ಒಂದು ಇತಿಹಾಸವನ್ನು ಪ್ರತಿಬಿಂಬಿಸುತ್ತದೆ ಜಾಗತಿಕ ಕೃಷಿ ಮತ್ತು ಆಹಾರ ಭದ್ರತೆಯ ಸಂಕೀರ್ಣತೆಗಳನ್ನು ನಾವು ಪರಿಶೀಲನೆ ಮಾಡುವುದನ್ನು ಮುಂದುವರಿಸಿದಾಗ, ಆಲೂಗಡ್ಡೆಯು ಭರವಸೆಯಾಗಿದೆ ಮತ್ತು ಮಾನವರು ಪ್ರಕೃತಿಯೊಂದಿಗೆ ಸಾಮರಸ್ಯದಿಂದ ಕೆಲಸ ಮಾಡಿದಾಗ ಏನನ್ನು ಸಾಧಿಸಬಹುದು ಎಂಬುದಕ್ಕೆ ಸಾಕ್ಷಿಯಾಗಿ ನಿಲ್ಲುತ್ತದೆ.
|
ವೈಶಿಷ್ಟತೆಗಳು ಬಾಹ್ಯಾಕಾಶದಲ್ಲಿ ಬೆಳೆಯಲಾದ ಮೊದಲ ತರಕಾರಿ ಆಲೂಗಡ್ಡೆ ದೀರ್ಘಾವಧಿಯ ಬಾಹ್ಯಾಕಾಶ ಪ್ರಯಾಣಕ್ಕಾಗಿ ಸುಸ್ಥಿರ ಆಹಾರ ವ್ಯವಸ್ಥೆಗಳನ್ನು ಅಭಿವೃದ್ಧಿಪಡಿಸುವ ಪ್ರಯತ್ನದ ಭಾಗವಾಗಿ, 'ಸ್ಪೇಸ್ ಶಟಲ್ ಕೊಲಂಬಿಯಾ'ದಲ್ಲಿದ್ದ ಗಗನಯಾತ್ರಿಗಳು 1995ರಲ್ಲಿ ಆಲೂಗಡ್ಡೆಗಳನ್ನು ಬೆಳೆದರು. ಆಲೂಗಡ್ಡೆಗಳಲ್ಲಿ ಹಲವು ಗಾತ್ರಗಳು ಮತ್ತು ಆಕಾರಗಳಲ್ಲಿ 4,000 ಕ್ಕೂ ಹೆಚ್ಚು ವಿಧಗಳಿವೆ, ಇವುಗಳಲ್ಲಿ ಆಕರ್ಷಕ ಕೆಂಪು, ನೇರಳೆ ಮತ್ತು ಗಾಢ ನೀಲಿ ಬಣ್ಣಗಳೂ ಸೇರಿವೆ. ಇವು ಹೆಚ್ಚಾಗಿ ಆಂಡಿಸ್ನಲ್ಲಿ ಕಂಡುಬರುತ್ತವೆ. 180 ಕ್ಕೂ ಹೆಚ್ಚು ಕಾಡು ಆಲೂಗಡ್ಡೆ ಜಾತಿಗಳೂ ಇವೆ. ಅವು ತಿನ್ನಲು ತುಂಬಾ ಕಹಿಯಾಗಿದ್ದರೂ, ಅವುಗಳದೇ ಆದ ನೈಸರ್ಗಿಕ ಪ್ರಾಮುಖ್ಯವಿದೆ.
