ಬೂದು ಹಾರ್ನ್ ಬಿಲ್
ಒಮ್ಮೆ ಕ್ಯಾಮರ ಹಿಡಿದು ನೀಲಕಂಠ ಪಕ್ಷಿಯ ಒಂದು ಒಳ್ಳೆಯ ಚಿತ್ರ ತೆಗೆಯಲು ಹೊಸಕೋಟೆ ಕೆರೆಯ ಬಳಿ ಗಿಡ ಮರಗಳಲ್ಲಿ ತೋಟಗಳಲ್ಲಿ ಹುಡುಕಾಟ ನೆಡೆಸಿದ್ದೆ. ಹೊಸಕೋಟೆಯ ಕೆರೆ ಬೆಂಗಳೂರು ನಗರಕ್ಕೆ ಅತಿ ಸಮೀಪದಲ್ಲಿರುವ ಒಂದು ಪಕ್ಷಿ ವೀಕ್ಷಣ ಸ್ಥಳ. ಸುಮಾರು ಆರುನೂರು ಎಕರೆಗಳಷ್ಟು ವಿಸ್ತಾರ ಹೊಂದಿರುವ ಈ ಕೆರೆಯನ್ನು ಬೆಂಗಳೂರನ್ನು ನಿರ್ಮಿಸಿದ ಕೆಂಪೇಗೌಡರ ವಂಶಸ್ಥರೇ ಆದ ಸುಗಟೂರಿನ ತಮ್ಮಗೌಡ ಎಂಬ ಪಾಳೇಗಾರರು ನಿರ್ಮಿಸಿದರು ಎಂದು ಇತಿಹಾಸ ಹೇಳುತ್ತದೆ.
ಸ್ವತಃ ತಮ್ಮೇಗೌಡರೇ ಜೋಡೆತ್ತಿನ ನೇಗಿಲನ್ನು ಹೂಡಿ ಪೂರ್ವದಿಂದ ಆರಂಭಿಸಿ ನಂತರ ಉತ್ತರಕ್ಕೆ ನಡೆದು ನಂತರ ಪಶ್ಷಿಮಕ್ಕೆ ತಿರುವು ತೆಗೆದುಕೊಂಡು ಕೊನೆಗೆ ದಕ್ಷಿಣ ದಿಕ್ಕಿಗೆ ಉಳುಮೆಯನ್ನು ಮಾಡಿದರಂತೆ. ಹೀಗೆ ನೆಲದಲ್ಲಿ ಮೂಡಿದ ಜಾಡಿನ ಮೇಲೆಯೆ ದಕ್ಷಿಣ ಪಿನಾಕಿನಿ ನದಿಗೆ ಅಡ್ಡಲಾಗಿ ಏರಿಯನ್ನು ನಿರ್ಮಿಸಿ ವಿಶಾಲವಾದ ಕೆರೆಯ ನಿರ್ಮಾಣ ಮಾಡಿದರಂತೆ. ಇಂತಹ ಕೆರೆಯು ಸಾವಿರಾರು ಎಕರೆ ಕೃಷಿ ಭೂಮಿಗೆ ನೀರು ಒದಗಿಸುವುದರ ಜೊತೆಗೆ ಅನೇಕ ಅಪರೂಪದ ಪಕ್ಷಿಗಳಿಗೆ ಆಸರೆಯ ತಾಣವಾಗಿದೆ. ೨೫೦ಕ್ಕೂ ಮಿಗಿಲಾದ ಪಕ್ಷಿ ಪ್ರಭೇದಗಳನ್ನು ಇಲ್ಲಿ ಪಕ್ಷಿ ವೀಕ್ಷಕರು ಗುರ್ತಿಸಿದ್ದಾರೆ. ಇವುಗಳಲ್ಲಿ ಯುರೋಪು, ಸೈಬೀರಿಯ, ಆಸ್ಟ್ರೇಲಿಯದಂತಹ ದೂರ ದೇಶಗಳಿಂದ ಬರುವ ವಲಸೆ ಹಕ್ಕಿಗಳ ಸಂಖ್ಯೆಯೆ ಸುಮಾರು ಅರ್ಧದಷ್ಟು ಇದೆ. ಬೂದು ಹಾರ್ನ್ ಬಿಲ್ಲುಗಳು ಮುಖ್ಯವಾಗಿ ಹಣ್ಣು ಭಕ್ಷಕಗಳು. ಅತ್ತಿಯ ಹಣ್ಣು, ನೇರಳೆ, ಪೇರಳೆ, ಪಪ್ಪಾಯಿ, ಬೆರ್ರಿ ಯಾವುದೇ ತಿರುಳು ಭರಿತ ಹಣ್ಣನ್ನು ಇಷ್ಟಪಟ್ಟು ತಿನ್ನುತ್ತವೆ. ಜೊತೆಗೆ ವಿವಿಧ ಕೀಟಗಳು, ಹಾವು ಮುಂತಾದ ಸರೀಸೃಪಗಳು, ಕಪ್ಪೆ, ಇಲಿ, ಹಲ್ಲಿಗಳನ್ನೂ ಸಹ ಬೇಟಯಾಡಿ ಭಕ್ಷಿಸುತ್ತವೆ. ಇತರೆ ಪಕ್ಷಿಗಳ ಗೂಡುಗಳಿಂದ ಮರಿಗಳನ್ನು ಕದ್ದಯೊಯ್ದು ತಿನ್ನುವುದೂ ಉಂಟು. ಒಮ್ಮೆ ಏರ್ಪಟ್ಟ ಈ ಹಕ್ಕಿಗಳ ಜೋಡಿಯು ಒಂದು ಗಂಡಿಗೆ ಒಂದು ಹೆಣ್ಣು ಎಂಬಂತೆ ಜೀವನ ಪರ್ಯಂತ ಒಟ್ಟಿಗೆ ಬಾಳುತ್ತವೆ. ಮಾರ್ಚಿಯಿಂದ ಜೂನ್ ತಿಂಗಳ ವರೆಗೆ ಇವುಗಳ ಸಂತಾನೋತ್ಪತ್ತಿಯ ಕಾಲ. ಎತ್ತರದ ಮರದ ಪೊಟರೆಯೊಂದನ್ನು ಮೊಟ್ಟೆ ಇಡಲು ಆಯ್ಕೆ ಮಾಡಿಕೊಂಡು ತಮ್ಮ ಅಗತ್ಯಕ್ಕೆ ತಕ್ಕಂತೆ ಅದನ್ನು ಸಿದ್ಧಪಟಿಸಿಕೊಳ್ಳುತ್ತವೆ. ಹೆಣ್ಣು ಬೂದು ಹಾರ್ನ್ ಬಿಲ್ ಪೊಟರೆಯೊಳಗೆ ಹೋಗಿ ಸೇರಿಕೊಂಡು ತನ್ನದೇ ಹಿಕ್ಕೆಯಿಂದ ಮತ್ತು ಗಂಡು ಹಕ್ಕಿ ತಂದು ಕೊಡುವ ಹಸಿ ಮಣ್ಣಿನ ಉಂಡೆಗಳಿಂದ ತನ್ನ ಕೊಕ್ಕು ಹೊರಬರುವಷ್ಟು ಕಿಂಡಿಯನ್ನು ಬಿಟ್ಟು ಪೊಟರೆಯ ದ್ವಾರವನ್ನು ಒಳಗಿನಿಂದಲೇ ಮುಚ್ಚಿ ತನ್ನನ್ನು ತಾನೆ ಒಳಗೆ ಬಂಧಿಯಾಗಿಸಿಕೊಳ್ಳುತ್ತದೆ. ಇಂತಹ ಪೊಟರೆಯಲ್ಲಿ ಗರಿಷ್ಟ ಎಂದರೆ ಐದು ಮೊಟ್ಟೆಗಳನ್ನು ಇಟ್ಟು ಕಾವು ಕೊಡುವ ಕೆಲಸವನ್ನು ಮಾಡುತ್ತದೆ. ಹೀಗೆ ಸುಮಾರು ಇಪ್ಪತ್ತೊಂದು ದಿನಗಳಲ್ಲಿ ಮೊಟ್ಟೆಯೊಡೆದು ಮರಿಗಳು ಹೊರಬರುತ್ತವೆ. ಇಷ್ಟಾಗುವ ಹೊತ್ತಿಗೆ ಹೆಣ್ಣು ಹಕ್ಕಿಯ ರೆಕ್ಕೆಗಳೆಲ್ಲ ಉದುರಿಹೋಗಿ ಹಾರುವ ಶಕ್ತಿಯನ್ನೇ ಅದು ಕಳೆದುಕೊಂಡಿರುತ್ತದೆ. ಮುಂದೆ ಮೊಟ್ಟೆಯಿಟ್ಟ ನಲವತೈದು ದಿನಗಳಲ್ಲಿ ತಾಯಿ ಹಕ್ಕಿಗೆ ರೆಕ್ಕೆಗಳ ಮರುಹುಟ್ಟು ಆಗಿರುತ್ತದೆ. ಜೊತೆಗೆ ಮರಿ ಹಕ್ಕಿಗಳು ಬೆಳೆದು ಹಾರಿ ಹೋಗಲು ಸಿದ್ಧವಾಗಿರುತ್ತವೆ. ತಾಯಿ ಹಕ್ಕಿ ಮತ್ತು ಮರಿಗಳು ಪೊಟರೆಯ ಮುಚ್ಚಿದ ದ್ವಾರವನ್ನು ಕಿತ್ತು ಹೊರಬರುತ್ತವೆ. ವಿಶೇಷವೆಂದರೆ ಹೆಣ್ಣು ಹಕ್ಕಿ ಪೊಟರೆಯಲ್ಲಿ ಬಂಧಿಯಾಗಿದ್ದ ಅಷ್ಟೂ ದಿನಗಳು ಗಂಡು ಹಕ್ಕಿ ಅದಕ್ಕೆ ಅಗತ್ಯವಾದ ಆಹಾರ ಮುಂತಾದ ಪದಾರ್ಥಗಳನ್ನು ಗಂಡು ಹಕ್ಕಿ ಹೊತ್ತು ತಂದು ಒದಗಿಸುತ್ತಾ ತನ್ನ ಯಜಮಾನಿಕೆಯ ಜವಾಬ್ದಾರಿ ನಿಭಾಯಿಸುತ್ತದೆ.
ಕೇರಳ ಮತ್ತು ಅರುಣಾಚಲ ಪ್ರದೇಶಗಳ ರಾಜ್ಯ ಪಕ್ಷಿಯ ಸ್ಥಾನ ಬೂದು ಹಾರ್ನ್ ಬಿಲ್ಲುಗಳಿಗೆ ದೊರೆತಿದೆ. IUCN ಪಟ್ಟಿಯಲ್ಲಿ ಸುಲಭವಾಗಿ ಅಳಿವಿನ ಅಂಚಿಗೆ ತಲುಪುವ ಪ್ರಾಣಿ ವರ್ಗವೆಂದು ಬೂದು ಹಾರ್ನ್ ಬಿಲ್ಲುಗಳನ್ನು ದಾಖಲಿಸಿದ್ದಾರೆ.


No comments:
Post a Comment