ಅಕ್ಕಿ ಮತ್ತು ಗೋಧಿಯ ನಂತರ, ಆಲೂಗಡ್ಡೆಯು ಪ್ರಪಂಚದಾದ್ಯಂತ ಮಾನವ ಬಳಕೆಗೆ ಅತ್ಯಂತ ಪ್ರಮುಖವಾದ ಮೂರನೇ ಆಹಾರ ಬೆಳೆಯಾಗಿದೆ. ನೆಲದ ತಳದಲ್ಲಿ ಆಲೂಗೆಡ್ಡೆ ಮತ್ತು ಗಿಡದಲ್ಲಿ ಟೊಮೊಟೋ ಒಂದೆ ಗಿಡದಲ್ಲಿ ನೋಡಬಹುದಾದ ಆಲೂಗೆಡ್ಡೆ ಮತ್ತು ಟೊಮೊಟೋಗಳ ಸಂಕರಣದಿಂದ ಪೊಮೊಟೋ ಗಿಡವನ್ನು ಸೃಷ್ಟಿಸಲಾಗಿದೆ, |
|
ಪೋಷಕಾಂಶಗಳ ವಿವರ ಕ್ಯಾಲೋರಿಗಳು: 161 - 164 kcal ಕಾರ್ಬೋಹೈಡ್ರೇಟ್ಸ್: 37 ಗ್ರಾಂ (ಶಕ್ತಿ ನೀಡುವ ಮುಖ್ಯ ಮೂಲ) ಪ್ರೋಟೀನ್: 3 ರಿಂದ 4.5 ಗ್ರಾಂ (ಸಸ್ಯಹಾರಿ ಪ್ರೋಟೀನ್) ಡಯೆಟರಿ ಫೈಬರ್ (ನಾರು): 3 ರಿಂದ 4 ಗ್ರಾಂ (ಜೀರ್ಣಕ್ರಿಯೆಗೆ ಉತ್ತಮ) ಕೊಬ್ಬು: 0.2 ಗ್ರಾಂ ಗಿಂತ ಕಡಿಮೆ (ಕೊಬ್ಬು ಮತ್ತು ಕೊಲೆಸ್ಟ್ರಾಲ್ ಮುಕ್ತ ವಿಟಮಿನ್ಗಳು ಮತ್ತು ಖನಿಜಗಳು ವಿಟಮಿನ್ ಸಿ: ದಿನದ ಅಗತ್ಯತೆಯ ಶೇಕಡಾ 28-30% ರಷ್ಟು ಸಿಗುತ್ತದೆ. ವಿಟಮಿನ್ ಬಿ6: ಚಯಾಪಚಯ ಕ್ರಿಯೆಗೆ ಅಗತ್ಯವಿರುವ ವಿಟಮಿನ್. ಪೊಟ್ಯಾಸಿಯಮ್ :ಬಾಳೆಹಣ್ಣಿಗಿಂತ ಹೆಚ್ಚು ಪೊಟ್ಯಾಸಿಯಮ್ ಅಂಶವಿದ್ದು, ರಕ್ತದೊತ್ತಡವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ ಕಬ್ಬಿಣಾಂಶ ರಕ್ತಹೀನತೆಯನ್ನು ತಡೆಯಲು ಸಹಕಾರಿ
|
|
ಕೈಗಾರಿಕೆಯಲ್ಲಿ ಉಪಯೋಗ
ಅತ್ಯುತ್ತಮ ಬಾಯಿ-ಅನುಭವ" ಹೊಂದಿರುವ ಸೂಕ್ಷ್ಮ, ರುಚಿಯಿಲ್ಲದ ಪುಡಿಯಾದ ಆಲೂಗೆಡ್ಡೆ ಪಿಷ್ಟವು ಗೋಧಿ ಮತ್ತು ಮೆಕ್ಕೆ ಜೋಳದ ಪಿಷ್ಟಗಳಿಗಿಂತ ಹೆಚ್ಚಿನ ಸ್ನಿಗ್ಧತೆಯನ್ನು ಒದಗಿಸುತ್ತದೆ ಮತ್ತು ಹೆಚ್ಚು ರುಚಿಕರವಾದ ಉತ್ಪನ್ನವನ್ನು ನೀಡುತ್ತದೆ. ಇದನ್ನು ಸಾಸ್ ಮತ್ತು ಸ್ಟ್ಯೂಗಳಿಗೆ ದಪ್ಪವಾಗಿಸುವ ಮಾಧ್ಯಮವಾಗಿ ಮತ್ತು ಕೇಕ್ ಮಿಶ್ರಣಗಳು, ಹಿಟ್ಟು, ಬಿಸ್ಕತ್ತುಗಳು ಮತ್ತು ಐಸ್-ಕ್ರೀಮ್ಗಳಲ್ಲಿ ಬಂಧಿಸುವ ಏಜೆಂಟ್ ಆಗಿ ಬಳಸಲಾಗುತ್ತದೆ. ಪುಡಿಮಾಡಿದ ಆಲೂಗಡ್ಡೆಯನ್ನು ಬಿಸಿ ಮಾಡಿ ಅವುಗಳ ಪಿಷ್ಟವನ್ನು ಹುದುಗುವ ಸಕ್ಕರೆಗಳಾಗಿ ಪರಿವರ್ತಿಸಲಾಗುತ್ತದೆ, ಇದನ್ನು ವೋಡ್ಕಾ ಮತ್ತು ಅಕ್ವಾವಿಟ್ನಂತಹ ಆಲ್ಕೊಹಾಲ್ಯುಕ್ತ ಪಾನೀಯಗಳ ಬಟ್ಟಿ ಇಳಿಸುವಿಕೆಯಲ್ಲಿ ಬಳಸಲಾಗುತ್ತದೆ. ಆಲೂಗಡ್ಡೆ ಪಿಷ್ಟವನ್ನು ಔಷಧೀಯ, ಜವಳಿ, ಮರ ಮತ್ತು ಕಾಗದದ ಕೈಗಾರಿಕೆಗಳು ಅಂಟಿಕೊಳ್ಳುವ, ಬೈಂಡರ್, ಟೆಕ್ಸ್ಚರ್ ಏಜೆಂಟ್ ಮತ್ತು ಫಿಲ್ಲರ್ ಆಗಿ ಮತ್ತು ಬೋರ್ಹೋಲ್ಗಳನ್ನು ತೊಳೆಯಲು ತೈಲ ಕೊರೆಯುವ ಸಂಸ್ಥೆಗಳು ವ್ಯಾಪಕವಾಗಿ ಬಳಸುತ್ತವೆ. ಆಲೂಗಡ್ಡೆ ಪಿಷ್ಟವು ಪಾಲಿಸ್ಟೈರೀನ್ ಮತ್ತು ಇತರ ಪ್ಲಾಸ್ಟಿಕ್ಗಳಿಗೆ 100% ಜೈವಿಕ ವಿಘಟನೀಯ ಪರ್ಯಾಯವಾಗಿದೆ ಮತ್ತು ಉದಾಹರಣೆಗೆ, ಬಿಸಾಡಬಹುದಾದ ತಟ್ಟೆಗಳು, ಭಕ್ಷ್ಯಗಳು ಮತ್ತು ಚಾಕುಗಳಲ್ಲಿ ಬಳಸಲಾಗುತ್ತದೆ. ಆಲೂಗಡ್ಡೆ ಸಿಪ್ಪೆ ಮತ್ತು ಆಲೂಗಡ್ಡೆ ಸಂಸ್ಕರಣೆಯಿಂದ ಬರುವ ಇತರ "ಶೂನ್ಯ ಮೌಲ್ಯ" ತ್ಯಾಜ್ಯಗಳು ಪಿಷ್ಟದಲ್ಲಿ ಸಮೃದ್ಧವಾಗಿವೆ, ಇದನ್ನು ದ್ರವೀಕರಿಸಬಹುದು ಮತ್ತು ಇಂಧನ ದರ್ಜೆಯ ಎಥೆನಾಲ್ ಅನ್ನು ಉತ್ಪಾದಿಸಲು ಹುದುಗಿಸಬಹುದು. ಕೆನಡಾದ ಆಲೂಗಡ್ಡೆ ಬೆಳೆಯುವ ಪ್ರಾಂತ್ಯದ ನ್ಯೂ ಬ್ರನ್ಸ್ವಿಕ್ನಲ್ಲಿ ನಡೆಸಿದ ಅಧ್ಯಯನವು 44,000 ಟನ್ ಸಂಸ್ಕರಣಾ ತ್ಯಾಜ್ಯವು 4-5 ಮಿಲಿಯನ್ ಲೀಟರ್ ಎಥೆನಾಲ್ ಅನ್ನು ಉತ್ಪಾದಿಸಬಹುದು ಎಂದು ಅಂದಾಜಿಸಿದೆ. ರಷ್ಯಾದ ಒಕ್ಕೂಟ ಮತ್ತು ಇತರ ಪೂರ್ವ ಯುರೋಪಿಯನ್ ದೇಶಗಳಲ್ಲಿ, ಆಲೂಗಡ್ಡೆ ಸುಗ್ಗಿಯ ಅರ್ಧದಷ್ಟು ಕೃಷಿ ಪಶು ಆಹಾರವಾಗಿ ಬಳಸಲಾಗುತ್ತದೆ. ದನಗಳಿಗೆ ದಿನಕ್ಕೆ 20 ಕೆಜಿ ಕಚ್ಚಾ ಆಲೂಗಡ್ಡೆಯನ್ನು ನೀಡಬಹುದು, ಆದರೆ ಹಂದಿಗಳು ದಿನಕ್ಕೆ 6 ಕೆಜಿ ಬೇಯಿಸಿದ ಆಲೂಗಡ್ಡೆಯ ಆಹಾರದಲ್ಲಿ ಬೇಗನೆ ಕೊಬ್ಬುತ್ತವೆ. ಕತ್ತರಿಸಿ ಸೈಲೇಜ್ಗೆ ಸೇರಿಸಲಾಗುತ್ತದೆ, ಗೆಡ್ಡೆಗಳು ಹುದುಗುವಿಕೆಯ ಶಾಖದಲ್ಲಿ ಬೇಯಿಸುತ್ತವೆ.
|
No comments:
Post a Comment